ಆ್ಯಪ್ನಗರ

ಹುಬ್ಬಳ್ಳಿಗೂ ಕಾಲಿಟ್ಟ ಹನಿಟ್ರ್ಯಾಪ್‌: ಮೂವರ ಬಂಧನ

ವಾಣಿಜ್ಯ ನಗರ ಹುಬ್ಬಳ್ಳಿಗೂ ಹನಿಟ್ರ್ಯಾಪ್ ದಂಧೆ ಕಾಲಿಟ್ಟಿದ್ದು, ಪ್ರಕರಣ ಸಂಬಂಧ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ನಾಲ್ವರ ಆರೋಪಿಗಳನ್ನು ಬಂಧಿಸಿದದ್ದಾರೆ.

ವಿಕ ಸುದ್ದಿಲೋಕ 4 Aug 2017, 4:22 pm
ಹುಬ್ಬಳ್ಳಿ: ವಾಣಿಜ್ಯ ನಗರ ಹುಬ್ಬಳ್ಳಿಗೂ ಹನಿಟ್ರ್ಯಾಪ್ ದಂಧೆ ಕಾಲಿಟ್ಟಿದ್ದು, ಪ್ರಕರಣ ಸಂಬಂಧ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ನಾಲ್ವರ ಆರೋಪಿಗಳನ್ನು ಬಂಧಿಸಿದದ್ದಾರೆ.
Vijaya Karnataka Web honeytrap case found in hubli
ಹುಬ್ಬಳ್ಳಿಗೂ ಕಾಲಿಟ್ಟ ಹನಿಟ್ರ್ಯಾಪ್‌: ಮೂವರ ಬಂಧನ



ಎನ್‌ಆರ್‌ಐ ಆಗಿರುವ ಬಲಬೀರ್ ದುರ್ಗಾಜಿರಾವ್ ಎಂಬುವರೊಂದಿಗೆ ಕರೆ ಮೂಲಕ ಪರಿಚಯವಾದ ಯುವತಿ ದೇಶಪಾಂಡೆ ನಗರದ ಬಳಿ ಬರಲು ಹೇಳಿದ್ದಳು. ಅಲ್ಲಿಗೆ ಬಂದಿದ್ದ ಬಲಬೀರ್‌ನ್ನು ಅಪಹರಿಸಿ ಬಳಿಕ ಅಂಚಟಗೇರಿ ಬಳಿ ಕರೆದೊಯ್ದು ಚಾಕುವಿನಿಂದ ಇರಿದು, ಹಲ್ಲೆ ಮಾಡಿದ್ದಾರೆ. ಇವರ ಮೊಬೈಲ್‌, ಕ್ರೆಡಿಟ್‌ ಕಾರ್ಡ್‌ ಮಾಹಿತಿಯೆಲ್ಲವನ್ನೂ ದೋಚಿ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬಲಬೀರ್ ಹಳೇ ಹುಬ್ಬಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಮೇಶ , ವಿನಾಯಕ, ಗಣೇಶ ಹಾಗೂ ಓರ್ವ ಯುವತಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಚಾಕು, ಎರಡು ಬೈಕ್, ಆರು ಮೊಬೈಲ್ ಹಾಗೂ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ