ಆ್ಯಪ್ನಗರ

ಗಾಯಾಳುಗಳಿಗೆ ವಿದ್ಯಾರ್ಥಿಗಳಿಂದ ಧನಸಹಾಯ

ಧಾರವಾಡ : ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ದುರಂತದಲ್ಲಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಹುಬ್ಬಳ್ಳಿ ವಿದ್ಯಾನಗರದ ಕೆಎಲ್‌ಇ ಐಎಂಎಸ್‌ಆರ್‌ ಎಂಬಿಎ ಕಾಲೇಜು ವತಿಯಿಂದ ಭಾನುವಾರ ಧನ ಸಹಾಯ ನೀಡಲಾಯಿತು.

Vijaya Karnataka 2 Apr 2019, 5:00 am
ಧಾರವಾಡ : ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ದುರಂತದಲ್ಲಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಹುಬ್ಬಳ್ಳಿ ವಿದ್ಯಾನಗರದ ಕೆಎಲ್‌ಇ ಐಎಂಎಸ್‌ಆರ್‌ ಎಂಬಿಎ ಕಾಲೇಜು ವತಿಯಿಂದ ಭಾನುವಾರ ಧನ ಸಹಾಯ ನೀಡಲಾಯಿತು.
Vijaya Karnataka Web DRW-01RANGA04
ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಟ್ಟಡ ದುರಂತದಲ್ಲಿ ಹಾಯಗೊಂಡ ದಂಪತಿಗಳಿಗೆ ವಿದ್ಯಾನಗರದ ಕೆಎಲ್‌ಇ ಐಎಂಎಸ್‌ಆರ್‌ ಎಂಬಿಎ ಕಾಲೇಜು ವತಿಯಿಂದ ಧನ ಸಹಾಯ ನೀಡಲಾಯಿತು.


ಮಾ.19 ರಂದು ಸಂಭವಿಸಿದ ದುರಂತದಲ್ಲಿ ನಾಲ್ಕುದಿನಗಳ ನಂತರ ಹೊರಬಂದ ದಂಪತಿ ದಾಖಲು ಕೋಕರೆ ಮತ್ತು ಸಂಗೀತ ಕೋಕರೆ ಅವರಿಗೆ 11 ಸಾವಿರ.ರೂ ಹಾಗೂ ಮತ್ತೋರ್ವ ಗಾಯಾಳು ಸವಿತ ಆರಡೆ ಅವರಿಗೆ 6 ಸಾವಿರ ರೂ.ಗಳನ್ನು ನೀಡುವ ಜತೆಗೆ ಹಣ್ಣು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ವೇಳೆ ಕಾಲೇಜಿನ ನಿರ್ದೇಶಕ ಡಾ.ಪ್ರಸಾದ ರೋಡಗಿ ಮಾತನಾಡಿ, 'ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಂದ ವರದಿ ನೋಡಿ ನಮ್ಮ ವಿದ್ಯಾರ್ಥಿಗಳು ಕೈಲಾದ ಸಹಾಯ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂಗ್ರಹಿಸಿದ ಹಣದಿಂದ ಸಹಾಯ ಮಾಡಲಾಗಿದೆ ನಮ್ಮ ವಿದ್ಯಾರ್ಥಿಗಳ ಕೆಲಸ ಹೆಮ್ಮೆ ತಂದಿದೆ ಇನ್ನೂ ಹೆಚ್ಚಿನ ಸಹಾಯ ಮಾಡಲು ಶ್ರಮಿಸುತ್ತೇವೆ 'ಎಂದರು.

ಜಿಲ್ಲಾ ಆಸ್ಪತ್ರೆಯ ಆರ್‌ಎಂಒ ಡಾ.ಕಳಸಗೌಡರ, ಡಾ.ರಾಜೇಂದ್ರ ಪ್ರಸಾದ, ಮುಖಂದ ಮಿಶ್ರಾ, ವಿದ್ಯಾರ್ಥಿಗಳಾದ ವಿನಯ ಶೇಠ, ಚಿಂತಾಮಣಿ ವಿ. ಜೋಶಿ, ನದೀಮ ಅಮ್ಮಿನಗಡ, ಎಸ್‌.ಸಚಿನ ಇದ್ದರು.

ವಿಕ ವರದಿ ನೋಡಿ ಸಹಾಯ

ಮಾ.27 ರಂದು ವಿಕದಲ್ಲಿ ' ನಾವು ಆಸ್ಪತ್ರೆಯಲ್ಲಿದ್ದೇವೆ, ಮಕ್ಕಳ ಗತಿ ಏನು '? ಎಂಬ ಶೀರ್ಷಿಕೆಯಡಿ ಕಟ್ಟಡ ದುರಂತದಲ್ಲಿ ಗಾಯಗೊಂಡ ಗಾಯಾಳುಗಳ ಬಗ್ಗೆ ವರದಿ ಮಾಡಲಾಗತ್ತು. ಈ ವರದಿ ಓದಿದ ಹಲವರು ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ದಾಖಲು ಕೋಕರೆ ಮತ್ತು ಸಂಗೀತಾ ಕೋಕರೆ ದಂಪತಿಗೆ ಸಹಾಯ ಮಾಡುತ್ತಿರುವುದನ್ನು ತಿಳಿಸಿದ ದಾಖಲು ಕೋಕರೆ ವಿಕ ಕಳಕಳಿಗೆ ಧನ್ಯವಾದ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ