ಆ್ಯಪ್ನಗರ

ಹುಬ್ಬಳ್ಳಿ: ಮರ ಬಿದ್ದೀತು ಜೋಕೆ..!

ಹುಬ್ಬಳ್ಳಿ: ರಾತ್ರಿ ವೇಳೆ ಮಳೆ ಬಂದರೆ, ಜೋರಾಗಿ ಗಾಳಿ ಬೀಸಿದರೆ ಏನಾಗುತ್ತದೆಯೋ ಗೊತ್ತಿಲ್ಲ. ಈ ರಸ್ತೆಯಲ್ಲಿಮಾತ್ರ ಸಂಚರಿಸಲು ಅಂಜಿಕೆ ಆಗುತ್ತದೆ. ಇಂತಹದೊಂದು ಆತಂಕದ ಮಾತು ಜನರಲ್ಲಿಮನೆ ಮಾಡಿದೆ.

Vijaya Karnataka 14 Oct 2020, 5:00 am
ಹುಬ್ಬಳ್ಳಿ: ರಾತ್ರಿ ವೇಳೆ ಮಳೆ ಬಂದರೆ, ಜೋರಾಗಿ ಗಾಳಿ ಬೀಸಿದರೆ ಏನಾಗುತ್ತದೆಯೋ ಗೊತ್ತಿಲ್ಲ. ಈ ರಸ್ತೆಯಲ್ಲಿಮಾತ್ರ ಸಂಚರಿಸಲು ಅಂಜಿಕೆ ಆಗುತ್ತದೆ. ಇಂತಹದೊಂದು ಆತಂಕದ ಮಾತು ಜನರಲ್ಲಿಮನೆ ಮಾಡಿದೆ.
Vijaya Karnataka Web 13 SANTOSH TREE_21
ಹುಬ್ಬಳ್ಳಿಯ ನವನಗರದ ಕರ್ನಾಟಕ ವೃತ್ತದ ಬಳಿ ಬೀಳುವ ಸ್ಥಿತಿಯಲ್ಲಿರುವ ಬೃಹತ್‌ ಮರ.


ಹುಬ್ಬಳ್ಳಿಯ ನವನಗರದ ಕರ್ನಾಟಕ ವೃತ್ತದಲ್ಲಿಬೃಹತ್‌ ಮರವೊಂದು ಸಂಪೂರ್ಣವಾಗಿ ಬಾಗಿ ನಿಂತಿದ್ದು, ಯಾವ ಸಂದರ್ಭದಲ್ಲಿಬೇಕಾದರೂ ಬೀಳುವ ಸ್ಥಿತಿಯಲ್ಲಿದೆ. ಅಲ್ಲದೇ ಜೋರಾಗಿ ಮಳೆ ಬಂದರೆ ಹಾಗೂ ಗಾಳಿ ಬೀಸಿದರೆ ಇಲ್ಲಿಯ ನಿವಾಸಿಗಳು ಕೈಯಲ್ಲಿಜೀವ ಹಿಡಿದುಕೊಂಡೆ ಓಡಾಡಬೇಕಿದೆ. ಅಪ್ಪಿತಪ್ಪಿ ಮರ ನೆಲಕ್ಕೆ ಉರುಳಿದರೆ ದೊಡ್ಡ ಪ್ರಮಾಣದ ಅವಘಡ ಖಂಡಿತ.

ಈ ಕುರಿತು ಮಹಾನಗರ ಪಾಲಿಕೆಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಕ್ತ ಕ್ರಮ ಜರುಗಿಸಬೇಕು ಎಂಬುದು ಅಲ್ಲಿನ ನಿವಾಸಿಗಳ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ