ಆ್ಯಪ್ನಗರ

ಅಂತರ್ಜಾಲ ಬಳಕೆಗೆ ಸಮಯ ಪ್ರಜ್ಞೆ ಇರಲಿ

ಧಾರವಾಡ : ಇಂದಿನ ವಿದ್ಯಾರ್ಥಿಗಳಿಗೆ ಜಗತ್ತಿನ ಎಲ್ಲ ಜ್ಞಾನದ ವಿಷಯಗಳು ಅಂತರ್ಜಾಲದ ಮೂಲಕ ಕೈ ಬೆರಳಿನಲ್ಲಿಯೇ ಸಿಗುತ್ತವೆ. ಆದರೆ, ಅಂತರ್ಜಾಲವನ್ನು ವಿದ್ಯಾರ್ಥಿಗಳು ಸಮಯ ಪ್ರಜ್ಞೆಯಿಂದ ಬಳಸಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.

Vijaya Karnataka 20 Aug 2019, 5:00 am
ಧಾರವಾಡ : ಇಂದಿನ ವಿದ್ಯಾರ್ಥಿಗಳಿಗೆ ಜಗತ್ತಿನ ಎಲ್ಲ ಜ್ಞಾನದ ವಿಷಯಗಳು ಅಂತರ್ಜಾಲದ ಮೂಲಕ ಕೈ ಬೆರಳಿನಲ್ಲಿಯೇ ಸಿಗುತ್ತವೆ. ಆದರೆ, ಅಂತರ್ಜಾಲವನ್ನು ವಿದ್ಯಾರ್ಥಿಗಳು ಸಮಯ ಪ್ರಜ್ಞೆಯಿಂದ ಬಳಸಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.
Vijaya Karnataka Web have a sense of time for internet use
ಅಂತರ್ಜಾಲ ಬಳಕೆಗೆ ಸಮಯ ಪ್ರಜ್ಞೆ ಇರಲಿ


ನಗರದ ಕೆಎಲ್‌ಇ ಸಂಸ್ಥೆಯ ಆರ್‌ಎಲ್‌ಎಸ್‌ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ವಿಜ್ಞಾನ-ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಘಟಕ, ಸಾರ್ವಜನಿಕ ಶಿಕ್ಷ ಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷ ಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ಧಾರವಾಡ ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿ-2019ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೋಮವಾರ ಅವರು ಮಾತನಾಡಿದರು.

ವಿದ್ಯಾರ್ಥಿಗಳು ವೈಜ್ಞಾನಿಕ ತಳಹದಿಯ ಮೇಲೆ ಆಲೋಚಿಸಬೇಕು. ಕೇವಲ ಪ್ರಶ್ನಿಸಿದರೆ ಸಾಲದು, ಅದಕ್ಕೆ ತಕ್ಕ ಉತ್ತರ ಕಂಡುಕೊಳ್ಳುವವರೆಗೂ ಸತತ ಪ್ರಯತ್ನವಿರಬೇಕು. ವಿದ್ಯಾರ್ಥಿಗಳು ಸೃಜನಶೀಲತೆ ಮೈಗೂಡಿಸಿಕೊಳ್ಳ್ಳಬೇಕು ಎಂದರು.

ಉದ್ಘಾಟಿಸಿ ಮಾತನಾಡಿದ ಪದವಿ-ಪೂರ್ವ ಶಿಕ್ಷ ಣ ಇಲಾಖೆಯ ಪ್ರಭಾರಿ ಉಪನಿರ್ದೇಶಕಿ ಶಾರದಾ ಕಿರೆಸೂರ, ಜನರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆಗಳು ಹೊರಬರಬೇಕು. ವೈಚಾರಿಕತೆಗೆ ಮತ್ತು ತಾರ್ಕಿಕಕತೆಗೆ ಶಿಕ್ಷ ಣದಲ್ಲಿ ಅವಕಾಶವಿರಬೇಕು. ಮಕ್ಕಳು ಕೂಲಂಕಷÜವಾಗಿ ವೀಕ್ಷಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷ ತೆವಹಿಸಿದ್ದ ಆರ್‌ಎಲ್‌ಎಸ್‌ ಕಾಲೇಜಿನ ಪ್ರಾಚಾರ್ಯ ಎ.ಜೆ.ಶಿಂಗೆ ಮಾತನಾಡಿ, ವಿದ್ಯಾರ್ಥಿಗಳು ಪ್ರಶಸ್ತ್ತಿಗಾಗಿ ಶ್ರಮಪಡದೆ, ವಿಜ್ಞಾನ ಕಲಿಕೆಯ ಮೂಲಕ ಪ್ರಯೋಗಶೀಲತೆಯೊಂದಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಸಾರ್ವಜನಿಕ ಶಿಕ್ಷ ಣ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷ ಕ ಸಂಜಯ ಮಾಳಿ, ಸಮಾಜ ವಿಜ್ಞಾನ ವಿಷಯ ಪರಿವೀಕ್ಷ ಕ ಬಸವಂತಯ್ಯ ದುಬ್ಬನಮರಡಿ, ಶೀವಲೀಲಾ, ಪ್ರೊ.ಶಿವಾನಂದ ಹಡಪದ, ಆರ್‌ಎಲ್‌ಎಸ್‌ ಕಾಲೇಜಿನ ಉಪಪ್ರಾಚಾರ್ಯ ಪ್ರೊ.ವಿ.ಪಿ.ಹಿರೇಮಠ, ಪ್ರೊ. ಕೆ.ಕೊಟ್ರೇಶ, ವಿ.ಎಸ್‌.ಪಾಟೀಲ, ಎ.ಝಡ್‌.ಸರ್ಕಾಜಿ ಸೇರಿದಂತೆ ಇತರರ ಇದ್ದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ಭೂಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಗಾಯತ್ರಿ ಹುದ್ದಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ