ಆ್ಯಪ್ನಗರ

ಹುಬ್ಬಳ್ಳಿ ಲಘು ಸ್ಫೋಟ -ರೈಲಿನಲ್ಲಿ ಸಿಕ್ಕ ಬಾಕ್ಸ್‌ಗಳು ಯಾರಿಗೆ ಸೇರಿದ್ದು?

ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ನಡೆದ ಲಘು ಸ್ಫೋಟ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಸ್ಫೋಟಕ ಹೊಂದಿರುವ ಬಾಕ್ಸ್‌ಗಳಲ್ಲಿ ಕಂಡುಬಂದಿರುವ ರಾಜಕೀಯ ಬರಹಗಳು ಕುತೂಹಲ ಕೆರಳಿಸಿವೆ

Vijaya Karnataka Web 21 Oct 2019, 4:58 pm
ಹುಬ್ಬಳ್ಳಿ- ಧಾರವಾಡ: ಹಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ನಡೆದ ನಿಗೂಢ ಸ್ಫೋಟ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ರೈಲಿನಲ್ಲಿದ್ದ ಅನುಮಾನಾಸ್ಪದ ಬಾಕ್ಸ್‌ಗಳನ್ನು ಪರಿಶೀಲನೆ ಮಾಡುವ ವೇಳೆ ಸ್ಫೋಟ ಸಂಭವಿಸಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾನೆ. ಸ್ಫೋಟಗೊಂಡ ಬಾಕ್ಸ್‌ನಲ್ಲಿ ರಾಜಕೀಯ ಬರಹಗಳು ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
Vijaya Karnataka Web hubballi bomb


ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ ವಿಜಯವಾಡ - ಅಮರಾವತಿ ಎಕ್ಸ್ ಪ್ರಸ್ ರೈಲಿನಲ್ಲಿ 10 ಬಾಕ್ಸ್‌ಗಳು ಪತ್ತೆಯಾಗಿದ್ದವು. ರೈಲು ಕ್ಲೀನಿಂಗ್ ಮಾಡುವ ವೇಳೆ ಬಾಕ್ಸ್ ಬಗ್ಗೆ ಅನುಮಾನಗೊಂಡ ರೈಲ್ವೇ ಭದ್ರತಾ ಸಿಬಂಧಿ (ಆರ್‌ಪಿಎಫ್) ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಬಾಕ್ಸ್‌ನಲ್ಲಿದ್ದ ವಸ್ತು ಸ್ಫೋಟಗೊಂಡಿದೆ.

ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಸ್ಪೋಟ -ನಗರದಲ್ಲಿ ಹೈ ಅಲರ್ಟ್

ಘಟನೆಯಲ್ಲಿ ಹುಸೇನ್ ಸಾಬ್ ಎಂಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಹುಸೇನ್ ಸಾಬ್ ರೈಲ್ವೇ ನಿಲ್ದಾಣದಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿರುವ ವ್ಯಕ್ತಿಯಾಗಿದ್ದಾರೆ. ಆರ್‌ಪಿಎಫ್ ಸಿಬಂಧಿ ಸೂಚನೆಯಂತೆ ಹುಸೇನ್ ಸಾಬ್ ಅನುಮಾನಾಸ್ಪದ ಬಾಕ್ಸ್ ತೆರೆದಿದ್ದಾರೆ. ಈ ಸಂದರ್ಭದಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದೆ.


ಬಾಕ್ಸ್ ಮೇಲಿತ್ತು ರಾಜಕೀಯ ಬರಹ?

ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಸ್ಫೋಟಗೊಂಡ ಬಾಕ್ಸ್‌ನಲ್ಲಿ ಕಾಣಿಸಿಕೊಂಡ ರಾಜಕೀಯ ಬರಹಗಳು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಬಾಕ್ಸ್‌ನಲ್ಲಿ ಪ್ರಕಾಶ್ ರಾವ್ ಅಬಿಟ್ಕರ್, ಬುಧರ್ ಘಡ್, ಎಂಎಲ್ಎ ಗರ್ಗೋಟಿ ಕೊಲ್ಹಾಪುರ ಎಂಬ ವಿಲಾಸವನ್ನು ಬರೆಯಲಾಗಿದೆ. ಆದರೆ ಇದನ್ನು ಯಾರು ಕಲುಹಿಸಿಕೊಟ್ಟರು ಎಂಬುವುದು ಪತ್ತೆಯಾಗಿಲ್ಲ. ಅವರ ವಿಲಾಸವೂ ಬಾಕ್ಸ್‌ನಲ್ಲಿ ಕಂಡುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಫೋಟಗೊಂಡಿದ್ದು ಫೀಲ್ಡ್ ಬಾಂಬಾ ?

ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಸ್ಫೋಟಗೊಂಡಿದ್ದು ಫೀಲ್ಡ್ ಬಾಂಬಾ ಎಂಬ ಸಂಶಯಗಳು ವ್ಯಕ್ತವಾಗಿವೆ. ತೋಟಕ್ಕೆ ಬರುವ ಪ್ರಾಣಿಗಳನ್ನು ಓಡಿಸಲು ಈ ಲಘು ಸ್ಫೋಟಕವನ್ನು ಬಳಕೆ ಮಾಡಲಾಗುತ್ತದೆ. ಆದರೆ ಅನುಮಾನಾಸ್ಪದವಾಗಿ ರೈಲಿನಲ್ಲಿ ಯಾಕೆ ಸಾಗಿಸಲಾಗಿದೆ ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಗಲಿಲ್ಲ.
ರೈಲ್ವೇ ನಿಲ್ದಾಣಕ್ಕೆ ಆಗಮಿಸಿರುವ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸುತ್ತಿದ್ದು ಮುಂಜಾಗರೂಕತಾ ಕ್ರಮವಾಗಿ ಬಾಕ್ಸ್‌ಗಳನ್ನು ರೈಲ್ವೇ ನಿಲ್ದಾಣದ ಪಕ್ಕದಲ್ಲಿರುವ ಖಾಲಿ ಜಮೀನಿನಲ್ಲಿ ಹೂತಿಡಲಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂಧೋಬಸ್ಥ್ ಕೈಗೊಳ್ಳಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ