ಆ್ಯಪ್ನಗರ

ಕೆಎಚ್‌ಡಿಸಿ ಎದುರು ಇಂದು ಕೈಮಗ್ಗ ಸತ್ಯಾಗ್ರಹ

ಹುಬ್ಬಳ್ಳಿ :ಕೈಮಗ್ಗ ಸತ್ಯಾಗ್ರಹ ಮುಂದುವರಿಸಿರುವ ಗ್ರಾಮ ಸೇವಾ ಸಂಘ ಆ. 9 ರಂದು ಬೆಳಗ್ಗೆ 10ಕ್ಕೆ ಹುಬ್ಬಳ್ಳಿಯ (ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ) ಕೇಂದ್ರ ಕಚೇರಿ ಎದುರು ಸತ್ಯಾಗ್ರಹ ನಡೆಸಲಿದೆ. ರಂಗಕರ್ಮಿ ಪ್ರಸನ್ನ, ಅಖಿಲ ಕರ್ನಾಟಕ ನೇಕಾರರ ಸಂಘದ ಉಪಾಧ್ಯಕ್ಷ ವಿಟ್ಟಪ್ಪ ಗೋರಂಟ್ಲಿ, ರೈತ ನಾಯಕ ಡಾ. ಸಿದ್ದನಗೌಡ ಪಾಟೀಲ್‌, ನೇಕಾರರ ಹೋರಾಟಗಾರ ನಿತ್ಯಾನಂದ ಸ್ವಾಮಿ ಹಾಗೂ ಇತರೆ ನೇಕಾರರು ಹಾಗೂ ರೈತ ಸಂಘಟನೆಯ ಕಾರ್ಯಕರ್ತರು ಪಾಲ್ಗೊಳ್ಳÜಲಿದ್ದಾರೆ.

Vijaya Karnataka 9 Aug 2018, 5:00 am
ಹುಬ್ಬಳ್ಳಿ :ಕೈಮಗ್ಗ ಸತ್ಯಾಗ್ರಹ ಮುಂದುವರಿಸಿರುವ ಗ್ರಾಮ ಸೇವಾ ಸಂಘ ಆ. 9 ರಂದು ಬೆಳಗ್ಗೆ 10ಕ್ಕೆ ಹುಬ್ಬಳ್ಳಿಯ (ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ) ಕೇಂದ್ರ ಕಚೇರಿ ಎದುರು ಸತ್ಯಾಗ್ರಹ ನಡೆಸಲಿದೆ. ರಂಗಕರ್ಮಿ ಪ್ರಸನ್ನ, ಅಖಿಲ ಕರ್ನಾಟಕ ನೇಕಾರರ ಸಂಘದ ಉಪಾಧ್ಯಕ್ಷ ವಿಟ್ಟಪ್ಪ ಗೋರಂಟ್ಲಿ, ರೈತ ನಾಯಕ ಡಾ. ಸಿದ್ದನಗೌಡ ಪಾಟೀಲ್‌, ನೇಕಾರರ ಹೋರಾಟಗಾರ ನಿತ್ಯಾನಂದ ಸ್ವಾಮಿ ಹಾಗೂ ಇತರೆ ನೇಕಾರರು ಹಾಗೂ ರೈತ ಸಂಘಟನೆಯ ಕಾರ್ಯಕರ್ತರು ಪಾಲ್ಗೊಳ್ಳÜಲಿದ್ದಾರೆ.
Vijaya Karnataka Web handloom satire today against khdc
ಕೆಎಚ್‌ಡಿಸಿ ಎದುರು ಇಂದು ಕೈಮಗ್ಗ ಸತ್ಯಾಗ್ರಹ


ಸಿಎಂಗೆ ಪತ್ರ:

ಕೈಮಗ್ಗ ಉದ್ಯೋಗ ಕುರಿತು ಮುಖ್ಯಮಂತ್ರಿಗೆ ರಂಗಕರ್ಮಿ ಪ್ರಸನ್ನ ಅವರು ಪತ್ರ ಬರೆದಿದ್ದು ಅದರಲ್ಲಿ, ಹತ್ತಿ ಬೆಳೆಗಾರಿಕೆಯಲ್ಲಿ ರಾಜ್ಯವು ರಾಷ್ಟ್ರದಲ್ಲಿ ಎರಡನೆಯ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬೆಳೆಯುವ ಹತ್ತಿಯ ಬಹುಪಾಲು ಉತ್ತರ ಕರ್ನಾಟಕದ ಏಳೆಂಟು ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿದೆ. ಹತ್ತಿಯನ್ನು ಪರಿಷ್ಕರಿಸುವ ಹಾಗೂ ನೂಲಾಗಿ ಪರಿವರ್ತಿಸುವ ಕಾರ್ಖಾನೆಗಳು ಈಗಾಗಲೇ ಉತ್ತರ ಕರ್ನಾಟಕದ ಭಾಗಗಳಲ್ಲಿ ಶತಮಾನದಷ್ಟು ಹಳೆಯ ಉದ್ದಿಮೆಗಳಾಗಿವೆ.

ವಿಶ್ವ ಮಾರುಕಟ್ಟೆ ಹಾಗೂ ದೇಶೀ ಮಾರುಕಟ್ಟೆಗಳಲ್ಲಿ ಹತ್ತಿಕೈಮಗ್ಗದ ಬಟ್ಟೆ ಹಾಗೂ ಉಡುಪುಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ. ತಮಗೆ ಪ್ರಾಯಶಃ ತಿಳಿದಿರದ ಒಂದು ಸಂಗತಿ ಎಂದರೆ ಈ ಬೇಡಿಕೆಯನ್ನು ವಿಶ್ವದ ಬೇರಾವ ದೇಶಗಳೂ ಪೂರೈಸಲಾರವು. ಭಾರತದೇಶ ಮಾತ್ರವೇ ಪೂರೈಸಬಲ್ಲದು. ಉತ್ತರ ಕರ್ನಾಟಕವು ಹತ್ತಿ ಕೈಮಗ್ಗದಲ್ಲಿ ಮುಂಚೂಣಿ ಕ್ಷೇತ್ರವಾಗಿದೆ. ಈಗಲೂ ನಮ್ಮ ಒಂದು ದೇಶದಲ್ಲಿರುವ ಚಾಲ್ತಿಮಗ್ಗಗಳ ಸಂಖ್ಯೆ ವಿಶ್ವದ ಒಟ್ಟು ಚಾಲ್ತಿಮಗ್ಗಗಳಿಗಿಂತ ಮಿಗಿಲಾಗಿದೆ.

ಕೈಮಗ್ಗ ಉದ್ದಿಮೆಯನ್ನು ಅಮುಲ್‌ಉದ್ದಿಮೆಯ ಮಾದರಿಯಲ್ಲಿ ಉತ್ತರ ಕರ್ನಾಟಕದಲ್ಲಿ ತುಂಬ ಯಶಸ್ವಿಯಾಗಿ ಅಭಿವೃದ್ಧಿ ಪಡಿಸಬಹುದೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಈಗಾಗಲೇ ಕೈಮಗ್ಗ ಉದ್ದಿಮೆ ಇಲ್ಲಿದೆ. ಹೊಸದಾಗಿ, ಮೂಲ ಸೌಲಭ್ಯ ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ, ತರಬೇತಿ, ತಂತ್ರಜ್ಞಾನ ಆಮದು, ಇತ್ಯಾದಿ ಯಾವುದೇ ಅವಶ್ಯಕತೆ ಇಲ್ಲ ಎಂಬ ಹಲವು ಮಹತ್ವದ ವಿಷಯಗಳನ್ನು ಪತ್ರದಲ್ಲಿ ವಿವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ