ಆ್ಯಪ್ನಗರ

ಹುಬ್ಬಳ್ಳಿ: ಶಾಸಕ ಅಬ್ಬಯ್ಯ ಕೊರೊನಾದಿಂದ ಗುಣಮುಖ, ಡಿಸ್‌ಚಾರ್ಜ್‌

ಇದೊಂದು ಸಾಮಾನ್ಯ ಜ್ವರ, ಶೀತದಂಥ ಕಾಯಿಲೆಯಾಗಿದೆ. ಜನರು ಕೊರೊನಾ ಕುರಿತಾಗಿ ಅನಗತ್ಯ ಆತಂಕ ಪಡಬೇಕಿಲ್ಲ. ಆತ್ಮಸ್ಥೈರ್ಯವಿದ್ದರೆ ಎಂಥ ಕಾಯಿಲೆಗಳನ್ನು ಸಹ ಗೆದ್ದು ಬರಬಹುದಾಗಿದೆ. ಇನ್ನೆರಡು ದಿನದಲ್ಲಿ ಕುಟುಂಬದ ಎಲ್ಲಾ 13 ಸದಸ್ಯರೂ ಸಹ ಬಿಡುಗಡೆ ಹೊಂದಲಿದ್ದಾರೆ

Vijaya Karnataka Web 20 Jul 2020, 12:50 pm
ಹುಬ್ಬಳ್ಳಿ: ಕೊರೊನಾ ಜನರು ಭಾವಿಸಿರುವಂತೆ ಮಹಾಮಾರಿ ರೋಗವಲ್ಲ. ಹಾಗಂತ ಅದರ ಕುರಿತು ದಿವ್ಯ ನಿರ್ಲಕ್ಷ್ಯ ವಹಿಸುವುದೂ ಸರಿಯಲ್ಲಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದ್ದಾರೆ.
Vijaya Karnataka Web ಪ್ರಸಾದ್‌ ಅಬ್ಬಯ್ಯ
ಪ್ರಸಾದ್‌ ಅಬ್ಬಯ್ಯ


ಕೊರೊನಾ ಸೋಂಕಿನಿಂದ ಗುಣಮುಖರಾಗಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಹಿಂದಿರುಗಿರುವ ಅವರು ಜನರಿಗೆ ಒಂದಷ್ಟು ಮಾಹಿತಿ ನೀಡಿದ್ದಾರೆ.

''ಸೋಂಕು ದೃಢಪಟ್ಟಾಗ ಆರಂಭದಲ್ಲಿ ನಾನೂ ಸಹ ಸಾಮಾನ್ಯರಂತೆ ಸಹಜವಾಗಿ ಭಯಭೀತನಾಗಿ ಆತಂಕಕ್ಕೊಳಗಾಗಿದ್ದೆ. ಆದರೆ, ಕಿಮ್ಸ್‌ನಲ್ಲಿ ಉತ್ತಮ ಚಿಕಿತ್ಸೆ, ಅಲ್ಲಿನ ವೈದ್ಯರ ಸಲಹೆ, ಮಾರ್ಗದರ್ಶನದಿಂದಾಗಿ ಕೊರೊನಾ ಸೋಂಕು ಹೊರಗಿನ ಜನರು ತಿಳಿದುಕೊಂಡಷ್ಟು ಭಯಾನಕವಲ್ಲಎಂಬ ಭಾವನೆ ಮೂಡಿತು'' ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

''ಇದೊಂದು ಸಾಮಾನ್ಯ ಜ್ವರ, ಶೀತದಂಥ ಕಾಯಿಲೆಯಾಗಿದೆ. ಜನರು ಕೊರೊನಾ ಕುರಿತಾಗಿ ಅನಗತ್ಯ ಆತಂಕ ಪಡಬೇಕಿಲ್ಲ. ಆತ್ಮಸ್ಥೈರ್ಯವಿದ್ದರೆ ಎಂಥ ಕಾಯಿಲೆಗಳನ್ನು ಸಹ ಗೆದ್ದು ಬರಬಹುದಾಗಿದೆ. ಇನ್ನೆರಡು ದಿನದಲ್ಲಿಕುಟುಂಬದ ಎಲ್ಲಾ 13 ಸದಸ್ಯರೂ ಸಹ ಬಿಡುಗಡೆ ಹೊಂದಲಿದ್ದಾರೆ'' ಎಂದಿದ್ದಾರೆ.

ಖಾಸಗಿ ಆಸ್ಪತ್ರೆಗಳ ವಿರುದ್ಧ ಆಕ್ರೋಶ

''ಕುಟುಂಬದ ಕೆಲ ಸದಸ್ಯರಿಗೆ ಸೋಂಕು ತಗುಲಿದಾಗ ಆರಂಭದಲ್ಲಿ ಕಿಮ್ಸ್‌ನಲ್ಲಿ ಬೆಡ್‌ ಖಾಲಿ ಇರಲಿಲ್ಲ. ಆಗ ಅವರನ್ನು ಗೋಕುಲ ರಸ್ತೆಯ ಅಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ, ಸರಕಾರದ ನಿರ್ದೇಶನವಿದ್ದರೂ ಎರಡು ದಿನ ವೈದ್ಯರು ಚಿಕಿತ್ಸೆ ನೀಡಲಿಲ್ಲ. ಅಲ್ಲದೇ ದುಬಾರಿ ಬಿಲ್‌ ನೀಡಿದ್ದು, ಇದು ಅತ್ಯಂತ ಬೇಜವಾಬ್ದಾರಿತನವಾಗಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ