ಆ್ಯಪ್ನಗರ

ನಾಳೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ

ಧಾರವಾಡ : ಶಂಕ್ರಪ್ಪ ಹೂಗಾರ ಹಾಗೂ ಭೀಮಾಬಾಯಿ ಹೂಗಾರ ಸ್ಮರಣಾರ್ಥ 25 ರಂದು ಸಂಜೆ 5.30ಕ್ಕೆ ನಗರದ ಡಾ.ಅಣ್ಣಾಜಿರಾವ್‌ ಸಿರೂರ(ಸೃಜನಾ) ರಂಗಮಂದಿರದಲ್ಲಿ ಪದ್ಮಶ್ರೀ ಎಂ.ವೆಂಕಟೇಶಕುಮಾರ ಸೇರಿದಂತೆ ಹೆಸರಾಂತ ಕಲಾವಿದರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ,ಸಂಗೀತಪುಣ್ಯಸ್ಮರಣೆ ಹಾಗೂ ಹಿರಿಯ ಸಿತಾರ್‌ ವಾದಕ ಪಂ.ಶಿವಾನಂದ ತರ್ಲಗಟ್ಟಿ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

Vijaya Karnataka 24 Aug 2019, 5:00 am
ಧಾರವಾಡ : ಶಂಕ್ರಪ್ಪ ಹೂಗಾರ ಹಾಗೂ ಭೀಮಾಬಾಯಿ ಹೂಗಾರ ಸ್ಮರಣಾರ್ಥ 25 ರಂದು ಸಂಜೆ 5.30ಕ್ಕೆ ನಗರದ ಡಾ.ಅಣ್ಣಾಜಿರಾವ್‌ ಸಿರೂರ(ಸೃಜನಾ) ರಂಗಮಂದಿರದಲ್ಲಿ ಪದ್ಮಶ್ರೀ ಎಂ.ವೆಂಕಟೇಶಕುಮಾರ ಸೇರಿದಂತೆ ಹೆಸರಾಂತ ಕಲಾವಿದರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ,ಸಂಗೀತಪುಣ್ಯಸ್ಮರಣೆ ಹಾಗೂ ಹಿರಿಯ ಸಿತಾರ್‌ ವಾದಕ ಪಂ.ಶಿವಾನಂದ ತರ್ಲಗಟ್ಟಿ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
Vijaya Karnataka Web hindustani classical choir tomorrow
ನಾಳೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ


ಕೊಪ್ಪಳ ಜಿಲ್ಲೆ ತಾವರಗೇರಿಯ ಪಂಡಿತ ಪಂಚಾಕ್ಷ ರಿ ಗವಾಯಿಗಳ ಸಂಗೀತ ಸೇವಾ ಸಮಿತಿ ಸಹಯೋಗದಲ್ಲಿ ಏರ್ಪಡಿಸಿರುವ ಕಾರ್ಯಕ್ರಮವನ್ನು ಕೊಪ್ಪಳ ಸಂಸದ ಸಂಗಣ್ಣ ಕರಡಿ ಉದ್ಘಾಟಿಸುವರು. ಮಳೆಮಲ್ಲೇಶ್ವರ ಮಠದ ಶಶಾಂಕದೇವರು, ಗಂಗಾವತಿ ತಾಲೂಕು ಸುಳೆಕಲ್‌ ಬೃಹನ್ಮಠದ ಭುವನೇಶ್ವರಯ್ಯ ತಾತನವರು, ಅರಳಹಳ್ಳಿ ಮಠದ ಗವಿಸಿದ್ದಯ್ಯ ತಾತನವರು ಸಾನ್ನಿಧ್ಯ ವಹಿಸುವರು.ಎಂ.ಗೋಪಾಲರಡ್ಡಿ ಅಧ್ಯಕ್ಷ ತೆ ವಹಿಸುವರು. ವಿನಾಯಕ ಪಾಲನಕರ್‌,ಶಿವ ಕುಲಕರ್ಣಿ,ಮಂಜುನಾಥ ಡೊಳ್ಳಿನ, ಮಲ್ಲಿಕಾರ್ಜುನ ಭಜಂತ್ರಿ,ಉದಯಕುಮಾರ್‌ ದೇಸಾಯಿ,ಚಂದ್ರಶೇಖರ ಮತ್ತಿತರರು ಅತಿಥಿಗಳಾಗಿ ಆಗಮಿಸುವರು.

ಪಂಡಿತ ಎಂ.ವೆಂಕಟೇಶಕುಮಾರ , ಐಶ್ವರ್ಯ ದೇಸಾಯಿ ಅವರ ಗಾಯನ , ಉಸ್ತಾದ್‌ ಶಫೀಕ್‌ ಖಾನ್‌ ಹಾಗೂ ಪಂ.ಶಂಕರ್‌ ಕಬಾಡಿ ಅವರಿಂದ ಸಿತಾರ್‌- ವಯೋಲಿನ್‌ ಜುಗಲ್‌ ಬಂದಿ ಕಾರ್ಯಕ್ರಮಗಳು ನಡೆಯಲಿವೆ.ಸಾರಂಗ ಕುಲಕರ್ಣಿ, ಪಂ.ಸಾಂತಲಿಂಗಪ್ಪ ದೇಸಾಯಿಕಲ್ಲೂರ, ಮಳೇಮಲ್ಲೇಶ್ವರ ಹೂಗಾರ, ರಘುನಂದನ ಗೋಪಾಲ ಹೂಗಾರ ಮತ್ತಿತರ ಕಲಾವಿದರು ವಾದ್ಯ ಸಾಥ್‌ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ