ಆ್ಯಪ್ನಗರ

ಸಾಂಕ್ರಾಮಿಕ ರೋಗ ತಡೆಗೆ 'ಗಪ್ಪಿ‌‌ ಮೀನು'ಗಳ ಮೊರೆ ಹೋದ ಹುಬ್ಬಳ್ಳಿ - ಧಾರವಾಡ ಪಾಲಿಕೆ

ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳ ಹೆಚ್ಚಾಳ ಸಾಮಾನ್ಯ. ಜನರ ಆರೋಗ್ಯದ ದೃಷ್ಟಿಯಿಂದ ಸಾಂಕ್ರಾಮಿಕ ಕಾಯಿಲೆ ಹರಡುವ ಕೀಟಗಳ ನಾಶಪಡಿಸುವುದು ಮಹತ್ವದಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದು, ಗಪ್ಪಿ ಮೀನುಗಳ ಮೂಲಕ ಸಾಂಕ್ರಾಮಿಕ ರೋಗ ತಡೆಗಟ್ಟಲು ವಿಶೇಷ ಅಭಿಯಾನ ಆರಂಭಿಸಿದೆ.

Vijaya Karnataka Web 25 Jul 2022, 8:38 pm
ಹುಬ್ಬಳ್ಳಿ: ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳ ಹೆಚ್ಚಾಳ ಸಾಮಾನ್ಯ. ಜನರ ಆರೋಗ್ಯದ ದೃಷ್ಟಿಯಿಂದ ಸಾಂಕ್ರಾಮಿಕ ಕಾಯಿಲೆ ಹರಡುವ ಕೀಟಗಳ ನಾಶಪಡಿಸುವುದು ಮಹತ್ವದಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದು, ಗಪ್ಪಿ ಮೀನುಗಳ ಮೂಲಕ ಸಾಂಕ್ರಾಮಿಕ ರೋಗ ತಡೆಗಟ್ಟಲು ವಿಶೇಷ ಅಭಿಯಾನ ಆರಂಭಿಸಿದೆ.
Vijaya Karnataka Web guppy fish


ಹೌದು, ನಿರಂತರ ನೀರು ಸಂಗ್ರಹವಾಗುವ ಸ್ಥಳಗಳಲ್ಲಿ ಈ ಮೀನುಗಳನ್ನು ಬಿಡಲಾಗುತ್ತಿದ್ದು, ಮಹಾನಗರ ಪಾಲಿಕೆಗಳ ಪೈಕಿ ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಡೆಂಗ್ಯೂ, ಮಲೇರಿಯಾ, ಚಿಕೂನ್‌ಗುನ್ಯ ಸೇರಿದಂತೆ ಕೆಲ ಸಾಂಕ್ರಾಮಿಕ ರೋಗಗಳ ಭೀತಿ ಸೃಷ್ಟಿಸಿದೆ. ಅಲ್ಲಲ್ಲಿ ನಿರ್ಮಾಣವಾಗಿರುವ ತಗ್ಗು ಪ್ರದೇಶಗಳು, ಅಲ್ಲಲ್ಲಿ ನೀರು ಹರಿಯದೆ ನಿಂತಿರುವ ನಾಲಾಗಳು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುವಂತಿವೆ.

ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ತಪ್ಪಿಸಲು ಈ ಸೊಳ್ಳೆಪರದೆಗಳನ್ನು ಮನೆಗೆ ತನ್ನಿ..

ಇಂತಹ ಪ್ರದೇಶಗಳನ್ನು ಗುರುತಿಸಿ ಅಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇನ್ನು ಪ್ರಮುಖವಾಗಿ ನಗರದ ಉಣಕಲ್,‌ ನಾಗಶೆಟ್ಟಿಕೊಪ್ಪ, ಸಂತೋಷನಗರ ಕರೆ ಸೇರಿದಂತೆ ನಗರದ 21 ಕೆರೆ, ಬೃಹತ್, ಸಣ್ಣಪುಟ್ಟ ನಾಲಾಗಳಲ್ಲಿಯೂ ಕೂಡ ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ. ಆರೋಗ್ಯ ಇಲಾಖೆಗೆ ಈ ಗಪ್ಪಿ ಮೀನುಗಳನ್ನು ಮಹಾನಗರ ಪಾಲಿಕೆಗೆ ನೀಡಿದ್ದು, ಮೊದಲ ಹಂತದಲ್ಲಿ ಕೆರೆಗೆ 5 ಸಾವಿರ ಮೀನುಗಳಂತೆ ಬಿಡಲಾಗುತ್ತಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ಪ್ರಯೋಗಕ್ಕೆ ಪಾಲಿಕೆಯ ಆರೋಗ್ಯ ಇಲಾಖೆ ಮುಂದಾಗಿದೆ. ಈ ಗಪ್ಪಿ ಮೀನುಗಳನ್ನು ಬಳಸುತ್ತಿರುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ.

ಡೆಂಗ್ಯೂ ಹರಡುವ ಸೊಳ್ಳೆಗಳಿಗೆ 'ಹೆಣ್ಣು ಸೊಳ್ಳೆಗಳ' ಟ್ರ್ಯಾಪ್‌: ಲ್ಯಾಬ್‌ನಲ್ಲಿ ಸೊಳ್ಳೆ ಸೇನೆ ಸಜ್ಜು

ನೀರಿನ ಮೇಲ್ಪದರಿನಲ್ಲಿ ಉತ್ಪತ್ತಿಯಾಗುವ ಲಾರ್ವಾವನ್ನು ತಿಂದು ಜೀವಿಸುವ ಗಪ್ಪಿ ಮೀನು ಇಂತಹ ನೀರಿನಲ್ಲಿ ಮಲೇರಿಯಾ ಹರಡಿಸುವಂತಹ ಲಾರ್ವಾಗಳು ನಾಶ ಮಾಡಿ ರೋಗಗಳನ್ನು ಹರಡಲು ಬಿಡುವುದಿಲ್ಲಾ. ಈ ನಿಟ್ಟಿನಲ್ಲಿ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವೈದ್ಯಾಧಿಕಾರಿಗಳ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮುಂದಿನ ಲೇಖನ