ಹುಬ್ಬಳ್ಳಿ : ಏನೋ ಮಾಡೋದು ಕಾಯಿಪಲ್ಲೆ ಎಷ್ಟು ತುಟ್ಟಿ ಆಗೈತಿ ನೋಡ್ರಿ..ಹಿಂಗ ತುಟ್ಟಿಯಾದರೆ ಬಡವರು ಏನ್ ತಿನಬೇಕ್ರಿ..ಹೆಂಗ್ ಬದಕಬೇಕರ್ರಿ..ಯಾವುದಾದರೂ ಒಂದೆರಡು ಕಾಯಿಪಲ್ಲೆ ದುಬಾರಿಯಾದರೆ ನಡೆತಿತ್ತ..ಆದರೆ, ಈಗ ನೋಡಿದರೆ ಎಲ್ಲಾ ಕಾಯಿಪಲ್ಲೆ ನೂರರ ಗಡಿ ದಾಟಿವೆ..ಇದು ಬಡವರು ಬದುಕುವ ಕಾಲವಲ್ಲ ಎನ್ನುವ ಮಾತುಗಳು ಪ್ರತಿಯೊಂದು ಮಾರುಕಟ್ಟೆಯಲ್ಲಿ ಕೇಳಿಬರುತ್ತಿವೆ..!
ತರಕಾರಿ ಸಹವಾಸ ಬ್ಯಾಡ್ರಿ..
ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಕೇಳಿದಾಗ ನೂರಕ್ಕೆ ನೂರರಷ್ಟು ನಿಜವೆನಿಸುತ್ತದೆ. ಮಾರುಕಟ್ಟೆಯಲ್ಲಿ ಯಾವುದೇ ತರಕಾರಿ ಬೆಲೆ ನೂರು ರೂ.ಗಳಿಂದ ಕಡಿಮೆ ಇಲ್ಲ. ತರಕಾರಿಗಳ ದರ ಏಕಾಏಕಿ ಗಗನಕ್ಕೇರಿರುವದು ಸಾಮಾನ್ಯ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆಯಲ್ಲದೆ ತರಕಾರಿ ಸಹವಾಸವೇ ಬೇಡ ಎನ್ನುವ ಸ್ಥಿತಿ ನಿಮಾರ್ಣವಾಗಿದೆ.
ಎಲ್ಲಿಲ್ಲೆ..
ಹುಬ್ಬಳ್ಳಿ ದುರ್ಗದಬೈಲ್, ಜನತಾ ಬಜಾರ, ಗಾಂಧಿ ಮಾರ್ಕೇಟ್, ಉಣಕಲ್, ನವನಗರ, ಕೇಶ್ವಾಪುರ, ಹಳೇಹುಬ್ಬಳ್ಳಿ ಹಾಗೂ ಧಾರವಾಡದ ಸೂಪರ್ ಮಾರುಕಟ್ಟೆಗಳಿಗೆ ಭೇಟಿ ನೀಡಿದರೆ ತರಕಾರಿಗಳ ಬೆಲೆ ಕೇಳಿಯೇ ಮೂರ್ಚೆ ಹೋಗಬೇಕು ಅಷ್ಟೊಂದು ದುಬಾರಿಯಾಗಿದೆ.
ತರಕಾರಿ ದರಕ್ಕೆ ತಕರಾರು..
ಮನೆಗಳಲ್ಲಿ ಬಹಳಷ್ಟು ಜನ ಇರುವವರು ಕೇಜಿಗಟ್ಟಲೇ ತರಕಾರಿ ಕೊಳ್ಳುವವರು ಈಗ ಪಾವಕೇಜಿ ಕೊಳ್ಳಲು ಹಲವು ಬಾರಿ ಯೋಚಿಸುತ್ತಿದ್ದಾರೆ. ತರಕಾರಿ ಬೆಲೆ ಏಕಾಏಕಿ ಗಗನಕ್ಕೆ ಏರಿರುವದನ್ನು ಕೇಳಿ ವ್ಯಾಪಾರಸ್ಥರ ಜತೆಗೆ ಗ್ರಾಹಕರು ತಕರಾರು ಮಾಡುತ್ತಿರುವುದು ಮಾರುಕಟ್ಟೆಯಲ್ಲಿ ಕಂಡುಬರುತ್ತಿದೆ. ಮಾರುಕಟ್ಟೆಯಲ್ಲಿ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದ್ದರಿಂದ ಮಾರಾಟಗಾರರು ಬೇಕಾದರೆ ತೆಗೆದುಕೊಳ್ಳಿ ಇಲ್ಲವೇ ಬಿಡಿ ರೇಟ್ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಕಡ್ಡಿ ತುಂಡು ಮುರಿದಂತೆ ಖಡಾ ಕಂಡಿತ ಹೇಳುತ್ತಾರೆ. ಏನೋ ಮಾಡೋದ್ರಿ ಮೊದಲು 10ಕೇಜಿ ತರಕಾರಿ ಬುಟ್ಟಿಗೆ 60ರಿಂದ 100ರೂ.ಗೆ ಸಿಗುತ್ತಿತ್ತು. ಈಗ ಅದೇ ಬುಟ್ಟಿಗೆ 600ರಿಂದ 800ರೂ.ಏರಿದೆ. ಇನ್ನೂ ಸಾಗಾಣೆ ಬಾಡಿಗೆ, ನಾವು ಇಡೀ ದಿನ ಕುಂತಿದ್ದ ಪಗಾರ ಲೆಕ್ಕ ಹಾಕಿದರೆ ನಮಗೂ ಏನೂ ಉಳಿಯುವದಿಲ್ಲ ಎಂದು ತರಕಾರಿ ವ್ಯಾಪಾರಿಗಳು ಹೇಳುತ್ತಾರೆ.
ಕಾಳುಗಳಿಗೆ ಹೆಚ್ಚಿದ ಬೇಡಿಕೆ..
ತರಕಾರಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿರುವುದು ಒಂದಡೆಯಾದರೆ, ಇನ್ನೊಂದಡೆ ಬಡವರು ಹಾಗೂ ಮಧ್ಯಮ ವರ್ಗದವರು ತರಕಾರಿ ಬಿಟ್ಟು ಕಾಳುಗಳನ್ನು ಬಳಸುತ್ತಿದ್ದಾರೆ. ಗೋದಿ, ಜೋಳ, ತೊಗರಿಬೇಳೆ, ಹೆಸರುಕಾಳು, ಹೆಸರುಬೇಳೆ, ಉದ್ದಿನಬೇಳೆ, ಕಡ್ಲಿಬೇಳೆ, ಶೇಂಗಾ, ಮಡಕಿ, ವಠಾಣಿ, ಕಡ್ಲಿ ಸೇರಿದಂತೆ ಇನ್ನಿತರ ಬೆಳೆ ಕಾಳುಗಳು 100ರೂ.ಒಳಗೆ ಇರುವದರಿಂದ ಗ್ರಾಹಕರು ಕಾಳುಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ.
ಬೆಲೆ ಏರಿಕೆಗೆ ಕಾರಣ..
ರಾಜ್ಯದಲ್ಲಿ ಬಿಸಿಲಿನ ಪ್ರಕರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಇತ್ತ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯೂ ಏರುತ್ತಲೇ ಇದೆ. ಗ್ರಾಮೀಣ ಭಾಗದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಉಂಟಾಗಿದ್ದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ತರಕಾರಿ ಬೆಳೆ ಹೆಚ್ಚಳವಾಗಿದ್ದರೂ ರೈತರು ಖುಷಿ ಪಡುವಂತಿಲ್ಲ. ಏಕೆಂದರೆ ಅಂತರ್ಜಲ ಕುಸಿತದಿಂದ ರೈತರ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ. ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತತ್ಪಾರ ಉಂಟಾಗಿದೆ. ಕೃಷಿ ಚಟುವಟಿಕೆ ನಡೆಸಲು ರೈತರು ಪರಿತಪಿಸುವಂತಾಗಿದೆ. ಸರಿಯಾದ ಮಳೆ ಇಲ್ಲದ ಕಾರಣ ಕೆರೆ, ಹಳ್ಳ, ಬೋರವೆಲ್, ನದಿ ಬತ್ತಿ ಹೋಗಿವೆ. ಬೇಸಿಗೆಯಲ್ಲಿ ನೀರಾವರಿಯಿಂದ ಪೂರೈಕೆಯಾಗುವ ತರಕಾರಿಗೆ ಸರಿಯಾಗಿ ನೀರು ಇಲ್ಲದೇ ಇರುವದರಿಂದ ರೈತರು ಬೆಳೆ ಬೆಳೆಯುತ್ತಿಲ್ಲ.ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬರುವದರಿಂದ ತರಕಾರಿ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ಮಹಿಳೆಯರ ಗೋಳು ಕೇಳುವರಾರಯರು..
ಬೆಲೆ ಏರಿಕೆಯಿಂದ ಮನೆಯಲ್ಲಿ ಅಡುಗೆ ಮಾಡುವುದೇ ಕಷ್ಟವಾಗಿದೆ. ಏಕಾಏಕಿ ಬೆಲೆ ಏರುತ್ತದೆ ಇಳಿಯುತ್ತದೆ. ಒಂದೇ ರೀತಿಯ ಬೆಲೆ ಇದ್ದರೆ ಏನೂ ಕಷ್ಟ ಅನಿಸುವದಿಲ್ಲ. ಅಡುಗೆಗೆ ಅವಶ್ಯವಿರುವ ಹಸಿ ಮೆಣಸಿಕಾಯಿ ಬೆಲೆ ಕೇಜಿಗೆ 80ರೂ.ದಿಂದ 100ರೂ.ಆಗಿದೆ. ಹೀಗಾದರೆ ಅಡುಗೆ ಮಾಡುವುದು ಕಷ್ಟವಾಗುತ್ತದೆ. ಕಿರಾಣಿ ಬೆಲೆಗಿಂತ ತರಕಾರಿ ಬೆಲೆ ಹೆಚ್ಚಾಗಿದೆ. ಸೊಪ್ಪು ತರಕಾರಿ ಊಟ ಕಷ್ಟವಾಗಿದೆ. ಬೇಳೆ ಸಾರು ಮಾಡಿ ಊಟ ಮಾಡುವ ಪರಿಸ್ಥಿತಿ ಉಂಟಾಗಿದೆ. ದಿನಕ್ಕೆ ಎಷ್ಟು ಬೇಕು ಅಷ್ಟೇ ತರಕಾರಿ ತೆಗೆದುಕೊಂಡು ಹೋಗುತ್ತಿದ್ದೇವೆ. ಹೆಚ್ಚಿಗೆ ತೆಗೆದುಕೊಂಡು ಹೋದ್ರೆ ಬಿಸಿಲಿನ ಝಳಕ್ಕೆ ಕಮರಿ ಹೋಗುತ್ತಿದೆ ಎನ್ನುತ್ತಾರೆ ದೀಪಾ, ಜ್ಯೋತಿ.
ಬೆಲೆ ಕಡಿಮೆಯಾದೀತೆ..
ಇನ್ನೇನು ಮಳೆಗಾಲ ಆರಂಭವಾಗುತ್ತದೆ. ಭರಪೂರ ಕಾಯಿಪಲ್ಲೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಆವಾಗಲಾದರೂ ಕಾಯಿಪಲ್ಲೆ ದರ ಕಡಿಮೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಗ್ರಾಹಕರು ಹಾಗೂ ಮಾರಾಟಗಾರರು ಇದ್ದು. ಎಲ್ಲವೂ ಅಂದುಕೊಂಡಂತೆಯಾದರೆ ಒಂದೆರಡು ತಿಂಗಳಲ್ಲಿ ಬೆಲೆಯಲ್ಲಿ ಇಳಿಕೆಯಾಗುತ್ತದೆ ಎಂಬ ಭರವಸೆಯಲ್ಲಿ ಗ್ರಾಹಕರು ಹಾಗೂ ವ್ಯಾಪಾರಸ್ಥರು ಮಾತನಾಡುತ್ತಿರುವುದು ಕೇಳಿಬರುತ್ತಿದೆ.
ಕಾಯಿಪಲ್ಲೆ ದರ
ಗಜ್ಜರಿ -80
ಮೆಣಸಿನಕಾಯಿ -80
ಚವಳಿಕಾಯಿ -60
ಡೊಣ್ಣಗಾಯಿ -60
ಬೀನ್ಸ್ -120
ಬೆಂಡಿಕಾಯಿ -60
ಟೊಮೊಟೊ -45
ಉಳ್ಳಾಗಡ್ಡಿ -30
ಬದನೆಕಾಯಿ -50
ಬಳ್ಳೊಳ್ಳಿ-100
ಸೊಪ್ಪು--
ಕೋತಂಬರಿ -25 (ಒಂದು ಸಿವುಡ)
ಮೆಂತೆ -15ರಿಂದ 20 (ಒಂದಕ್ಕೆ)
ಪುದಿನಾ -5ರೂ.
ಕಿರಕಸಾಲ -5ರೂ.
ಪಾಲಕ 5ರೂ.
ಬೆಳೆಕಾಳು-
ಹೆಸರು ಕಾಳು-90 (ಒಂದು ಕೇಜಿಗೆ)
ತೊಗರಿಬೇಳೆ -95
ಮಡಕಿ-84
ಕಡಲೆಬೇಳೆ -70
ಉದ್ದಿನಬೇಳೆ -90
ವಠಾಣಿ -80
ಕಡ್ಲಿಕಾಳು-65
ಅಲಸಂದಿ -68
ಹೆಸರುಬೆಳೆ-90
ತರಕಾರಿ ಸಹವಾಸ ಬ್ಯಾಡ್ರಿ..
ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಕೇಳಿದಾಗ ನೂರಕ್ಕೆ ನೂರರಷ್ಟು ನಿಜವೆನಿಸುತ್ತದೆ. ಮಾರುಕಟ್ಟೆಯಲ್ಲಿ ಯಾವುದೇ ತರಕಾರಿ ಬೆಲೆ ನೂರು ರೂ.ಗಳಿಂದ ಕಡಿಮೆ ಇಲ್ಲ. ತರಕಾರಿಗಳ ದರ ಏಕಾಏಕಿ ಗಗನಕ್ಕೇರಿರುವದು ಸಾಮಾನ್ಯ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆಯಲ್ಲದೆ ತರಕಾರಿ ಸಹವಾಸವೇ ಬೇಡ ಎನ್ನುವ ಸ್ಥಿತಿ ನಿಮಾರ್ಣವಾಗಿದೆ.
ಎಲ್ಲಿಲ್ಲೆ..
ಹುಬ್ಬಳ್ಳಿ ದುರ್ಗದಬೈಲ್, ಜನತಾ ಬಜಾರ, ಗಾಂಧಿ ಮಾರ್ಕೇಟ್, ಉಣಕಲ್, ನವನಗರ, ಕೇಶ್ವಾಪುರ, ಹಳೇಹುಬ್ಬಳ್ಳಿ ಹಾಗೂ ಧಾರವಾಡದ ಸೂಪರ್ ಮಾರುಕಟ್ಟೆಗಳಿಗೆ ಭೇಟಿ ನೀಡಿದರೆ ತರಕಾರಿಗಳ ಬೆಲೆ ಕೇಳಿಯೇ ಮೂರ್ಚೆ ಹೋಗಬೇಕು ಅಷ್ಟೊಂದು ದುಬಾರಿಯಾಗಿದೆ.
ತರಕಾರಿ ದರಕ್ಕೆ ತಕರಾರು..
ಮನೆಗಳಲ್ಲಿ ಬಹಳಷ್ಟು ಜನ ಇರುವವರು ಕೇಜಿಗಟ್ಟಲೇ ತರಕಾರಿ ಕೊಳ್ಳುವವರು ಈಗ ಪಾವಕೇಜಿ ಕೊಳ್ಳಲು ಹಲವು ಬಾರಿ ಯೋಚಿಸುತ್ತಿದ್ದಾರೆ. ತರಕಾರಿ ಬೆಲೆ ಏಕಾಏಕಿ ಗಗನಕ್ಕೆ ಏರಿರುವದನ್ನು ಕೇಳಿ ವ್ಯಾಪಾರಸ್ಥರ ಜತೆಗೆ ಗ್ರಾಹಕರು ತಕರಾರು ಮಾಡುತ್ತಿರುವುದು ಮಾರುಕಟ್ಟೆಯಲ್ಲಿ ಕಂಡುಬರುತ್ತಿದೆ. ಮಾರುಕಟ್ಟೆಯಲ್ಲಿ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದ್ದರಿಂದ ಮಾರಾಟಗಾರರು ಬೇಕಾದರೆ ತೆಗೆದುಕೊಳ್ಳಿ ಇಲ್ಲವೇ ಬಿಡಿ ರೇಟ್ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಕಡ್ಡಿ ತುಂಡು ಮುರಿದಂತೆ ಖಡಾ ಕಂಡಿತ ಹೇಳುತ್ತಾರೆ. ಏನೋ ಮಾಡೋದ್ರಿ ಮೊದಲು 10ಕೇಜಿ ತರಕಾರಿ ಬುಟ್ಟಿಗೆ 60ರಿಂದ 100ರೂ.ಗೆ ಸಿಗುತ್ತಿತ್ತು. ಈಗ ಅದೇ ಬುಟ್ಟಿಗೆ 600ರಿಂದ 800ರೂ.ಏರಿದೆ. ಇನ್ನೂ ಸಾಗಾಣೆ ಬಾಡಿಗೆ, ನಾವು ಇಡೀ ದಿನ ಕುಂತಿದ್ದ ಪಗಾರ ಲೆಕ್ಕ ಹಾಕಿದರೆ ನಮಗೂ ಏನೂ ಉಳಿಯುವದಿಲ್ಲ ಎಂದು ತರಕಾರಿ ವ್ಯಾಪಾರಿಗಳು ಹೇಳುತ್ತಾರೆ.
ಕಾಳುಗಳಿಗೆ ಹೆಚ್ಚಿದ ಬೇಡಿಕೆ..
ತರಕಾರಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿರುವುದು ಒಂದಡೆಯಾದರೆ, ಇನ್ನೊಂದಡೆ ಬಡವರು ಹಾಗೂ ಮಧ್ಯಮ ವರ್ಗದವರು ತರಕಾರಿ ಬಿಟ್ಟು ಕಾಳುಗಳನ್ನು ಬಳಸುತ್ತಿದ್ದಾರೆ. ಗೋದಿ, ಜೋಳ, ತೊಗರಿಬೇಳೆ, ಹೆಸರುಕಾಳು, ಹೆಸರುಬೇಳೆ, ಉದ್ದಿನಬೇಳೆ, ಕಡ್ಲಿಬೇಳೆ, ಶೇಂಗಾ, ಮಡಕಿ, ವಠಾಣಿ, ಕಡ್ಲಿ ಸೇರಿದಂತೆ ಇನ್ನಿತರ ಬೆಳೆ ಕಾಳುಗಳು 100ರೂ.ಒಳಗೆ ಇರುವದರಿಂದ ಗ್ರಾಹಕರು ಕಾಳುಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ.
ಬೆಲೆ ಏರಿಕೆಗೆ ಕಾರಣ..
ರಾಜ್ಯದಲ್ಲಿ ಬಿಸಿಲಿನ ಪ್ರಕರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಇತ್ತ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯೂ ಏರುತ್ತಲೇ ಇದೆ. ಗ್ರಾಮೀಣ ಭಾಗದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಉಂಟಾಗಿದ್ದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ತರಕಾರಿ ಬೆಳೆ ಹೆಚ್ಚಳವಾಗಿದ್ದರೂ ರೈತರು ಖುಷಿ ಪಡುವಂತಿಲ್ಲ. ಏಕೆಂದರೆ ಅಂತರ್ಜಲ ಕುಸಿತದಿಂದ ರೈತರ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ. ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತತ್ಪಾರ ಉಂಟಾಗಿದೆ. ಕೃಷಿ ಚಟುವಟಿಕೆ ನಡೆಸಲು ರೈತರು ಪರಿತಪಿಸುವಂತಾಗಿದೆ. ಸರಿಯಾದ ಮಳೆ ಇಲ್ಲದ ಕಾರಣ ಕೆರೆ, ಹಳ್ಳ, ಬೋರವೆಲ್, ನದಿ ಬತ್ತಿ ಹೋಗಿವೆ. ಬೇಸಿಗೆಯಲ್ಲಿ ನೀರಾವರಿಯಿಂದ ಪೂರೈಕೆಯಾಗುವ ತರಕಾರಿಗೆ ಸರಿಯಾಗಿ ನೀರು ಇಲ್ಲದೇ ಇರುವದರಿಂದ ರೈತರು ಬೆಳೆ ಬೆಳೆಯುತ್ತಿಲ್ಲ.ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬರುವದರಿಂದ ತರಕಾರಿ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ಮಹಿಳೆಯರ ಗೋಳು ಕೇಳುವರಾರಯರು..
ಬೆಲೆ ಏರಿಕೆಯಿಂದ ಮನೆಯಲ್ಲಿ ಅಡುಗೆ ಮಾಡುವುದೇ ಕಷ್ಟವಾಗಿದೆ. ಏಕಾಏಕಿ ಬೆಲೆ ಏರುತ್ತದೆ ಇಳಿಯುತ್ತದೆ. ಒಂದೇ ರೀತಿಯ ಬೆಲೆ ಇದ್ದರೆ ಏನೂ ಕಷ್ಟ ಅನಿಸುವದಿಲ್ಲ. ಅಡುಗೆಗೆ ಅವಶ್ಯವಿರುವ ಹಸಿ ಮೆಣಸಿಕಾಯಿ ಬೆಲೆ ಕೇಜಿಗೆ 80ರೂ.ದಿಂದ 100ರೂ.ಆಗಿದೆ. ಹೀಗಾದರೆ ಅಡುಗೆ ಮಾಡುವುದು ಕಷ್ಟವಾಗುತ್ತದೆ. ಕಿರಾಣಿ ಬೆಲೆಗಿಂತ ತರಕಾರಿ ಬೆಲೆ ಹೆಚ್ಚಾಗಿದೆ. ಸೊಪ್ಪು ತರಕಾರಿ ಊಟ ಕಷ್ಟವಾಗಿದೆ. ಬೇಳೆ ಸಾರು ಮಾಡಿ ಊಟ ಮಾಡುವ ಪರಿಸ್ಥಿತಿ ಉಂಟಾಗಿದೆ. ದಿನಕ್ಕೆ ಎಷ್ಟು ಬೇಕು ಅಷ್ಟೇ ತರಕಾರಿ ತೆಗೆದುಕೊಂಡು ಹೋಗುತ್ತಿದ್ದೇವೆ. ಹೆಚ್ಚಿಗೆ ತೆಗೆದುಕೊಂಡು ಹೋದ್ರೆ ಬಿಸಿಲಿನ ಝಳಕ್ಕೆ ಕಮರಿ ಹೋಗುತ್ತಿದೆ ಎನ್ನುತ್ತಾರೆ ದೀಪಾ, ಜ್ಯೋತಿ.
ಬೆಲೆ ಕಡಿಮೆಯಾದೀತೆ..
ಇನ್ನೇನು ಮಳೆಗಾಲ ಆರಂಭವಾಗುತ್ತದೆ. ಭರಪೂರ ಕಾಯಿಪಲ್ಲೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಆವಾಗಲಾದರೂ ಕಾಯಿಪಲ್ಲೆ ದರ ಕಡಿಮೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಗ್ರಾಹಕರು ಹಾಗೂ ಮಾರಾಟಗಾರರು ಇದ್ದು. ಎಲ್ಲವೂ ಅಂದುಕೊಂಡಂತೆಯಾದರೆ ಒಂದೆರಡು ತಿಂಗಳಲ್ಲಿ ಬೆಲೆಯಲ್ಲಿ ಇಳಿಕೆಯಾಗುತ್ತದೆ ಎಂಬ ಭರವಸೆಯಲ್ಲಿ ಗ್ರಾಹಕರು ಹಾಗೂ ವ್ಯಾಪಾರಸ್ಥರು ಮಾತನಾಡುತ್ತಿರುವುದು ಕೇಳಿಬರುತ್ತಿದೆ.
ಕಾಯಿಪಲ್ಲೆ ದರ
ಗಜ್ಜರಿ -80
ಮೆಣಸಿನಕಾಯಿ -80
ಚವಳಿಕಾಯಿ -60
ಡೊಣ್ಣಗಾಯಿ -60
ಬೀನ್ಸ್ -120
ಬೆಂಡಿಕಾಯಿ -60
ಟೊಮೊಟೊ -45
ಉಳ್ಳಾಗಡ್ಡಿ -30
ಬದನೆಕಾಯಿ -50
ಬಳ್ಳೊಳ್ಳಿ-100
ಸೊಪ್ಪು--
ಕೋತಂಬರಿ -25 (ಒಂದು ಸಿವುಡ)
ಮೆಂತೆ -15ರಿಂದ 20 (ಒಂದಕ್ಕೆ)
ಪುದಿನಾ -5ರೂ.
ಕಿರಕಸಾಲ -5ರೂ.
ಪಾಲಕ 5ರೂ.
ಬೆಳೆಕಾಳು-
ಹೆಸರು ಕಾಳು-90 (ಒಂದು ಕೇಜಿಗೆ)
ತೊಗರಿಬೇಳೆ -95
ಮಡಕಿ-84
ಕಡಲೆಬೇಳೆ -70
ಉದ್ದಿನಬೇಳೆ -90
ವಠಾಣಿ -80
ಕಡ್ಲಿಕಾಳು-65
ಅಲಸಂದಿ -68
ಹೆಸರುಬೆಳೆ-90