ಆ್ಯಪ್ನಗರ

ಪದವೀಧರ ಚುನಾವಣೆ: ಬಿಜೆಪಿ ಕಾರ್ಯಕರ್ತರ ಸಭೆ

ಹುಬ್ಬಳ್ಳಿ : ಮುಂಬರುವ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ವರಿಷ್ಠರು ಕೈಗೊಳ್ಳುವ ಅಭ್ಯರ್ಥಿಯನ್ನು ಒಮ್ಮತದಿಂದ ಬೆಂಬಲಿಸುವುದಾಗಿ ಆಕಾಂಕ್ಷಿಗಳು ಅಭಿಪ್ರಾಯ ಸಂಗ್ರಹ ಸಮಿತಿಗೆ ಭರವಸೆ ನೀಡಿದ್ದಾರೆ.

Vijaya Karnataka 18 Oct 2019, 5:00 am
ಹುಬ್ಬಳ್ಳಿ : ಮುಂಬರುವ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ವರಿಷ್ಠರು ಕೈಗೊಳ್ಳುವ ಅಭ್ಯರ್ಥಿಯನ್ನು ಒಮ್ಮತದಿಂದ ಬೆಂಬಲಿಸುವುದಾಗಿ ಆಕಾಂಕ್ಷಿಗಳು ಅಭಿಪ್ರಾಯ ಸಂಗ್ರಹ ಸಮಿತಿಗೆ ಭರವಸೆ ನೀಡಿದ್ದಾರೆ.
Vijaya Karnataka Web graduation election bjp activists meeting
ಪದವೀಧರ ಚುನಾವಣೆ: ಬಿಜೆಪಿ ಕಾರ್ಯಕರ್ತರ ಸಭೆ


ನಗರದ ಗೋಕುಲ ರಸ್ತೆ ಖಾಸಗಿ ಹೋಟೆಲ್‌ದಲ್ಲಿಗುರುವಾರ ನಡೆದ ಚುನಾವಣೆ ಅಭ್ಯರ್ಥಿ ಆಯ್ಕೆ ಅಭಿಪ್ರಾಯ ಸಂಗ್ರಹ ಸಭೆಯಲ್ಲಿಆಕಾಂಕ್ಷಿಗಳಾದ ಸಿಎಂ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಲಿಂಗರಾಜ್‌ ಪಾಟೀಲ, ವೀರೇಶ ಸಂಗಳದ ಹಾಗೂ ಹಾಲಿ ಎಂಎಲ್‌ಸಿ ಎಸ್‌.ವಿ. ಸಂಕನೂರ ಅವರು, ತಾವು ಚುನಾವಣೆ ಆಕಾಂಕ್ಷಿಗಳಾಗಿದ್ದು, ಇದುವರೆಗೂ ಪಕ್ಷ ವಹಿಸಿದ ಎಲ್ಲಾಜವಾಬ್ದಾರಿಗಳನ್ನು ಮತ್ತು ಸಂಘಟನೆಯಲ್ಲಿತೊಡಗಿಸಿಕೊಂಡಿದ್ದನ್ನು ವೀಕ್ಷಕರಿಗೆ ಮನವರಿಕೆ ಮಾಡಿಕೊಟ್ಟರು. ಅಂತಿಮವಾಗಿ ಪಕ್ಷದ ನಾಯಕರು ಅಭ್ಯರ್ಥಿ ಆಯ್ಕೆಯನ್ನು ಸ್ವಾಗತಿಸಿ ಅವರ ಗೆಲವಿಗೆ ಕಟಿಬದ್ಧರಾಗಿ ದುಡಿಯುತ್ತೇವೆ ಎಂದು ಸಹಮತ ವ್ಯಕ್ತಪಡಿಸಿದರು.

ಆಯ್ಕೆ ವರಿಷ್ಠರ ತೀರ್ಮಾನ : ಪೂರ್ವ, ಪಶ್ಚಿಮ ಮತ್ತು ಸೆಂಟ್ರಲ್‌ ಕ್ಷೇತ್ರಕ್ಕೆ ಸಂಬಂಧಿಸಿ ನಡೆದ ಪ್ರತ್ಯೇಕ ಸಭೆಯಲ್ಲೂಪದಾಧಿಕಾರಿಗಳು ಅಭ್ಯರ್ಥಿ ಆಯ್ಕೆಯನ್ನು ವರಿಷ್ಠರೇ ತೀರ್ಮಾನಕ್ಕೆ ಬಿಡುತ್ತೇವೆ ಎಂದು ತಿಳಿಸಿದರು. ಹುಬ್ಬಳ್ಳಿ-ಧಾರವಾಡದವರಿಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು. ಯಾರೇ ಅಭ್ಯರ್ಥಿಯಾದರೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಹೊಣೆ ನಮ್ಮದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಘಟನೆಗೆ ಆದ್ಯತೆ ನೀಡಿ : ಇದಕ್ಕೂ ಮುನ್ನ ಜರುಗಿದ ಬಹಿರಂಗ ಸಭೆಯಲ್ಲಿಅಭಿಪ್ರಾಯ ಸಂಗ್ರಹ ಸಮಿತಿ ಅಧ್ಯಕ್ಷರೂ ಆದ ಉಪಾಧ್ಯಕ್ಷ ಭಾನುಪ್ರಕಾಶ್‌ ಮಾತನಾಡಿ, ಚುನಾವಣೆ ಸ್ಪರ್ಧೆ ಮಾಡಬೇಕೆಂಬುದು ಪ್ರತಿಯೊಬ್ಬಕಾರ್ಯಕರ್ತರಿಗೆ ಆಸೆ ಇರುವುದು ಸಹಜ. ಆಸೆಯನ್ನು ನಮ್ಮದಾಗಿಸಿಕೊಳ್ಳಲು ಪಕ್ಷದ ನೀತಿಯನ್ನು ಪರಿಪಾಲಿಸಬೇಕಾಗುತ್ತದೆ. ಎಲ್ಲರಿಗೂ ಒಂದಿಲ್ಲೊಂದು ಅವಕಾಶ ಸಿಗುತ್ತದೆ. ಪಕ್ಷದ ಸಂಘಟನೆಯ ಮೊದಲ ಆದ್ಯತೆಯಾಗಿರಲಿ ಎಂದು ಕಿವಿಮಾತು ಹೇಳಿದರು.

ಪದವೀಧರ ಮತಕ್ಷೇತ್ರದ ಚುನಾವಣೆಗೆ ಬೇರೆ ಪಕ್ಷಗಳಿಗಿಂತ ಬಿಜೆಪಿಯಲ್ಲಿಭಾರಿ ಪೈಪೊಟಿ ಇದೆ. ಪಕ್ಷದ ಅಭ್ಯರ್ಥಿ ಆಯ್ಕೆವಿಳಂಬವಾದರೂ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆ ಕಾರ್ಯಕರ್ತರದ್ದು ಎಂದು ತಿಳಿಸಿದರು.

ಬೇರೆ ಪಕ್ಷದಲ್ಲಿಅಭ್ಯರ್ಥಿ ಆಯ್ಕೆ ಬಹುತೇಕ ಖಚಿತವಾಗಿದೆ. ಆದರೆ ಬಿಜೆಪಿಯಲ್ಲಿಸಂಪ್ರದಾಯದಂತೆ ಕಾರ್ಯಕರ್ತರ ಅಭಿಪ್ರಾಯ ಕ್ಕೆ ಮನ್ನಣೆ ನೀಡಲಾಗುತ್ತದೆ. ಈ ಎಲ್ಲಪ್ರಕ್ರಿಯೆಗಳು ಮುಗಿಯಲು ವಿಳಂಬವಾಗುತ್ತದೆ. ಕಾರ್ಯಕರ್ತರು ಮನಸ್ಸು ಮಾಡಿದರೆ ಪಕ್ಷದ ಅಭ್ಯರ್ಥಿ ಗೆಲುವು ನಮ್ಮದಾಗಲಿದೆ. ಈ ಕ್ಷೇತ್ರ ಮೊದಲಿನಂದಲೂ ಬಿಜೆಪಿಯದ್ದೆ. ವಿಧಾನ ಪರಿಷತ್‌ ಗೆ ಆಯ್ಕೆ ಮಾಡಿದ ಮೊದಲ ಕ್ಷೇತ್ರವೂ ಇದಾಗಿದೆ. ಇದನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಶೂನ್ಯ ಬಂಡವಾಳದಿಂದ ಪ್ರಾರಂಭವಾದ ಬಿಜೆಪಿಗೆ ದೇಶಭಕ್ತಿಯೇ ಬಂಡವಾಳ. ಭದ್ರತೆ, ಸಾರ್ವಜನಿಕ ಸ್ವಾತಂತ್ರ್ಯ, ಮಣ್ಣಿನ ಗೌರವ, ಸಂಸ್ಕೃತಿ ಕುರಿತಾಗಿ ಜನರಲ್ಲಿಭಾವನೆಗಳನ್ನು ಅರಳಿಸಿ, ಅವರನ್ನು ಸೆಳೆಯುವಲ್ಲಿಯಶಸ್ವಿಯಾಗಿದೆ. ಕೇಂದ್ರ, ರಾಜ್ಯದಲ್ಲಿಪಕ್ಷ ಅಧಿಕಾರದಲ್ಲಿದೆ. ಇದು ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿಸಿದ್ದು, ಸ್ವಯಂದ ಮೂಲಕ ಅಧಿಕಾರದ ಜತೆಗ ಪಕ್ಷದ ಸಂಘಟನೆ ಮುಂದಾಗಬೇಕೆಂದು ಹೇಳಿದರು.

ಇಂದು ಅಥವಾ ನಾಳೆ ಪಟ್ಟಿ: ಸಭೆಗೂ ಮುನ್ನ ಮಾಧ್ಯಮದವರ ಜತೆ ಮಾತನಾಡಿದ ಭಾನುಪ್ರಕಾಶ್‌, ಹಾವೇರಿ, ಉತ್ತರ ಕನ್ನಡ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿನ ಕಾರ್ಯಕರ್ತರ ಪಾರದರ್ಶಕ ಅಭಿಪ್ರಾಯ ಸಂಗ್ರಹಿಸಿ, ಪರಿಪೂರ್ಣ ಪಟ್ಟಿಯನ್ನು ಇದೇ ತಿಂಗಳು 18 ಅಥವಾ 19 ರಂದು ಪಕ್ಷದ ಅಧ್ಯಕ್ಷರಿಗೆ ಸಲ್ಲಿಸಲಿದ್ದೇವೆ ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ