ಆ್ಯಪ್ನಗರ

ಮನೆ ಕಳ್ಳತನ

ಧಾರವಾಡ : ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಬಂಗಾರದ ಆಭರಣ ಸೇರಿದಂತೆ ನಗದು ಕಳ್ಳತನ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

Vijaya Karnataka Web 18 Jan 2019, 5:00 am
ಧಾರವಾಡ : ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಬಂಗಾರದ ಆಭರಣ ಸೇರಿದಂತೆ ನಗದು ಕಳ್ಳತನ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
Vijaya Karnataka Web home theft
ಮನೆ ಕಳ್ಳತನ


ಇಲ್ಲಿನ ರಾಜನಗರದ ಶಿವಳ್ಳಿ ಪ್ಲಾಟ್‌ ನಿವಾಸಿ ಜ್ಯೋತಿ ವಿರುಪಾಕ್ಷ ಪ್ಪ ಪೂಜಾರ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ತಮ್ಮ ಕೆಲಸದ ನಿಮಿತ್ತ ಮನೆಗೆ ಕೀಲಿ ಹಾಕಿಕೊಂಡು ಅಳ್ನಾವರಕ್ಕೆ ಹೋದಾಗ ಯಾರೋ ಕಳ್ಳರು ಮನೆಗೆ ಹಾಕಿದ ಕೀಲಿಯನ್ನು ಮುರಿದಿದ್ದಾರೆ. ಮನೆಯಲ್ಲಿದ್ದ 139 ಗ್ರಾಂ. ಚಿನ್ನಾಭರಣ, 20 ಗ್ರಾಂ ಬೆಳ್ಳಿಯ ಆಭರಣ, 4 ಕೈ ಗಡಿಯಾರ ಹಾಗೂ 10 ಸಾವಿರ ರೂ. ನಗದು ಕಳ್ಳತನ ಮಾಡಿದ್ದಾರೆ. ಈ ಕುರಿತು ಜ್ಯೋತಿ ಪೂಜಾರ ಉಪನಗರದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ