ಆ್ಯಪ್ನಗರ

ಆರೋಗ್ಯವಂತನನ್ನೇ ಕೊರೊನಾ ಸೋಂಕಿತ ಎಂದು ವದಂತಿ ಹಬ್ಬಿಸಿದ ಇಬ್ಬರ ಬಂಧನ!

ಕೊರೊನಾ ಸೋಂಕಿತ ವ್ಯಕ್ತಿ ಎಂದು ಆರೋಗ್ಯವಂತ ವ್ಯಕ್ತಿಯ ಫೋಟೋವೊಂದನ್ನು ವಾಟ್ಸ್​ಆ್ಯಪ್​​ನಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ಇಬ್ಬರನ್ನು ಬಂಧಿಸಲಾಗಿದೆ. ಹೊಸಯಲ್ಲಾಪೂರದ ಇಬ್ಬರು ನಿವಾಸಿಗಳನ್ನು ಬಂಧಿಸಲಾಗಿದೆ.

Vijaya Karnataka Web 26 Mar 2020, 3:50 pm
ಹುಬ್ಬಳ್ಳಿ: ಕೊರೊನಾ ಸೋಂಕಿತ ವ್ಯಕ್ತಿ ಎಂದು ಆರೋಗ್ಯವಂತ ವ್ಯಕ್ತಿಯ ಫೋಟೋವೊಂದನ್ನು ವಾಟ್ಸ್ಆ್ಯಪ್ನಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ಇಬ್ಬರನ್ನು ಬಂಧಿಸಲಾಗಿದೆ.
Vijaya Karnataka Web Coronavirus 9


ಇಲ್ಲಿಯ ಹೊಸಯಲ್ಲಾಪೂರದ ನಿವಾಸಿ ಅಭಿಷೇಕ ಜೋಶಿ(19)ಹಾಗೂ ಯಾಲಕ್ಕಿ ಶೆಟ್ಟರ್ ಕಾಲೊನಿಯ ಪ್ರಮೋದ ಶೇಟ್ (26) ಬಂಧಿತ ಆರೋಪಿಗಳು.

ಹೊಸಯಲ್ಲಾಪುರ ಪ್ರದೇಶದ ಓರ್ವ ವ್ಯಕ್ತಿಗೆ ಕೋವಿಡ್- 19 ಪಾಸಿಟಿವ್ ವರದಿ ಬಂದಿದ್ದ ವೇಳೆ, ಈ ಇಬ್ಬರು ಆರೋಪಿಗಳು ಆರೋಗ್ಯವಂತ ವ್ಯಕ್ತಿ ಹಾಗೂ ಪತ್ರಕರ್ತ ಅರುಣ ಎಂಬುವರ ಪೋಟೋ ದುರ್ಬಳಕೆ ಮಾಡಿದ್ದರು. ಅವರ ಫೋಟೋವನ್ನು ವಾಟ್ಸ್ಆ್ಯಪ್ನಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿದ್ದರು.

ಕೊರೊನಾ ಪರಿಹಾರಕ್ಕೆ ಕೇಂದ್ರದಿಂದ 1.70 ಲಕ್ಷ ಕೋಟಿ ಬಿಡುಗಡೆ, ಅಭಿನಂದನೆ ಸಲ್ಲಿಸಿದ ಬಿಎಸ್‌ವೈ

ಹೀಗಾಗಿ ಪತ್ರಕರ್ತ ಮಿತ್ರರು ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿ ಎಂ. ದೀಪಾ ಅವರಿಗೆ ದೂರು ನೀಡಿದ್ದರು. ಅದರಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹು- ಧಾ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸುಳ್ಳು ಸುದ್ದಿಗಳನ್ನು ಸೃಷ್ಟಿಸಿದ ಮತ್ತು ಫಾರ್ವರ್ಡ್ ಮಾಡಿದ ಇಬ್ಬರು ಕಿಡಿಗೇಡಿಗಳ‌ನ್ನು ಬಂಧಿಸಿದ್ದಾರೆ.

ರಾಜ್ಯದಲ್ಲಿ ಮತ್ತೆ ನಾಲ್ವರಿಗೆ ಕೊರೊನಾ, ಒಟ್ಟು ಪ್ರಕರಣ 55ಕ್ಕೆ ಏರಿಕೆ; ಸೋಂಕಿಗೆ ಇಬ್ಬರು ಬಲಿ!

ಆಗಿದ್ದು ಹೇಗೆ?
ಧಾರವಾಡದ ವ್ಯಕ್ತಿಗೆ ಕೋವಿಡ್-೧೯ ವೈರಸ್ ಇರುವುದು ಧೃಡಪಟ್ಟಿತ್ತು. ಇದರ ಬೆನ್ನಲ್ಲೆ ಪ್ರಕರಣ ಪತ್ತೆಯಾದ ಬಗ್ಗೆ ಅರುಣ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು. ಇದನ್ನು ಪಾಲೋ ಮಾಡಿದ ಅಭಿಷೇಕ ಸ್ಕ್ರೀನ್ ಶಾಟ್ ಹೊಡೆದು ಕೊಂಡು ಪತ್ರಕರ್ತ ಅರುಣ ಅವರ ಪೋಟೋವನ್ನು ಡೌನಲೊಡ್ ಮಾಡಿಕೊಂಡು ವ್ಯಾಟ್ಸ್ ಆ್ಯಪ್ನಲ್ಲಿ ಹರಿಬಿಟ್ಟಿದ್ದಾನೆ.

ನಂತರ ಈ ಪೋಟೋದ ಜತೆಗೆ ಕೋವಿಡ್-19 ವೈರಸ್ ಹೊಂದಿರುವ ವ್ಯಕ್ತಿ ಎಂದು ವ್ಯಾಟ್ಸ ಆ್ಯಪ್ ಸೇರಿದಂತೆ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಈ ಮೂಲಕ ಅರುಣಗೆ ಕೊರೊನಾ ವೈರಸ್ ಇದೇ ಎಂಬಂತೆ ಬಿಂಬಿಸಿದ್ದರು.

ಸೈಬರ್ ಕ್ರೈಂ ಪೊಲೀಸ್ ಠಾಣೆ ಪಿಐ ಡಿ.ಕೆ. ಪ್ರಭುಗೌಡ ನೇತೃತ್ವದ ತಂಡ ಬಂಧಿಸಿದೆ. ಬಂಧಿತ ಇಬ್ಬರು ಆರೋಪಿಗಳ ಕುರಿತು ಪ್ರತ್ಯೇಕವಾಗಿ ಧಾರವಾಡ ಶಹರ ಮತ್ತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ