ಆ್ಯಪ್ನಗರ

ಗುರುಗಳ ಸೇವೆಯಿಂದ ಸಂಕಷ್ಟಗಳು ದೂರ

ಧಾರವಾಡ : ಇಂದಿಗೂ ಸಾವಿರಾರು ಭಕ್ತರು ಗುರುಗಳ ಸೇವೆ ಮಾಡುವ ಮೂಲಕ ತಮ್ಮ ಸಂಕಷ್ಟಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಪಂ.ಅಚ್ಯುತಾಚಾರ್ಯ ಗಲಗಲಿ ತಿಳಿಸಿದರು.

Vijaya Karnataka 21 Aug 2019, 5:00 am
ಧಾರವಾಡ : ಇಂದಿಗೂ ಸಾವಿರಾರು ಭಕ್ತರು ಗುರುಗಳ ಸೇವೆ ಮಾಡುವ ಮೂಲಕ ತಮ್ಮ ಸಂಕಷ್ಟಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಪಂ.ಅಚ್ಯುತಾಚಾರ್ಯ ಗಲಗಲಿ ತಿಳಿಸಿದರು.
Vijaya Karnataka Web DRW-19RANGA01


ನಗರದ ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ವನಸಿರಿ ನಗರದ ರಮೇಶ ಅಣ್ಣಿಗೇರಿ ಅವರ ನಿವಾಸದಲ್ಲಿ ನಡೆದ ಶ್ರೀಮದ್‌ ರಾಘವೇಂದ್ರತೀರ್ಥರ ಆರಾಧನೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೇವೆ ಮಾಡುವ ಭಕ್ತರ ಮೇಲೆ ಗುರು ರಾಯರು ಅನುಗ್ರಹ ತೋರಿ ಅವರ ಅಭೀಷ್ಟಗಳನ್ನು ಈಡೇರಿಸುತ್ತಾರೆ. ಈ ಹಿನ್ನೆಲೆ ಗುರುರಾಯರ ಸೇವೆ ಜತೆಗೆ ಜ್ಞಾನದಿಂದ ಸ್ತುತಿಸಬೇಕು ಎಂದು ತಿಳಿಸಿದರು.

ಶ್ರೀ ರಾಘವೇಂದ್ರ ಸ್ವಾಮಿಗಳು ಲೌಕಿಕ ಪ್ರಪಂಚದಿಂದ ಮರೆಯಾಗಿ ಆಂತರಿಕ ಪ್ರಪಂಚಕ್ಕೆ ಹೋಗಿ 348 ವರ್ಷಗಳೇ ಕಳೆದಿದ್ದರೂ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ಎಂಬುದಾಗಿ ಸ್ತುತಿಸುವಂತೆ ತಮ್ಮ ಹಾಗೂ ಅವರ ಗ್ರಂಥಗಳ ಸೇವೆ ಮಾಡುವ ಎಲ್ಲ ಕಾಮಿತಾರ್ಥಗಳನ್ನು ಇಂದಿಗೂ ಎಲ್ಲ ವರ್ಗದ ಸಮಾಜಕ್ಕೂ ಪೂರೈಸುತ್ತಿರುವ ಅವರ ಮಹಿಮೆ ಅದ್ಭುತವೆಂದು ಕೊಂಡಾಡಿದರು.

ಇದಕ್ಕೂ ಮುನ್ನ ನಾರಾಯಣ ಪಾರಾಯಣ ಬಳಗದ ಸದಸ್ಯರಿಂದ ಶ್ರೀ ವಿಷ್ಣು ಸಹಸ್ರನಾಮ, ಶ್ರೀ ವೆಂಕಟೇಶ ಸ್ತೋತ್ರ, ಶ್ರೀ ರಾಮಸ್ತೋತ್ರ, ಶ್ರೀ ಸೂಕ್ತ, ಶ್ರೀ ಹರಿವಾಯುಸ್ತುತಿ, ಶ್ರೀಮದರಾಘವೇಂದ್ರ ಸ್ತೋತ್ರಗಳ ಪಾರಾಯಣ ನಡೆಯಿತು.

ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಡಿ.ಕೆ. ಜೋಶಿ, ಆನಂದ ಬಾಗಲ, ಗೋಪಾಲಾಚಾರ್ಯ ಹರಿಹರ, ಭೀಮಸೇನ ದಿಗ್ಗಾವಿ, ಪ್ರಮೋದ ಶಿರಗುಪ್ಪಿ, ಪ್ರಕಾಶ ದೇಸಾಯಿ, ಅನಂತ ಸಂಕಣ್ಣನವರ, ಸುಧೀರ ವಾಳ್ವೇಕರ, ಸಂಜೀವ ಜೋಶಿ, ಪಾಂಡುರಂಗ ಕುಲಕರ್ಣಿ, ಎಂ.ಆರ್‌. ಕಲಕೋಟಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ