ಆ್ಯಪ್ನಗರ

ಹಿಂದೂಸ್ತಾನಿ ಸಂಗೀತ ಇಂದು

ಧಾರವಾಡ: ನಗರದ ನಾಡೋಜ ಡಾ.ಪುಟ್ಟಪ್ಪ ಸಭಾಭವನದಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ64ನೇ ಕನ್ನಡ ರಾಜೋತ್ಸವ ನಿಮಿತ್ತ ನ.4ರಂದು ಸಂಜೆ 5.30ಕ್ಕೆ ಹಿಂದೂಸ್ತಾನಿ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Vijaya Karnataka 4 Nov 2019, 5:00 am
ಧಾರವಾಡ: ನಗರದ ನಾಡೋಜ ಡಾ.ಪುಟ್ಟಪ್ಪ ಸಭಾಭವನದಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ64ನೇ ಕನ್ನಡ ರಾಜೋತ್ಸವ ನಿಮಿತ್ತ ನ.4ರಂದು ಸಂಜೆ 5.30ಕ್ಕೆ ಹಿಂದೂಸ್ತಾನಿ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Vijaya Karnataka Web hindustani music today
ಹಿಂದೂಸ್ತಾನಿ ಸಂಗೀತ ಇಂದು


ಅಂದು ಡಾ.ಗಂಗೂಬಾಯಿ ಹಾನಗಲ್‌ ವೇದಿಕೆಯಲ್ಲಿನಡೆಯುವ ಕಾರ್ಯಕ್ರಮದಲ್ಲಿಖ್ಯಾತ ಹಿಂದೂಸ್ಥಾನಿ ಸಂಗೀತಗಾರ ಪಂ.ಕೈವಲ್ಯಕುಮಾರ ಗುರವ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ.

ಖ್ಯಾತ ಸಾಹಿತಿ ಶ್ರೀನಿವಾಸ ವಾಡಪ್ಪಿ ಚಾಲನೆ ನೀಡುವರು. ಸಂಘದ ಅಧ್ಯಕ್ಷ ನಾಡೋಜ ಡಾ.ಪಾಟೀಲ ಪುಟ್ಟಪ್ಪನವರು ಗೌರವ ಉಪಸ್ಥಿತರಿರುವರು. ಬಳಿಕ ಜಿಮ್ನಾಸ್ಟಿಕ್‌ನ ರಾಷ್ಟ್ರೀಯ ಪ್ರತಿಭೆ ಅಮೃತ ಮುದ್ರೆಬೆಟ್ಟ ಹಾಗೂ ಸಂಘದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಾಹಿತಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್‌ ಉಡಿಕೇರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ