ಆ್ಯಪ್ನಗರ

ರಂಗಿನ ಹಬ್ಬಕ್ಕೆ ವಿದಾಯ

ನವಲಗುಂದ: ಹೋಳಿ ಹಬ್ಬಕ್ಕೆ ಪ್ರಸಿದ್ದಿ ಪಡೆದ ಪಟ್ಟಣದಲ್ಲಿ ಭಾನುವಾರ ಬೆಳಗಿನ ಜಾವ ರಾಮಲಿಂಗ ಕಾಮದೇವರ ದಹನ ಮಾಡುವ ಮೂಲಕ ರಂಗಿನ ಹಬ್ಬಕ್ಕೆ ತೆರೆ ಎಳೆಯಲಾಯಿತು.

Vijaya Karnataka 25 Mar 2019, 5:00 am
ನವಲಗುಂದ: ಹೋಳಿ ಹಬ್ಬಕ್ಕೆ ಪ್ರಸಿದ್ದಿ ಪಡೆದ ಪಟ್ಟಣದಲ್ಲಿ ಭಾನುವಾರ ಬೆಳಗಿನ ಜಾವ ರಾಮಲಿಂಗ ಕಾಮದೇವರ ದಹನ ಮಾಡುವ ಮೂಲಕ ರಂಗಿನ ಹಬ್ಬಕ್ಕೆ ತೆರೆ ಎಳೆಯಲಾಯಿತು.
Vijaya Karnataka Web DRW-24-NVL-1
ನವಲಗುಂದ ಪಟ್ಟಣದ ವಿನಾಯಕ ಪೇಟೆಗೆ ರಾಮಲಿಂಗ ಕಾಮದೇವರು ಬಂದ ಸಂದರ್ಭದಲ್ಲಿ ದರ್ಶನಕ್ಕಾಗಿ ನೂಕು ನುಗ್ಗಲಾಗುತ್ತಿರುವ ದೃಶ್ಯ.


ಮಾ.18ರಂದು ಪ್ರತಿಷ್ಠಾಪನೆಗೊಂಡಿದ್ದ ರಾಮಲಿಂಗ ಕಾಮದೇರ ದರ್ಶನಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಜನ ಭಕ್ತರು ಆಗಮಿಸಿದ್ದರು. ಹುಣ್ಣಿಮೆ ದಿನದಂದು ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ಪಟ್ಟಣದ ನಾನಾ ಯವಕ ಸಂಘದವರು ತಂಪು ಪಾನೀಯ, ಪಲಾವ್‌, ಮೊಸರನ್ನ, ಮೊಸರವಲಕ್ಕಿ, ಪ್ರಸಾದ ವ್ಯವಸ್ಥೆ ಮಾಡಿದ್ದರು.

ಮಾ.24 ಸಂಜೆ ಸ್ಥಳೀಯ ವಿನಾಯಕ ಪೇಟೆಗೆ ರಾಮಲಿಂಗ ಕಾಮದೇರ ಮೂರ್ತಿ ಬರುತ್ತಿದ್ದಂತೆ ಆ ಓಣಿಯ ಜನತೆ ರಸ್ತೆಯುದ್ದಕ್ಕೂ ರಂಗೋಲಿ ಹಾಕಿ ಸಿಂಗರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ