ಹುಬ್ಬಳ್ಳಿ: ದೇಶದ ವಿವಿಧ ರಾಜ್ಯಗಳಲ್ಲಿ ನಿಷೇಧಿತ ಪೀಟ್ ಬುಲ್ತ ಳಿಯ ನಾಯಿಯೊಂದು ಟ್ಯೂಷನ್ ಮುಗಿಸಿ ಬರುತ್ತಿದ್ದ ಬಾಲಕನ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಪರಿಣಾಮ ಬಾಲಕನೊಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಾಲಕನ ಹೆಸರು ಪವನ ದೊಡ್ಡಮನಿ. ಇಲ್ಲಿನ ಬಂಕಾಪುರ ಚೌಕ್ ಬಳಿ ಇರುವ ಚಿಕ್ಕಲಿಗಾರ ತಾಂಡಾ ನಿವಾಸಿ, ಬಂಕಾಪುರ ಚೌಕ್ ಬಳಿ ಪ್ರತಿನಿತ್ಯದಂತೆ ಟ್ಯೂಷನ್ ಗೆ ಹೋಗಿ ಬರುತ್ತಿದ್ದಾಗ ಮಾಜಿ ಕಾರ್ಪೊರೇಟರ್ ಸಂಬಂಧಿಯೊಬ್ಬರು ಸಾಕಿದ ಪೀಟ್ ಬುಲ್ ನಾಯಿಯೊಂದು ಬಾಲಕನ ಮೇಲೆ ಏಕಾಏಕಿ ಏರಗಿ ಮಾರಣಾಂತಿಕ ದಾಳಿ ಮಾಡಿದ ಪರಿಣಾಮ, ಬಾಲಕನ ತಲೆ, ಕೈ ಹಾಗೂ ಕಾಲಿಗೆ ಗಂಭೀರ ಗಾಯವಾಗಿದೆ.
ಗಾಯಗೊಂಡ ಪವನ ದೊಡ್ಡಮನಿಯನ್ನು ಕೂಡಲೇ ಗಾಯಗೊಂಡ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಇನ್ನು ಅಲ್ಲಿನ ಸ್ಥಳೀಯರು ಹೇಳೋ ಪ್ರಕಾರ ದಾಳಿ ಮಾಡಿದ ಪೀಟ್ ಬುಲ್ ನಾಯಿಯನ್ನು ಯಾವಾಗಲೂ ಯಜಮಾನರು ಹೊರಗಡೆ ಬಿಟ್ಟಿರುತಾರಂತೆ. ಈ ಬಗ್ಗೆ ನಾಯಿಯ ಮಾಲಕರಿಗೆ ಸಾಕಷ್ಟು ಬಾರಿ ಹೇಳಿದರು ಕೂಡಾ ಮಾಲೀಕರು ತಲೆಕೆಡಿಸಿಕೊಳ್ಳದೇ ಬೇಜವಾಬ್ದಾರಿ ತೋರಿದ್ದಾರಂತೆ.
ಈ ಹಿನ್ನೆಲೆಯಲ್ಲಿ ಇಂತಹ ಅಚಾತುರ್ಯ ನಡೆದು ಹೋಗಿದೆ ಎಂದು ಸ್ಥಳೀಯರ ಆರೋಪವಾಗಿದೆ. ಇನ್ನು ಈ ಪೀಟ್ ಬುಲ್ ತಳಿಯ ನಾಯಿ ಅತಿ ಸಿಟ್ಟಿನಲ್ಲಿರುವ ತಳಿಯಾಗಿರುವ ಹಿನ್ನೆಲೆಯಲ್ಲಿ ದೇಶದ ಕೆಲವು ರಾಜ್ಯಗಳಲ್ಲಿ ಈ ತಳಿಯ ನಾಯಿಯನ್ನು ಸಾಕುವುದು ನಿಷೇಧಿಸಿದೆ. ಅಲ್ಲದೇ ಆಯಾ ರಾಜ್ಯ ಸರ್ಕಾರಕ್ಕೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಈ ತಳಿಯ ನಾಯಿಗಳಿಗೆ ಯಾವುದೇ ರೀತಿಯಾದ ನಿಷೇಧ ಇಲ್ಲದ ಹಿನ್ನೆಲೆಯಲ್ಲಿ ಈ ನಾಯಿಯನ್ನು ಕೆಲವರು ಸಾಕುತ್ತಿದ್ದು,ಕೆಲವು ಬಾರಿ ಮಾಲಕರ ನಿರ್ಲಕ್ಷ್ಯದಿಂದ ಈ ರೀತಿಯಾದ ಅವಘಡಗಳು ನಡೆಯುತ್ತಲಿವೆ.
ಒಟ್ಟಿನಲ್ಲಿ ಇನ್ನು ಮೇಲಾದರೂ ರಾಜ್ಯ ಸರಕಾರ ಎಚ್ಚೆತ್ತು ಬೇರೆ ರಾಜ್ಯಗಳಲ್ಲಿ ನಿಷೇಧಿತ ವಾಗಿರುವ ಪೀಟ್ ಬುಲ್ ತಳಿಯ ನಾಯಿಗಳನ್ನು ರಾಜ್ಯದಲ್ಲಿ ಸಾಕಲು ಅವಕಾಶ ಕೊಡಬೇಕು ಅಥವಾ ಬೇಡವೋ ಎಂಬುದನ್ನು ಪ್ರಾಣಿ ತಜ್ಞರ ಜೊತೆ ಚರ್ಚೆ ಮಾಡುವಂತಹ ಕಾರ್ಯಕ್ಕೆ ಮುಂದಾಗಬೇಕಿದೆ.
ಗಾಯಗೊಂಡ ಪವನ ದೊಡ್ಡಮನಿಯನ್ನು ಕೂಡಲೇ ಗಾಯಗೊಂಡ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಇನ್ನು ಅಲ್ಲಿನ ಸ್ಥಳೀಯರು ಹೇಳೋ ಪ್ರಕಾರ ದಾಳಿ ಮಾಡಿದ ಪೀಟ್ ಬುಲ್ ನಾಯಿಯನ್ನು ಯಾವಾಗಲೂ ಯಜಮಾನರು ಹೊರಗಡೆ ಬಿಟ್ಟಿರುತಾರಂತೆ. ಈ ಬಗ್ಗೆ ನಾಯಿಯ ಮಾಲಕರಿಗೆ ಸಾಕಷ್ಟು ಬಾರಿ ಹೇಳಿದರು ಕೂಡಾ ಮಾಲೀಕರು ತಲೆಕೆಡಿಸಿಕೊಳ್ಳದೇ ಬೇಜವಾಬ್ದಾರಿ ತೋರಿದ್ದಾರಂತೆ.
ಈ ಹಿನ್ನೆಲೆಯಲ್ಲಿ ಇಂತಹ ಅಚಾತುರ್ಯ ನಡೆದು ಹೋಗಿದೆ ಎಂದು ಸ್ಥಳೀಯರ ಆರೋಪವಾಗಿದೆ. ಇನ್ನು ಈ ಪೀಟ್ ಬುಲ್ ತಳಿಯ ನಾಯಿ ಅತಿ ಸಿಟ್ಟಿನಲ್ಲಿರುವ ತಳಿಯಾಗಿರುವ ಹಿನ್ನೆಲೆಯಲ್ಲಿ ದೇಶದ ಕೆಲವು ರಾಜ್ಯಗಳಲ್ಲಿ ಈ ತಳಿಯ ನಾಯಿಯನ್ನು ಸಾಕುವುದು ನಿಷೇಧಿಸಿದೆ. ಅಲ್ಲದೇ ಆಯಾ ರಾಜ್ಯ ಸರ್ಕಾರಕ್ಕೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಈ ತಳಿಯ ನಾಯಿಗಳಿಗೆ ಯಾವುದೇ ರೀತಿಯಾದ ನಿಷೇಧ ಇಲ್ಲದ ಹಿನ್ನೆಲೆಯಲ್ಲಿ ಈ ನಾಯಿಯನ್ನು ಕೆಲವರು ಸಾಕುತ್ತಿದ್ದು,ಕೆಲವು ಬಾರಿ ಮಾಲಕರ ನಿರ್ಲಕ್ಷ್ಯದಿಂದ ಈ ರೀತಿಯಾದ ಅವಘಡಗಳು ನಡೆಯುತ್ತಲಿವೆ.
ಒಟ್ಟಿನಲ್ಲಿ ಇನ್ನು ಮೇಲಾದರೂ ರಾಜ್ಯ ಸರಕಾರ ಎಚ್ಚೆತ್ತು ಬೇರೆ ರಾಜ್ಯಗಳಲ್ಲಿ ನಿಷೇಧಿತ ವಾಗಿರುವ ಪೀಟ್ ಬುಲ್ ತಳಿಯ ನಾಯಿಗಳನ್ನು ರಾಜ್ಯದಲ್ಲಿ ಸಾಕಲು ಅವಕಾಶ ಕೊಡಬೇಕು ಅಥವಾ ಬೇಡವೋ ಎಂಬುದನ್ನು ಪ್ರಾಣಿ ತಜ್ಞರ ಜೊತೆ ಚರ್ಚೆ ಮಾಡುವಂತಹ ಕಾರ್ಯಕ್ಕೆ ಮುಂದಾಗಬೇಕಿದೆ.