ಧಾರವಾಡ : ನವಲಗುಂದ ತಾಲೂಕು ಶಿಕ್ಷ ಣ ಸಮಿತಿಯ ನೋಂದಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ವಿಚಾರಣೆ ಮಾಡುವಂತೆ ಇಲ್ಲಿನ ಹೈಕೋರ್ಟ್ ಪೀಠ, ಜಿಲ್ಲಾ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.
ನವಲಗುಂದ ತಾಲೂಕು ಶಿಕ್ಷ ಣ ಸಮಿತಿ ಬಾಂಬೆ ಪಬ್ಲಿಕ್ ಟ್ರಸ್ಟ್ ಅಡಿ ನೋಂದಣಿಗೊಂಡಿತ್ತು. 2004ರಲ್ಲಿ ಸರಕಾರ ಆದೇಶ ಹೊರಡಿಸಿ, ಬಾಂಬೆ ಪಬ್ಲಿಕ್ ಟ್ರಸ್ಟ್ ಅಡಿ ನೋಂದಾಯಿತ ಸಂಘ- ಸಂಸ್ಥೆಗಳು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಮರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿತ್ತು.
ಆದರೆ, 2018ರವರೆಗೂ ನವಲಗುಂದ ತಾಲೂಕು ಶಿಕ್ಷ ಣ ಸಮಿತಿಯವರು ಮರು ನೋಂದಣಿ ಮಾಡಿಸಿಕೊಂಡಿರಲಿಲ್ಲ. ಈ ಮಧ್ಯೆ ಸಂಸ್ಥೆಯವರು ಶಂಕರ ಮಹಾವಿದ್ಯಾಲಯಕ್ಕೆ ಶಿಕ್ಷ ಕ ಹಾಗೂ ಸಿಬ್ಬಂದಿ ನೇಮಕಕ್ಕೆ 2018ರ ಮೇ. 21ರಂದು ಅಧಿಸೂಚನೆ ಹೊರಡಿಸಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರಾದ ಪರಶುರಾಮ ಹಕ್ಕರಕಿ ಎಂಬುವರು ಕಾಲೇಜು ಶಿಕ್ಷ ಣ ಇಲಾಖೆ ಆಯುಕ್ತರಿಗೆ ದೂರು ನೀಡಿ, ನತಾಶಿ ಸಮಿತಿ ಮರು ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿ ಸಂಸ್ಥೆ ಮಾಡಿಕೊಳ್ಳುತ್ತಿರುವ ನೇಮಕ ಪ್ರಕ್ರಿಯೆ ತಡೆಯುವಂತೆ ಮನವಿ ಮಾಡಿದ್ದರು.
ಆಗ ಎಚ್ಚೆತ್ತುಕೊಂಡಿದ್ದ ಸಂಸ್ಥೆಯವರು ಜಿಲ್ಲಾ ನ್ಯಾಯಾಲಯದಿಂದ ಮರು ನೋಂದಣಿ ಮಾಡಿಕೊಂಡಿದ್ದರು. ಆದರೆ, ಸಂಸ್ಥೆಯವರು ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದೆ ಏಕಪಕ್ಷೀಯವಾಗಿ ತಮ್ಮ ಪರ ತೀರ್ಪು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ದೂರುದಾರ ಪರಶುರಾಮ ಹಕ್ಕರಕಿ ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸಿದ್ದರು.
ವಿಚಾರಣೆ ಮಾಡಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಏಕಸದಸ್ಯ ಪೀಠ, ಸಂಸ್ಥೆಯವರು ಪ್ರಕರಣದಲ್ಲಿ ಮೇಲ್ನೋಟಕ್ಕೆ ಏಕಪಕ್ಷಿಯವಾಗಿ ತೀರ್ಪು ಪಡೆದಿರುವುದಾಗಿ ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟಿತು. ನಂತರ ಪ್ರಸ್ತುತ ಆಡಳಿತ ಮಂಡಳಿಯನ್ನು ಅನೂರ್ಜಿತಗೊಳಿಸಿ, ನೂತನ ನೋಂದಣಿ ಅರ್ಜಿಯನ್ನು ಮರು ವಿಚಾರಣೆ ಮಾಡುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿತು.ಅರ್ಜಿದಾರರ ಪರ ಹಕ್ಕರಕಿ ವಾದ ಮಂಡಿಸಿದರು.
ನವಲಗುಂದ ತಾಲೂಕು ಶಿಕ್ಷ ಣ ಸಮಿತಿ ಬಾಂಬೆ ಪಬ್ಲಿಕ್ ಟ್ರಸ್ಟ್ ಅಡಿ ನೋಂದಣಿಗೊಂಡಿತ್ತು. 2004ರಲ್ಲಿ ಸರಕಾರ ಆದೇಶ ಹೊರಡಿಸಿ, ಬಾಂಬೆ ಪಬ್ಲಿಕ್ ಟ್ರಸ್ಟ್ ಅಡಿ ನೋಂದಾಯಿತ ಸಂಘ- ಸಂಸ್ಥೆಗಳು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಮರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿತ್ತು.
ಆದರೆ, 2018ರವರೆಗೂ ನವಲಗುಂದ ತಾಲೂಕು ಶಿಕ್ಷ ಣ ಸಮಿತಿಯವರು ಮರು ನೋಂದಣಿ ಮಾಡಿಸಿಕೊಂಡಿರಲಿಲ್ಲ. ಈ ಮಧ್ಯೆ ಸಂಸ್ಥೆಯವರು ಶಂಕರ ಮಹಾವಿದ್ಯಾಲಯಕ್ಕೆ ಶಿಕ್ಷ ಕ ಹಾಗೂ ಸಿಬ್ಬಂದಿ ನೇಮಕಕ್ಕೆ 2018ರ ಮೇ. 21ರಂದು ಅಧಿಸೂಚನೆ ಹೊರಡಿಸಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರಾದ ಪರಶುರಾಮ ಹಕ್ಕರಕಿ ಎಂಬುವರು ಕಾಲೇಜು ಶಿಕ್ಷ ಣ ಇಲಾಖೆ ಆಯುಕ್ತರಿಗೆ ದೂರು ನೀಡಿ, ನತಾಶಿ ಸಮಿತಿ ಮರು ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿ ಸಂಸ್ಥೆ ಮಾಡಿಕೊಳ್ಳುತ್ತಿರುವ ನೇಮಕ ಪ್ರಕ್ರಿಯೆ ತಡೆಯುವಂತೆ ಮನವಿ ಮಾಡಿದ್ದರು.
ಆಗ ಎಚ್ಚೆತ್ತುಕೊಂಡಿದ್ದ ಸಂಸ್ಥೆಯವರು ಜಿಲ್ಲಾ ನ್ಯಾಯಾಲಯದಿಂದ ಮರು ನೋಂದಣಿ ಮಾಡಿಕೊಂಡಿದ್ದರು. ಆದರೆ, ಸಂಸ್ಥೆಯವರು ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದೆ ಏಕಪಕ್ಷೀಯವಾಗಿ ತಮ್ಮ ಪರ ತೀರ್ಪು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ದೂರುದಾರ ಪರಶುರಾಮ ಹಕ್ಕರಕಿ ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸಿದ್ದರು.
ವಿಚಾರಣೆ ಮಾಡಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಏಕಸದಸ್ಯ ಪೀಠ, ಸಂಸ್ಥೆಯವರು ಪ್ರಕರಣದಲ್ಲಿ ಮೇಲ್ನೋಟಕ್ಕೆ ಏಕಪಕ್ಷಿಯವಾಗಿ ತೀರ್ಪು ಪಡೆದಿರುವುದಾಗಿ ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟಿತು. ನಂತರ ಪ್ರಸ್ತುತ ಆಡಳಿತ ಮಂಡಳಿಯನ್ನು ಅನೂರ್ಜಿತಗೊಳಿಸಿ, ನೂತನ ನೋಂದಣಿ ಅರ್ಜಿಯನ್ನು ಮರು ವಿಚಾರಣೆ ಮಾಡುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿತು.ಅರ್ಜಿದಾರರ ಪರ ಹಕ್ಕರಕಿ ವಾದ ಮಂಡಿಸಿದರು.