ಆ್ಯಪ್ನಗರ

ಮಹಾನಗರ ಪಾಲಿಕೆ ಆಯುಕ್ತರ ಸೊತ್ತು ಜಪ್ತಿಗೆ ಆದೇಶ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಚೇರ್ ಸಹಿತ ಕಂಪ್ಯೂಟರ್, ವಸ್ತುಗಳುನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶ ಮಾಡಿದೆ.

Vijaya Karnataka Web 2 Jun 2018, 9:41 pm
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಚೇರ್ ಸಹಿತ ಕಂಪ್ಯೂಟರ್, ವಸ್ತುಗಳುನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶ ಮಾಡಿದೆ.
Vijaya Karnataka Web hubli dharawad


2007ರಲ್ಲಿ ಟೆಂಡರ್ ನಿಯಮಗಳ ಪ್ರಕಾರ, ಗುತ್ತಿಗೆದಾರ ಸುರೇಶ್ ಕೋದಾನಪುರ್ ಎಂಬುವರು ಪಾಲಿಕೆಗೆ 1 ಕೋಟಿ 2 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಲಿಗೆ ಯಂತ್ರ ಸೇರಿದಂತೆ ಹಲವಾರು ಪೀಠೋಪಕರಣ ವಿತರಣೆ ಮಾಡಿದ್ದರು. ಆದರೆ ಪಾಲಿಕೆ ಪೂರ್ತಿ ಹಣ ನೀಡದೆ 35 ಲಕ್ಷ ರೂ. ಹಣ ಬಾಕಿ ಉಳಿಸಿಕೊಂಡಿತ್ತು.

ಸುಮಾರು ಹತ್ತು ವರ್ಷ ಕಳೆದರೂ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡಿರಲಿಲ್ಲ. ಇದರಿಂದ ಗುತ್ತಿಗೆದಾರ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಹುಬ್ಬಳ್ಳಿಯ ಎರಡನೇ ಜೆಎಮ್ಎಫ್‌ಸಿ ನ್ಯಾಯಾಲಯ, ಆಯುಕ್ತರ ಕಚೇರಿ ಜಪ್ತಿ ಮಾಡುವಂತೆ ಆದೇಶ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಶನಿವಾರ ನ್ಯಾಯಾಲಯದ ಸಿಬ್ಬಂದಿ ಆಯುಕ್ತರ ಕಚೇರಿ ಜಪ್ತಿ ಮಾಡಿದ್ದಾರೆ. ಈ ಮಧ್ಯೆ ಪಾಲಿಕೆ ಆಯುಕ್ತರು ಹಣ ಸಂದಾಯ ಮಾಡಲು ಕಾಲಾವಕಾಶ ಕೇಳಿದ್ದರಿಂದ ಜಪ್ತಿ ಅರ್ಧಕ್ಕೆ ನಿಲ್ಲಿಸಿ ಒಂದು ವಾರಗಳ ಕಾಲ ಕಾಲಾವಕಾಶ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ