ಆ್ಯಪ್ನಗರ

17ಕ್ಕೆ ಗವಾಯಿಗಳ ಪುಣ್ಯಸ್ಮರಣೆ

ಧಾರವಾಡ : ನಗರದ ಆಲೂರು ವೆಂಕಟರಾವ್‌ ಸಾಂಸ್ಕೃತಿಕ ಭವನದಲ್ಲಿಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿಸೆ.17 ರಂದು ಸಂಜೆ 6ಕ್ಕೆ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿಗಳ 9ನೇ ಪುಣ್ಯಸ್ಮರಣೆ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ.

Vijaya Karnataka 15 Sep 2019, 5:00 am
ಧಾರವಾಡ : ನಗರದ ಆಲೂರು ವೆಂಕಟರಾವ್‌ ಸಾಂಸ್ಕೃತಿಕ ಭವನದಲ್ಲಿಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿಸೆ.17 ರಂದು ಸಂಜೆ 6ಕ್ಕೆ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿಗಳ 9ನೇ ಪುಣ್ಯಸ್ಮರಣೆ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ.
Vijaya Karnataka Web gwaiis commemoration for the 17th
17ಕ್ಕೆ ಗವಾಯಿಗಳ ಪುಣ್ಯಸ್ಮರಣೆ


ಅಂದಿನ ಸಮಾರಂಭದಲ್ಲಿ ವೈದ್ಯ ಡಾ.ಸುಧೀರ ಜಂಬಗಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಹಿರಿಯ ಸೀತಾರವಾದಕ ಪಂ.ಶ್ರೀನಿವಾಸ ಜೋಶಿ ಅಧ್ಯಕ್ಷತೆ ವಹಿಸುವರು. ಪುಣೆಯ ರಯೀಸ ಬಾಲೇಖಾನ್‌ ಹಾಗೂ ಬೆಂಗಳೂರಿನ ಹಫೀಜ್‌ ಬಾಲೇಖಾನ್‌ ಜುಗಲ್‌ಬಂದಿ ಸೀತಾರವಾದನ ಮಾಡುವರು. ಇವರಿಗೆ ತಬಲಾದಲ್ಲಿಡಾ.ರವಿಕಿರಣ ನಾಕೋಡ್‌ ಸಾಥ್‌ ನೀಡುವರು.

ಗದಗದ ಶ್ರೀ ವಿರೇಶ್ವರ ಪುಣ್ಯಾಶ್ರಮದ ಪ್ರಾಧ್ಯಾಪಕ ವೆಂಕಟೇಶ ಆಲ್ಕೋಡ್‌ ಅವರ ಹಿಂದೂಸ್ತಾನಿ ಗಾಯನದಲ್ಲಿಶರಣಕುಮಾರ ಘುತ್ತರಗಿ ತಬಲಾ ಹಾಗೂ ಗಂಗಾಧರ ಜಿ. ಹಾರ್ಮೊನಿಯಂನಲ್ಲಿಸಾಥ್‌ ನೀಡವರು. ಮಹಾಬಳೇಶ್ವರ ಹಾಸಿನಾಳ, ಪಂ.ಡಿ.ಕುಮಾರದಾಸ್‌, ಶಂಕರ ಕುಂಬಿ ಉಪಸ್ಥಿತರಿರುವರು ಎಂದು ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಎಂ.ವೆಂಕಟೇಶಕುಮಾರ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ