ಆ್ಯಪ್ನಗರ

ಹುತಾತ್ಮ ಯೋಧನ ಕುಟುಂಬಕ್ಕೆ ನೆರವು

ಧಾರವಾಡ : ಪುಲ್ವಾಮಾದಲ್ಲಿ ಹುತಾತ್ಮನಾದ ಸಿಆರ್‌ಪಿಎಫ್‌ ಯೋಧ ಮಂಡ್ಯದ ಯೋಧ ಎಚ್‌.ಗುರು ಕುಟುಂಬಕ್ಕೆ ನಗರದ ಮೆಡಿಕಲ್‌ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು 1ಲಕ್ಷ ರೂ. ನೆರವು ನೀಡಿದ್ದಾರೆ.

Vijaya Karnataka 25 Feb 2019, 5:00 am
ಧಾರವಾಡ : ಪುಲ್ವಾಮಾದಲ್ಲಿ ಹುತಾತ್ಮನಾದ ಸಿಆರ್‌ಪಿಎಫ್‌ ಯೋಧ ಮಂಡ್ಯದ ಯೋಧ ಎಚ್‌.ಗುರು ಕುಟುಂಬಕ್ಕೆ ನಗರದ ಮೆಡಿಕಲ್‌ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು 1ಲಕ್ಷ ರೂ. ನೆರವು ನೀಡಿದ್ದಾರೆ.
Vijaya Karnataka Web help the martyrs family
ಹುತಾತ್ಮ ಯೋಧನ ಕುಟುಂಬಕ್ಕೆ ನೆರವು


ನೇರವಾಗಿ ಹುತಾತ್ಮ ಯೋಧ ಗುರು ಅವರ ಮನೆಗೆ ತೆರಳಿದ ವಿದ್ಯಾರ್ಥಿಗಳು ತಾವು ಸಂಗ್ರಹಿಸಿದ 1ಲಕ್ಷ ರೂ. ಚೆಕ್‌ನ್ನು ಅವರ ಕುಟುಂಬಕ್ಕೆ ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ.

ಮಾಳಮಡ್ಡಿಯ ಕೆ.ಇ.ಬೋರ್ಡ್‌ ಶಾಲೆಯ ಶಿಕ್ಷ ಕ ಐ.ಪಿ.ಕಟ್ಟಿ ಅವರ ಮಾರ್ಗದರ್ಶನದಲ್ಲಿ ಸಾರ್ವಜನಿಕರಿಂದ ಹಾಗೂ ಶಾಲೆ, ಕಾಲೇಜುಗಳಿಂದ ನಿಧಿ ಸಂಗ್ರಹಿಸಿದ್ದಾರೆ. ನಂತರ ಜೆಎಸ್‌ಎಸ್‌ ವಿತ್ತಾಧಿಕಾರಿ ಅಜೀತ ಪ್ರಸಾದ, ಕೆ.ಇ.ಬೋರ್ಡ್‌ ವಿದ್ಯಾಸಂಸ್ಥೆಯ ಅಧ್ಯಕ್ಷ ಅರುಣ ಎಸ್‌.ನಾಡಗೇರ ಅವರಿಂದ ಹಾಗೂ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮುಮ್ಮಿಗಟ್ಟಿ, ಸರಕಾರಿ ಪ್ರಾಥಮೀಕ ಶಾಲೆ ಕೆಲಗೇರಿ, ಬೇಂದ್ರೆ ಪಿ.ಯು ಕಾಲೇಜ ಹಾಗೂ ಇತರ ಶಿಕ್ಷ ಣ ಸಂಸ್ಥೆಗಳು ಸೇರಿದಂತೆ ಕಲ್ಪನಾ ಅವಣ್ಣವರ 5 ಸಾವಿರ , ನೇತ್ರಾ ಮೆಡಿಕಲ್‌ ಆ್ಯಂಡ್‌ ಜನರಲ್‌ ಸ್ಟೋರ್ಸ್‌ ವತಿಯಿಂದ 4 ಸಾವಿರ ಹಾಗೂ ಆನ್‌ಲೈನ್‌ ಮೂಲಕ ಪಡೆದ ಹಣವನ್ನು ಚಕ್‌ ಮೂಲಕ ಯೋಧನ ಕುಟುಂಬಕ್ಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ