ಆ್ಯಪ್ನಗರ

ನಾಳೆಯಿಂದ 'ಗೋವಾದಲ್ಲಿ ಉಳ್ಳಾಗಡ್ಡಿ ಸಾಹುಕಾರ'

ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳ ಜತೆ ನಾಟಕ ಪ್ರದರ್ಶನ ಆರಂಭನಾಳೆಯಿಂದ 'ಗೋವಾದಲ್ಲಿಉಳ್ಳಾಗಡ್ಡಿ ಸಾಹುಕಾರ' -ಕಲಾವಿದರಿಗಾಗಿ ವೃತ್ತಿ ರಂಗಭೂಮಿ ಚಟುವಟಿಕೆ ಅನಿವಾರ‍್ಯ-ವಿಧಾನ ...

Vijaya Karnataka 26 Nov 2020, 5:00 am
ಹುಬ್ಬಳ್ಳಿ: ಒಂಬತ್ತು ತಿಂಗಳಿಂದ ಸ್ಥಗಿತಗೊಂಡಿದ್ದ ನಾಟಕಗಳ ಪ್ರದರ್ಶನವನ್ನು ಕೋವಿಡ್‌-19 ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪುನರ್‌ ಆರಂಭಿಸಲಾಗುವುದು. ಹುಬ್ಬಳ್ಳಿ ಹಳೇ ಬಸ್‌ ನಿಲ್ದಾಣದ ಪಕ್ಕದ ನಾಟಕ ಮಂದಿರದಲ್ಲಿನ.27ರಿಂದ 'ಗೋವಾದಲ್ಲಿಉಳ್ಳಾಗಡ್ಡಿ ಸಾಹುಕಾರ' ಪ್ರದರ್ಶನ ನಡೆಯಲಿದೆ ಎಂದು ಕೆ.ಬಿ.ಆರ್‌. ಡ್ರಾಮಾ ಕಂಪನಿ ಮುಖ್ಯ ವ್ಯವಸ್ಥಾಪಕ ಚಿಂದೋಡಿ ಶಂಭುಲಿಂಗಪ್ಪ ತಿಳಿಸಿದರು.
Vijaya Karnataka Web goadalli ullagaddi swakar to begin tomorrow
ನಾಳೆಯಿಂದ 'ಗೋವಾದಲ್ಲಿ ಉಳ್ಳಾಗಡ್ಡಿ ಸಾಹುಕಾರ'


ಬುಧವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ನಾಟಕಗಳ ಪ್ರದರ್ಶನವಿಲ್ಲದೇ ವೃತ್ತಿ ಕಲಾವಿದರ ಬದುಕು ಕಷ್ಟಕರವಾಗಿದೆ. ಕುಟುಂಬ ನಿರ್ವಹಣೆ ಸಾಧ್ಯವಾಗದೇ ಬೇರೆ ಬೇರೆ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ನಡುವೆ ದಾನಿಗಳ ನೆರವಿನಿಂದ ಇಲ್ಲಿಯ ವರೆಗೆ ಜೀವನ ಸಾಗಿಸಿದ್ದೇವೆ. ಇದೇ ಪರಿಸ್ಥಿತಿ ಮುಂದುವರೆದರೆ, ಕಲಾವಿದರು ಬೀದಿಗೆ ಬರಬೇಕಾಗುತ್ತದೆ ಎಂದು ವಿಷಾದಿಸಿದರು.

ಕಲಾವಿದರ ರಕ್ಷಣೆಗಾಗಿ ವೃತ್ತಿ ರಂಗಭೂಮಿ ಮತ್ತೆ ತನ್ನ ಕಾರ್ಯ ಚಟುವಟಿಕೆ ಆರಂಭಿಸುವುದು ಅನಿವಾರ್ಯವಾಗಿದೆ. ಸರಕಾರ ಸೂಚಿಸಿರುವ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನ.27ರಿಂದ 'ಗೋವಾದಲ್ಲಿಉಳ್ಳಾಗಡ್ಡಿ ಸಾಹುಕಾರ' ನಾಟಕ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 2 ಗಂಟೆಗೆ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಚಾಲನೆ ನೀಡುವರು. ನಾಟಕ ಅಕಾಡೆಮಿ ಅಧ್ಯಕ್ಷ ನಾಟಕಕಾರ ಯಶವಂತ ಸರದೇಶಪಾಂಡೆ, ಐ.ಜಿ.ಸನದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕೆಬಿಆರ್‌ ಡ್ರಾಮಾ ಕಂಪನಿ ಮಾಲೀಕ ಚಿಂದೋಡಿ ಶ್ರೀಕಂಠೇಶ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿಇದ್ದರು.

ಏಕ ಗವಾಕ್ಷಿ ಪದ್ಧತಿ ಜಾರಿಯಾಗಲಿ
ನಾಟಕ ಕಂಪನಿಗಳ ಲೈಸೆನ್ಸ್‌ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಮಾಡಬೇಕು. ಇದರಿಂದ ಹಲವಾರು ಇಲಾಖೆಗಳಿಗೆ ಅಲೆದಾಡುವುದು ತಪ್ಪುತ್ತದೆ. ಈ ಹಿಂದೆ ಚಂದ್ರಶೇಖರ ಕಂಬಾರ ಅವರು ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಸಲಹೆ ಮಾಡಿದ್ದರು. ಇಂದಿನವರೆಗೂ ಜಾರಿಯಾಗಿಲ್ಲಎಂದು ಚಿಂದೋಡಿ ಶಂಭುಲಿಂಗಪ್ಪ ಆರೋಪಿಸಿದರು. ಅಗ್ನಿಶಾಮಕ ದಳದವರ ಲೈಸೆನ್ಸ್‌ಗೆ 50 ಸಾವಿರ ರೂ. ಶುಲ್ಕ ಇದ್ದರೆ, ಯಕ್ಷಗಾನಕ್ಕೆ ಅದು ಕೇವಲ 1,500 ರೂ. ಇದೆ. ನಾಟಕ ಕಂಪನಿಗಳಿಗೆ 50 ಸಾವಿರ ರೂ. ಹೊರೆ ಆಗುತ್ತಿದ್ದು ಅದನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ