ಆ್ಯಪ್ನಗರ

ಹುಬ್ಬಳ್ಳಿ: ಕಲಘಟಗಿ‌ ಸರಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಎರಡು ಜೀವ ಬಲಿ

ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ಪ್ರತಿಭಟನೆ ಮುಂದುವರೆಸಿದರು. ಪ್ರತಿಭಟನೆ ತೀವ್ರತೆ ಹೆಚ್ಚಾಗಿದ್ರಿಂದ ಘಟನಾ ಸ್ಥಳಕ್ಕೆ ಧಾರವಾಡ ಡಿಎಚ್ಓ ಕರಿಗೌಡರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Lipi 30 May 2022, 8:23 pm
ಹುಬ್ಬಳ್ಳಿ,; ವೈದ್ಯರ ನಿರ್ಲಕ್ಷ್ಯಕ್ಕೆ ಎರಡು ಅಮಾಯಕ ಜೀವಗಳು ಬಲಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಗಟಗಿ ತಾಲೂಕಿನ ಸಿಗ್ಗಟ್ಟಿ ತಾಂಡಾದಲ್ಲಿ ನಡೆದಿದೆ.
Vijaya Karnataka Web govt hospital doctor mistake two dead in kalghatgi hubballi
ಹುಬ್ಬಳ್ಳಿ: ಕಲಘಟಗಿ‌ ಸರಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಎರಡು ಜೀವ ಬಲಿ


ಪಾರ್ವತಿ ಲಾಮಾಣಿ ಎಂಬಾಕಿಯೇ ಮೃತ ಗರ್ಭಿಣಿ ಆಗಿದ್ದಾಳೆ. ಈಗಾಗಲೇ ಮೂರು ಮಕ್ಕಳ ತಾಯಿಯಾಗಿರೋ ಮೃತ ಪಾರ್ವತಿ ನಾಲ್ಕನೇ ಮಗುವಿನ ಡೆಲಿವರಿಗಾಗಿ ಕಲಘಟಗಿ ತಾಲೂಕಾಸ್ಪತ್ರೆಗೆ ಬಂದಿದ್ದರು. ಈ ವೇಳೆ ತಾಲೂಕಾಸ್ಪತ್ರೆ ವೈದ್ಯರು ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡಲು ತಡವಾಗಿದ್ದರಿಂದ ಡೆಲೆವರಿಗೂ ಮೊದಲೇ ಮಗು ಸಾವನ್ನಪ್ಪಿದೆ. ಬಳಿಕ ಗರ್ಭಿಣಿ ತಾಯಿಗೆ ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ.

ಜೆಡಿಎಸ್‌ನಲ್ಲಿದ್ದುಕೊಂಡು ಕಾಂಗ್ರೆಸ್ಸನ್ನು ಸರ್ವನಾಶ ಮಾಡಿದ್ದೇ ಬಸವರಾಜ ಹೊರಟ್ಟಿ: ಕಾಂಗ್ರೆಸ್‌ ನಾಯಕ ದೀಪಕ್‌ ಚಿಂಚೋರೆ

ಈ ವೇಳೆ ಮಾರ್ಗ ಮಧ್ಯೆಯೇ ಪಾರ್ವತಿ ಸಾವನ್ನಪ್ಪಿದ್ದಾಳೆ. ಅದಾದ ಬಳಿಕ ಮೃತ ಪಾರ್ವತಿ ಕುಟುಂಬಸ್ಥರು ಕಲಘಟಗಿ ತಾಲೂಕಾಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ ಮಾಡಿದರು. ಜೊತೆಗೆ ಸುಮಾರು ಇನ್ನೂರರಿಂದ ಮುನ್ನೂರು ಜನ ಸೇರಿ ಬೆಳಗ್ಗೆಯಿಂದ ಧರಣಿ ನಡೆಸಿ ನ್ಯಾಯಕ್ಕಾಗಿ ಬೇಡಿಕೆಯನ್ನಿಟ್ಟಿದರು. ಈ ವೇಳೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಲಗಟಗಿ ಶಾಸಕ ಸಿ ಎಂ ನಿಂಬಣ್ಣವರ್ 10 ಸಾವಿರ ಹಣ ನೀಡುತ್ತೇನೆ. ಶವ ಸಂಸ್ಕಾರ ಮಾಡಿ ಅಂತ ಮನವಿ ಮಾಡಿದರು.

ಅದಕ್ಕೂ ಜಗ್ಗದೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ಪ್ರತಿಭಟನೆ ಮುಂದುವರಿಸಿದರು. ಪ್ರತಿಭಟನೆ ತೀವ್ರತೆ ಹೆಚ್ಚಾಗಿದ್ರಿಂದ ಘಟನಾ ಸ್ಥಳಕ್ಕೆ ಧಾರವಾಡ ಡಿಎಚ್ಓ ಕರಿಗೌಡರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಡಿಎಚ್ಓ ಕಡಿಗೌಡರ್ ಜೊತೆಗೆ ಗ್ರಾಮಸ್ಥರು ಸ್ಥಳದಲ್ಲೇ ಪರಿಹಾರ ನೀಡಬೇಕು ಅಂತ ಪಟ್ಟು ಹಿಡಿದರು. ಇದನ್ನ ಗಮನಿಸಿದ ಡಿಎಚ್ಓ ಕರಿಗೌಡರ್ ಘಟನೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ.

ಮೇ 31ಕ್ಕೆ ಪೆಟ್ರೋಲ್ ಬಂಕ್‌ ಮಾಲೀಕರ ಮುಷ್ಕರ: ಇಂಧನ ತುಂಬಿಸಿಕೊಳ್ಳಲು ಬಂಕ್‌ಗಳ ಮುಂದೆ ಉದ್ದದ ಸಾಲು

ಜೊತೆಗೆ ಘಟನೆ ಬಗ್ಗೆ ಒಂದು ತಂಡ ರಚಿಸಿ ಕೂಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದರು. ಅಷ್ಟೇ ಅಲ್ಲದೆ ಘಟನಾ ಸ್ಥಳಕ್ಕೆ ಕಲಗಟಗಿ ತಹಸೀಲ್ದಾರ್ ಯಲ್ಲಪ್ಪ ಗೋಣೆನ್ನವರ್ ಕೂಡಾ ಭೇಟಿ ನೀಡಿ ಸರಕಾರದ ಮಟ್ಟದಲ್ಲಿ ಚರ್ಚಿಸಿ ತಾಯಿ, ಮಗುವಿಗೆ ಆದ ಅನ್ಯಾಯಕ್ಕೆ ನ್ಯಾಯ ವದಗಿಸುತ್ತೇವೆ ಅಂತ ಭರವಸೆ ನೀಡಿದರು. ಧಾರವಾಡ ಜಿಲ್ಲೆ ಕಲಘಟಗಿ‌ ತಾಲೂಕ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ತೋರಿದ ನಿರ್ಲಕ್ಷ್ಯಕ್ಕೆ ಈ ಎಡವಟ್ಟು ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ