ಆ್ಯಪ್ನಗರ

ಹುಬ್ಬಳ್ಳಿಗೆ ಕ್ಯಾನ್ಸರ್‌ ಆಸ್ಪತ್ರೆ,ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಭರವಸೆ

ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿಜಯದೇವ ಹೃದ್ರೋಗ ಸಂಸ್ಥೆ, ಕಿದ್ವಾಯಿ ಸಹಯೋಗದಲ್ಲಿಆದಷ್ಟು ಬೇಗನೆ ಕ್ಯಾನ್ಸರ್‌ ಹಾಗೂ ಮೂತ್ರಪಿಂಡ ಕಾಯಿಲೆ ಆಸ್ಪತ್ರೆ ಸ್ಥಾಪನೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಭರವಸೆ ನೀಡಿದರು.

Vijaya Karnataka 22 Nov 2020, 5:00 am
ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿಜಯದೇವ ಹೃದ್ರೋಗ ಸಂಸ್ಥೆ, ಕಿದ್ವಾಯಿ ಸಹಯೋಗದಲ್ಲಿಆದಷ್ಟು ಬೇಗನೆ ಕ್ಯಾನ್ಸರ್‌ ಹಾಗೂ ಮೂತ್ರಪಿಂಡ ಕಾಯಿಲೆ ಆಸ್ಪತ್ರೆ ಸ್ಥಾಪನೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಭರವಸೆ ನೀಡಿದರು.
Vijaya Karnataka Web 21 SANTOSH KIMS_21
ಹುಬ್ಬಳ್ಳಿ ಕಿಮ್ಸ… ಆಸ್ಪತ್ರೆಯ ನೂತನ ಆಡಳಿತ ಭವನ, ಕಾರ್ಡಿಯಾಲಜಿ ಆಸ್ಪತ್ರೆ, ಸ್ಕಿಲ್‌ ಲ್ಯಾಬ್‌ ಹಾಗೂ ರೆಟಿನಾ ಕ್ಲಿನಿಕ್‌ಗಳ ನೂತನ ಕಟ್ಟಡಗಳನ್ನು ಸಚಿವ ಕೆ.ಸುಧಾಕರ್‌ ಶನಿವಾರ ಉದ್ಘಾಟಿಸಿದರು. ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್‌, ಬಸವರಾಜ ಹೊರಟ್ಟಿ ಮತ್ತಿತರರು ಇದ್ದರು.


ಕಿಮ್ಸ…ನ ನೂತನ ಆಡಳಿತ ಭವನ, ಕಾರ್ಡಿಯಾಲಜಿ(ಹೃದ್ರೋಗ) ಆಸ್ಪತ್ರೆ, ಶವಾಗಾರ, ಸ್ಕಿಲ್‌ ಲ್ಯಾಬ್‌ ಹಾಗೂ ರೆಟಿನಾ ಕ್ಲಿನಿಕ್‌ಗಳ ನೂತನ ಕಟ್ಟಡಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

''ಕಿಮ್ಸ…ನಲ್ಲಿ19 ಕೋಟಿ ವೆಚ್ಚದ ಆಡಳಿತ ಭವನ, 2.8 ಕೋಟಿ ವೆಚ್ಚದ ಸ್ಕಿಲ್‌ ಲ್ಯಾಬ…, 6.88 ಕೋಟಿ ವೆಚ್ಚದ ಸುಸಜ್ಜಿತ ಹೃದ್ರೋಗ ಆಸ್ಪತ್ರೆ, 1.1 ಕೋಟಿ ವೆಚ್ಚದ ಆಧುನಿಕ ಶವಾಗಾರ, 1 ಕೋಟಿ ವೆಚ್ಚದ ರೆಟಿನಾ ಕ್ಲಿನಿಕ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್‌ ಶೆಟ್ಟರ್‌ ಪ್ರಯತ್ನ ಮತ್ತು ಕಾಳಜಿಯಿಂದಾಗಿ ಕಿಮ್ಸ… ಉತ್ತಮ ದಿಶೆಯಲ್ಲಿಸಾಗುತ್ತಿದೆ'' ಎಂದು ಹೇಳಿದರು.

''ರಾಜ್ಯದಲ್ಲಿಕೋವಿಡ್‌ ನಿಯಂತ್ರಣದಲ್ಲಿದೆ. ಇದುವರೆಗೆ 1 ಕೋಟಿ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯ ಸರಕಾರ ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ 300 ಕೋಟಿ ರೂ. ವ್ಯಯಿಸಿದೆ'' ಎಂದರು.

ಉತ್ತಮ ಕಾರ್ಯ ನಿರ್ವಹಣೆ
ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ''ಕಿಮ್ಸ… ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಖಾಸಗಿ ಆಸ್ಪತ್ರೆಗಳು ಕೋವಿಡ್‌ ಸಂದರ್ಭದಲ್ಲಿಚಿಕಿತ್ಸೆ ನೀಡಲು ಸಿದ್ಧವಿಲ್ಲದಾಗ ಕಿಮ್ಸ… ಉತ್ತಮ ಸೇವೆ ನೀಡಿದೆ'' ಎಂದು ಶ್ಲಾಘಿಸಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ''ಸರಕಾರ ಕಿಮ್ಸ್‌ಗೆ ಹೆಚ್ಚಿನ ಅನುದಾನ ನೀಡುವುದರ ಜತೆಗೆ ಗುತ್ತಿಗೆ ನೌಕರರ ಕಾಯಂಗೊಳಿಸಬೇಕು'' ಎಂದು ಆಗ್ರಹಿಸಿದರು.

ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ, ''ಕೊರೊನಾ ಸೋಂಕಿತರನ್ನು ಖಾಸಗಿ ಆಸ್ಪತ್ರೆ ವೈದ್ಯರು ನೋಡಿಕೊಳ್ಳುತ್ತಿರಲಿಲ್ಲ. ಎಲ್ಲರೂ ಕಿಮ್ಸ…ಗೆ ಕಳುಹಿಸುತ್ತಿದ್ದರು. ಆಗ ಕಿಮ್ಸ… ರೋಗಿಗಳಿಗೆ ಉತ್ತಮ ಸೇವೆ ನೀಡಿದೆ'' ಎಂದರು .

ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್‌.ಪಾಟೀಲ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಶಾಸಕರಾದ ಪ್ರಸಾದ ಅಬ್ಬಯ್ಯ , ಸಿ.ಎಂ. ನಿಂಬಣ್ಣನವರ, ಕುಸುಮಾವತಿ ಶಿವಳ್ಳಿ, ಮುಖಂಡ ನಾಗೇಶ್‌ ಕಲಬುರ್ಗಿ, ಟಿ.ಕೆ.ಅನಿಲ್‌ ಕುಮಾರ್‌, ನಿರ್ದೇಶಕ ಡಾ.ಪಿ.ಗಿರೀಶ್‌, ಡಾ.ಸಿ.ಎನ್‌.ಮಂಜುನಾಥ, ಡಿಸಿ ನಿತೇಶ್‌ ಪಾಟೀಲ, ಕಿಮ್ಸ… ನಿರ್ದೇಶಕ ಡಾ.ರಾಮಲಿಂಗ ಅಂಟರತಾನಿ,ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಡಾ.ಎಂ.ಸಿ.ಚಂದ್ರು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ