ಆ್ಯಪ್ನಗರ

ಮಹಿಳೆಯರ ರಕ್ಷಣೆಯಲ್ಲಿ ಸರಕಾರಗಳು ವಿಫಲ : ಆರೋಪ

ಧಾರವಾಡ: ಹೈದರಾಬಾದ್‌ನಲ್ಲಿನಡೆದ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ನಂತರ ಈ ಪ್ರಕರಣದ ಆರೋಪಿಗಳ ಎನ್‌ಕೌಂಟರ್‌ ಘಟನೆ ಇಡೀ ದೇಶದ ಜನರನ್ನು ತಲ್ಲಣಗೊಳಿಸಿವೆ ಎಂದು ಎಸ್‌ಯುಸಿಐ ಜಿಲ್ಲಾಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ಹೇಳಿದ್ದಾರೆ.

Vijaya Karnataka 9 Dec 2019, 5:00 am
ಧಾರವಾಡ: ಹೈದರಾಬಾದ್‌ನಲ್ಲಿನಡೆದ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ನಂತರ ಈ ಪ್ರಕರಣದ ಆರೋಪಿಗಳ ಎನ್‌ಕೌಂಟರ್‌ ಘಟನೆ ಇಡೀ ದೇಶದ ಜನರನ್ನು ತಲ್ಲಣಗೊಳಿಸಿವೆ ಎಂದು ಎಸ್‌ಯುಸಿಐ ಜಿಲ್ಲಾಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ಹೇಳಿದ್ದಾರೆ.
Vijaya Karnataka Web governments fail to protect women allegations
ಮಹಿಳೆಯರ ರಕ್ಷಣೆಯಲ್ಲಿ ಸರಕಾರಗಳು ವಿಫಲ : ಆರೋಪ


ಈ ಕುರಿತು ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಂಡವಾಳಶಾಹಿ ವರ್ಗ ಮತ್ತು ಅದರ ಸೇವಕ ಸರಕಾರಗಳು, ಮದ್ಯ, ಮಾದಕ ವಸ್ತುಗಳು, ಅಶ್ಲೀಲತೆ, ನೀಲಿ ಚಿತ್ರಗಳು, ಲೈಂಗಿಕ ಗುಲಾಮಗಿರಿ ಮನೋಭಾವ ಇತ್ಯಾದಿಗಳನ್ನು ಹರಡುವ ಮೂಲಕ ಯುವ ಸಮೂಹದ ಅಧಃಪತನಕ್ಕೆ ಕಾರಣವಾಗಿವೆ. ಇದರಿಂದಾಗಿ ಎಲ್ಲವಯಸ್ಸಿನ ಮಹಿಳೆಯರ ಅಮಾನುಷ ಅತ್ಯಾಚಾರ, ಗುಂಪು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಇವು ಜನಸಾಮಾನ್ಯರಲ್ಲಿನೋವು, ಸಂಕಟ ಮತ್ತು ಆಕ್ರೋಶ ಉಂಟುಮಾಡುತ್ತಿವೆ ಎಂದಿದ್ದಾರೆ.

ಅಪರಾಧಗಳು ಪದೇ ಪದೇ ಮರುಕಳಿಸುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸುವಲ್ಲಿಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಲ್ಲಿಸಂಪೂರ್ಣ ವಿಫಲವಾಗಿವೆ ಎಂದು ದೂರಿದ್ದಾರೆ.

ಆರೋಪಿಗಳನ್ನು ಹತ್ಯೆಗೈದ ಘಟನೆ ಜನತೆಯಲ್ಲಿಹಲವಾರು ಗಂಭೀರ ಪ್ರಶ್ನೆಗಳನ್ನು ಮತ್ತು ಸಂಶಯಗಳನ್ನು ಹುಟ್ಟುಹಾಕಿವೆ. ಪೊಲೀಸರು ತಮ್ಮ ಹಿಂದಿನ ಬೇಜವಾಬ್ದಾರಿತನ ಮುಚ್ಚಿಹಾಕಿ ತಾವೇ ಹೀರೋಗಳಾಗುವುದಕ್ಕಾಗಿ ಈ ಎನ್‌ಕೌಂಟರ್‌ ಮಾಡಿದ್ದಾರೆ ಎಂಬ ಚರ್ಚೆಯೂ ಆರಂಭವಾಗಿದೆ ಎಂದ ಅವರು, ಈ ಪ್ರಕರಣದ ಕುರಿತು ಸಮರ್ಪಕ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡುಬಂದಲ್ಲಿಸಂಬಂಧಿಸಿದ ಪೊಲೀಸರನ್ನು ಕೂಡ ಶಿಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿಆರೋಪಿಗಳನ್ನು ತ್ವರಿತವಾಗಿ ಬಂಧಿಸಿ, ವಿಚಾರಣೆಗೊಳಪಡಿಸಿ ಕಠಿಣ ಶಿಕ್ಷೆ ನೀಡಲು ಅಗತ್ಯ ಮತ್ತು ಸಮರ್ಪಕ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ