ಆ್ಯಪ್ನಗರ

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಅಸ್ತು: ಸ್ವಾಗತ

ಹುಬ್ಬಳ್ಳಿ: ಹಲವು ವರ್ಷಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ-ಅಂಕೋಲಾ ರೇಲ್ವೆ ಯೋಜನೆಗೆ ರಾಜ್ಯ ಸರಕಾರದ ಅನುಮೋದನೆ ದೊರೆತಿರುವುದಕ್ಕೆ ಕರ್ನಾಟಕ ಚೇಂಬರ್‌ ಆಫ್‌ ಕಾಮರ್ಸ್‌ ಸಂತಸ ವ್ಯಕ್ತಪಡಿಸಿದೆ.

Vijaya Karnataka 22 Mar 2020, 5:00 am
ಹುಬ್ಬಳ್ಳಿ: ಹಲವು ವರ್ಷಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ-ಅಂಕೋಲಾ ರೇಲ್ವೆ ಯೋಜನೆಗೆ ರಾಜ್ಯ ಸರಕಾರದ ಅನುಮೋದನೆ ದೊರೆತಿರುವುದಕ್ಕೆ ಕರ್ನಾಟಕ ಚೇಂಬರ್‌ ಆಫ್‌ ಕಾಮರ್ಸ್‌ ಸಂತಸ ವ್ಯಕ್ತಪಡಿಸಿದೆ.
Vijaya Karnataka Web hubli ankola railway welcome
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಅಸ್ತು: ಸ್ವಾಗತ


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಸ್ಥೆ, ಸಂಸ್ಥೆಯು ಏಳು ದಶಕಗಳಿಗಿಂತಲೂ ಹೆಚ್ಚು ಕಾಲ ಈ ಯೋಜನೆ ಜಾರಿಗೆ ಹಲವಾರು ಹೋರಾಟಗಳಲ್ಲಿಭಾಗಿಯಾಗಿತ್ತು. ಬಯಲು ಸೀಮೆ ಹಾಗೂ ಕರಾವಳಿಯನ್ನು ಬೆಸೆಯುವ ಮಹತ್ವಾಕಾಂಕ್ಷಿ ರೈಲು ಮಾರ್ಗ ಯೋಜನೆ ನಿರ್ಮಾಣಕ್ಕೆ ರಾಜ್ಯ ವನ್ಯ ಜೀವಿ ಮಂಡಳಿ ಒಪ್ಪಿಗೆ ಸೂಚಿಸಿರುವುದು ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಯೋಜನೆ ಜಾರಿಗೆ ಕಾರಣೀಭೂತರಾದ ಸಿಎಂ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ರೇಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಮಾಜಿ ಸಚಿವ ಅನಂತಕುಮಾರ ಹೆಗಡೆ, ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹಾಗೂ ಕರಾವಳಿ ಮತ್ತು ಉ.ಕ. ಭಾಗದ ಹಾಲಿ ಮತ್ತು ಮಾಜಿ ಶಾಸಕರ ಪ್ರಯತ್ನ ಅಮೋಘವಾಗಿದೆ.

ಈ ಯೋಜನೆಯಿಂದ ವ್ಯಾಪಾರ ಉದ್ದಿಮೆಯ ಜತೆಗೆ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಸಹ ಬೆಳೆಸಿದಂತಾಗುವುದು. ಈ ಮಾರ್ಗದಲ್ಲಿಕಬ್ಬಿಣದ ಅದಿರು ಸಾಗಣೆಗಾಗಿ ಪ್ರಮುಖ ಕೆಲ ಉಕ್ಕು ಕಬ್ಬಿಣ ಕೈಗಾರಿಕಾ ಘಟಕಗಳು ಆರಂಭವಾಗಲು ಅನುಕೂಲವಾಗುವುದು. ಉತ್ತರ ಕನ್ನಡ ಜಿಲ್ಲೆಯ 150 ಕಿ.ಮೀ. ಉದ್ದ ದೀರ್ಘ ಕರಾವಳಿ ಪ್ರದೇಶಕ್ಕೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಘಟ್ಟದ ಪ್ರದೇಶಕ್ಕೆ ಮುಂಬಯಿ-ಮಂಗಳೂರು-ಕೇರಳಕ್ಕೆ ಹೆಚ್ಚು ಸಂಪರ್ಕ ಕಲ್ಪಿಸಿದಂತಾಗುತ್ತದೆ. ಬೇಗನೆ ಈ ಯೋಜನೆಗೆ ಜಾಲನೆ ನೀಡಬೇಕು ಎಂದು ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ, ಉಪಾಧ್ಯಕ್ಷ ವಿನಯ ಜೆ. ಜವಳಿ, ಸಿದ್ದೇಶ್ವರ ಕಮ್ಮಾರ, ಜಿ.ಜಿ.ಹೊಟ್ಟಿಗೌಡರ, ಗೌರವ ಕಾರ್ಯದರ್ಶಿ ಅಶೋಕ ಗಡಾದ ಹಾಗೂ ಗೌರವ ಕಾರ್ಯದರ್ಶಿ ಉಮೇಶ ಗಡ್ಡದ ಜಂಟಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ