ಆ್ಯಪ್ನಗರ

ಅರ್ಧತಲೆ ನೋವು: ತಿಳಿವಳಿಕೆ ಕಾರ್ಯಾಗಾರ

ಹುಬ್ಬಳ್ಳಿ : ಆಹಾರ ಪದ್ಧತಿ, ಒತ್ತಡ ಭರಿತ ಜೀವನ ಶೈಲಿಯಿಂದಾಗಿ ಇಂದು ಜಗತ್ತಿನ ಶೇ 14ರಷ್ಟು ಜನರು ಮೈಗ್ರೇನ್‌ (ಅರ್ಧ ತಲೆನೋವು)ನಿಂದ ಬಳಲುತಿದ್ದರೇ ರಾಜ್ಯದಲ್ಲಿ ಶೇ 20ರಷ್ಟು ನರು ಕಾಯಿಲೆ ಪೀಡಿತರಾಗಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಪಡೆದಲ್ಲಿ ಮೈಗ್ರೇನ್‌ನಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಬಾಲಾಜಿ ನರರೋಗ ವಿಜ್ಞಾನ ಸಂಸ್ಥೆ ಚೇರಮನ್‌ ಡಾ.ಎಸ್‌. ಕ್ರಾಂತಿಕಿರಣ ಹೇಳಿದರು.

Vijaya Karnataka 23 Jul 2019, 5:00 am
ಹುಬ್ಬಳ್ಳಿ : ಆಹಾರ ಪದ್ಧತಿ, ಒತ್ತಡ ಭರಿತ ಜೀವನ ಶೈಲಿಯಿಂದಾಗಿ ಇಂದು ಜಗತ್ತಿನ ಶೇ 14ರಷ್ಟು ಜನರು ಮೈಗ್ರೇನ್‌ (ಅರ್ಧ ತಲೆನೋವು)ನಿಂದ ಬಳಲುತಿದ್ದರೇ ರಾಜ್ಯದಲ್ಲಿ ಶೇ 20ರಷ್ಟು ನರು ಕಾಯಿಲೆ ಪೀಡಿತರಾಗಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಪಡೆದಲ್ಲಿ ಮೈಗ್ರೇನ್‌ನಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಬಾಲಾಜಿ ನರರೋಗ ವಿಜ್ಞಾನ ಸಂಸ್ಥೆ ಚೇರಮನ್‌ ಡಾ.ಎಸ್‌. ಕ್ರಾಂತಿಕಿರಣ ಹೇಳಿದರು.
Vijaya Karnataka Web half pain a knowledge workshop
ಅರ್ಧತಲೆ ನೋವು: ತಿಳಿವಳಿಕೆ ಕಾರ್ಯಾಗಾರ


ವಿಶ್ವ ಮೆದಳು ದಿನಾಚರಣೆ ಅಂಗವಾಗಿ ಬಾಲಾಜಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಮೈಗ್ರೇನ್‌ ಕುರಿತಾಗಿ ತಿಳಿವಳಿಕೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೈಗ್ರೇನ್‌ ನೋವು ಪುರುಷರಗಿಂತಲೂ ಹೆಚ್ಚಾಗಿ ಹೆಣ್ಣು ಮಕ್ಕಳಲ್ಲಿ ಈ ಕಾಯಿಲೆ ಕಂಡು ಬರುತ್ತಿದೆ. ಈ ಕಾಯಿಲೆ ಸಾಮಾನ್ಯವಾಗಿ 18-40 ವರ್ಷ ವಯೋಮಿತಿಯಲ್ಲಿ ಕಂಡು ಬರುತ್ತದೆ. ಇದರ ಪತ್ರೆ ಹಚ್ಚುವಿಕೆ ಹಾಗೂ ಸರಿಯಾದ ಚಿಕಿತ್ಸೆ ಈವರೆಗೆ ಲಭ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಆಹಾರದಲ್ಲಿ ಕೊಬ್ಬಿನಾಂಶ, ಉಪ್ಪಿನ ಅಂಶ ಹೆಚ್ಚಾದಾಗ, ಅಲ್ಲದೇ ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಈ ಕಾಯಿಲೆ ಕಂಡು ಬರುತ್ತದೆ. ದುರ್ಗಂಧ ವಾಸನೆ ಸೇವನೆಯಿಂದಲೂ ಈ ಮೈಗ್ರೇನ್‌ ಕಾಣಿಸಿಕೊಳ್ಳಲಿದೆ ಎಂದು ಕ್ರಾಂತಿಕಿರಣ್‌ ಹೇಳಿದರು.

ಮದ್ಯಸೇವನೆ, ಕೆಲ ಚಾಕೋಲೇಟ್‌ಗಳ ಸೇವನೆ ಹಾಗೂ ಮಂದ ಬೆಳಕಿನ ಕೆಲಸ ಮಾಡಿದಾಗಲೂ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಸೂಕ್ತ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಪಡೆದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

ಡಾ. ಆದಿಲ್‌, ಡಾ.ಆನಂದ ಕೊಪ್ಪದ, ಪ್ರಶಾಂತ ಕುರಬೇಟ, ಡಾ. ಮೋಹಿತ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ