ಆ್ಯಪ್ನಗರ

ಚಿನ್ನಾಭರಣ ಮರಳಿಸಿ ಪ್ರಮಾಣಿಕತೆ ಮೆರೆದ ಉದ್ಯೋಗಿ

ಕಲಘಟಗಿ:ಪಟ್ಟಣದ ಸೆಂಟ್ರಲ್‌ ಬ್ಯಾಂಕ್‌ ನಲ್ಲಿ ಗುರುವಾರ ಗ್ರಾಹಕರೊಬ್ಬರು ಬಿಟ್ಟುಹೋದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಬ್ಯಾಂಕ್‌ ಉದ್ಯೋಗಿ ಭೀಮಣ್ಣ ಬೇವಿನಗಿಡದ ಮರಳಿ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

Vijaya Karnataka 9 Jun 2019, 5:00 am
ಕಲಘಟಗಿ:ಪಟ್ಟಣದ ಸೆಂಟ್ರಲ್‌ ಬ್ಯಾಂಕ್‌ ನಲ್ಲಿ ಗುರುವಾರ ಗ್ರಾಹಕರೊಬ್ಬರು ಬಿಟ್ಟುಹೋದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಬ್ಯಾಂಕ್‌ ಉದ್ಯೋಗಿ ಭೀಮಣ್ಣ ಬೇವಿನಗಿಡದ ಮರಳಿ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
Vijaya Karnataka Web DRW-8 KLG 1
ಸೆಂಟ್ರಲ್‌ ಬ್ಯಾಂಕ್‌ ಉದ್ಯೋಗಿಯಾಗಿರುವ ಗ್ರಾಹಕರು ಮರೆತು ಬ್ಯಾಂಕ್‌ ನಲ್ಲಿ ಬಿಟ್ಟ ಹತ್ತು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಆಭರಣವನ್ನು ಬ್ಯಾಂಕ್‌ ಮ್ಯಾನೇಜರ್‌ ಸಮ್ಮುಖದಲ್ಲಿ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.


ಪಟ್ಟಣದ ಐಶ್ವರ್ಯ ಹೊಟೆಲ್‌ ಮಾಲಿಕರಾದ ರವಿ ಶೆಟ್ಟಿ ತಮ್ಮ ಲಾಕರ್‌ನಲ್ಲಿ ಇಟ್ಟ 10 ಲಕ್ಷ ರೂ ಮೌಲ್ಯದ ವಜ್ರದ ನಕಲೇಸ್‌ ತೆಗೆದುಕೊಂಡು ಮರೆತು ಬ್ಯಾಂಕ್‌ನಲ್ಲಿಯೇ ಬಿಟ್ಟು ಹೋಗಿದ್ದರು.ಇದನ್ನು ಬ್ಯಾಂಕ್‌ ಉದ್ಯೋಗಿ ಭೀಮಣ್ಣ ಬೇವಿನಗಿಡದ ನೋಡಿ ಮ್ಯಾನೇಜರ್‌ ಮಂಗಿಲಾಲಗೆ ತಿಳಿಸಿ ಗ್ರಾಹಕರನ್ನು ಕರೆಸಿ ಕೊಟ್ಟಿದ್ದಾರೆ.ಚಿನ್ನಾಭರರಣ ಮರಳಿಪಡೆದ ರವಿ ಶೆಟ್ಟಿ ಭೀಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಭೀಮಣ್ಣನ ಪ್ರಾಮಾಣಿಕತೆ ಹಾಗೂ ವೃತ್ತಿ ನಿಷ್ಠೆಗೆ ಬ್ಯಾಂಕ್‌ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿ ಅಭಿನಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ