ಆ್ಯಪ್ನಗರ

ಸೌಹಾರ್ಧತೆಯ ಭಾವೈಕ್ಯದ ಹೋಳಿ ಸಂಭ್ರಮ

ಕುಂದಗೋಳ : ಪಟ್ಟಣದ ಶ್ರೀರಂಗಪುರ ನಗರದಲ್ಲಿ ಹಿಂದೂ ಮತ್ತು ಮುಸ್ಲಿಂರು ಸೌಹಾರ್ಧತೆಯ ಭಾವೈಕ್ಯದ ಹೋಳಿಯನ್ನು ಸಂಭ್ರಮದಿಂದ ಆಚರಿಸಿದರು. ಯುವಕರು, ಮಕ್ಕಳು, ಮಹಿಳೆಯರು ಸೇರಿಕೊಂಡು ವಿವಿಧ ತರಹದ ಬಣ್ಣಗಳನ್ನು ಮುಖಾಮುಖಿಯಾಗಿ ಎರಚಿಕೊಂಡು ಖುಷಿ ಪಟ್ಟು ಸಡಗರದಿಂದ ಹೋಳಿ ಆಚರಿಸಿದರು.

Vijaya Karnataka 25 Mar 2019, 5:00 am
ಕುಂದಗೋಳ : ಪಟ್ಟಣದ ಶ್ರೀರಂಗಪುರ ನಗರದಲ್ಲಿ ಹಿಂದೂ ಮತ್ತು ಮುಸ್ಲಿಂರು ಸೌಹಾರ್ಧತೆಯ ಭಾವೈಕ್ಯದ ಹೋಳಿಯನ್ನು ಸಂಭ್ರಮದಿಂದ ಆಚರಿಸಿದರು. ಯುವಕರು, ಮಕ್ಕಳು, ಮಹಿಳೆಯರು ಸೇರಿಕೊಂಡು ವಿವಿಧ ತರಹದ ಬಣ್ಣಗಳನ್ನು ಮುಖಾಮುಖಿಯಾಗಿ ಎರಚಿಕೊಂಡು ಖುಷಿ ಪಟ್ಟು ಸಡಗರದಿಂದ ಹೋಳಿ ಆಚರಿಸಿದರು.
Vijaya Karnataka Web DRW-24KND1
ಕುಂದಗೋಳ ಪಟ್ಟಣದ ಶ್ರೀರಂಗಪುರ ನಗರದಲ್ಲಿ ಹಿಂದೂ ಮತ್ತು ಮುಸ್ಲಿಂರು ಸಂಭ್ರಮದ ಹೋಳಿ ಆಚರಿಸಿದರು.


ಕಾಮಣ್ಣನ ಕುರಿತು ಮಕ್ಕಳು ಘೋಷಣೆ ಕೂಗುತ್ತಾ ಸಂತಸದಿಂದ ನೀರು ಬಣ್ಣ ಎರಚಿಕೊಂಡು ಸಂತೋಷ ಪಟ್ಟರು. ಮೂರಗಂಡಿ ಕೂಟದಲ್ಲಿ ವಿವಿಧ ಬಣ್ಣ ಎರಚಿ ಸಂಭ್ರಮಿಸಿದರು.

ಪಟ್ಟಣದ ಚೌವಡಿ ಎದುರಿಗೆ ಕಾಮಣ್ಣನ ಮೂರ್ತಿ ಮಾಡಿ ಕುಳ್ಳು ಕಟ್ಟಿಗೆಗಳಿಂದ ಬೆಂಕಿ ಹಚ್ಚಿದರು. ಬೆಂಕಿ ಕುಳ್ಳನ್ನು ಮನೆ ಮನೆಗೆ ತೆಗೆದುಕೊಂಡು ಹೋಗಿ ಕಡಲೆ ಸುಟ್ಟು ನಂತರ ಸ್ನಾನ ಮಾಡಿ ಕಡಲೆ ತಿಂದರು. ಕಾಮಣ್ಣನಿಗೆ ಮತ್ತು ರತಿ-ಕಾಮದೇವರಿಗೆ ತುಪ್ಪ-ಹೋಳಿಗೆ, ಪಲ್ಯೆ, ಅನ್ನ ಮತ್ತು ಸಾಂಬಾರ ನೈವೇದ್ಯ ಮಾಡಿ ಪ್ರಸಾದವನ್ನು ಸವಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ