ಹುಬ್ಬಳ್ಳಿ: ನಾನೊಬ್ಬ ಲೇಖಕ. ಬರವಣಿಗೆ ಮೂಲಕ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ಬಿ.ಎಸ್. ಯಡಿಯೂರಪ್ಪ ನನಗಿಂತ ದೊಡ್ಡವರು. ಅವರಿಗೆ ಅಧಿಕಾರದ ಆಸೆ ಇರಬೇಕಾದರೆ ನನಗೆ ಇರಬಾರದಾ? ಎಂದು ಎಂಎಲ್ಸಿ ಎಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಶುಕ್ರವಾರ ಹುಬ್ಬಳ್ಳಿಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಬರುವಾಗ ಮುಂಬೈನಲ್ಲಿ ಕೆಲ ದಿನಗಳ ಕಾಲ ಕಳೆದ ದಿನಗಳ ಬಗ್ಗೆ ‘ಬಾಂಬೆ ದಿನಗಳು’ ಪುಸ್ತಕ ಬರೆಯುತ್ತೇನೆ. ಯಡಿಯೂರಪ್ಪ ಏನು ಮಾತು ಕೊಟ್ಟಿದ್ದರು ಎನ್ನುವುದು ಸೇರಿದಂತೆ ಎಲ್ಲವನ್ನೂ ಪುಸ್ತಕದಲ್ಲಿ ಬಹಿರಂಗಪಡಿಸುತ್ತೇನೆ ಎಂದರು.
ನಾನು ಮಂತ್ರಿ ಮಾಡಿ ಎಂದು ಯಾರನ್ನೂ ಕೇಳಿಲ್ಲ ಎಂದ ವಿಶ್ವನಾಥ್, ಆದರೆ ಮುಖ್ಯಮಂತ್ರಿ ಜೊತೆ ನಡೆಸಿದ ಸುದೀರ್ಘ ಚರ್ಚೆ, ಅಂದು ಅವರು ಕೊಟ್ಟ ಮಾತು ಈಡೇರಿಸಬೇಕಿತ್ತು. ನಾನು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿಲ್ಲ. ಮಾತಿನ ಮೇಲೆ, ನಡವಳಿಕೆ ಮೇಲೆ ಯಾವುದೇ ಪಕ್ಷ ಉಳಿದಿಲ್ಲ. ಯಾವುದೇ ನಾಯಕರು ಮಾತು ಉಳಿಸಿಕೊಳ್ಳುತ್ತಿಲ್ಲ. ಯಡಿಯೂರಪ್ಪನವರು ನನಗೆ ಯಾಕೆ ಸಚಿವ ಸ್ಥಾನ ಕೊಟ್ಟಿಲ್ಲಾ ಎಂಬುದನ್ನು ಅವರೇ ಹೇಳಬೇಕು. ನಮಗೆ ಮಾತು ಕೊಟ್ಟಿದ್ದರು. ಅದು ಏನು ಎಂಬುದು ಅವರೇ ಬಹಿರಂಗಪಡಿಸಲಿ ಎಂದರು ಸವಾಲು ಹಾಕಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ, ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರ ಹಾಕಿದ ಅವರು, ಜೈಲಿಗೆ ಹೋಗಬೇಕಾದ ಯೋಗೇಶ್ವರ್ ಸಚಿವರಾಗಿದ್ದಾರೆ. ಕೆಲ ದಿನಗಳಲ್ಲಿ ಜೈಲಿಗೆ ಹೋಗುತ್ತಾರೆ. ಯಡಿಯೂರಪ್ಪ ಕಾಮಧೇನು ಇದ್ದಂತೆ. ಅವರ ಜೀವ ವಿಜಯೇಂದ್ರನ ಕೈಯಲ್ಲಿ ಇದೆ. ಯಡಿಯೂರಪ್ಪ ಅವರ ಈಗಿನ ಪರಿಸ್ಥಿತಿ ನೋಡಿದರೆ ನಾಲಿಗೆ ಕಳೆದುಕೊಂಡ ನಾಯಕ, ದಾರಿ ತಪ್ಪಿದ ಮಗ’ ಎಂದು ತಲೆಬರಹ ಕೊಡಬಹುದು ಎಂದು ವ್ಯಂಗ್ಯವಾಡಿದರು.
ಇನ್ನು ಇದೇ 17ರಂದು ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೋರಿದ್ದೇನೆ. ಆಗ ರಾಜ್ಯದ ಬೆಳವಣಿಗೆಯನ್ನು ಅವರ ಗಮನಕ್ಕೆ ತರುತ್ತೇನೆ ಎಂದ ವಿಶ್ವನಾಥ್, ನಾನು ಯಾವುದೇ ರೀತಿ ಬಂಡಾಯ ಏಳುವ ಮಾತಿಲ್ಲ. ಸಿಡಿ ವಿಚಾರವಾಗಿ ಯತ್ನಾಳ್ ಅವರು ಹೇಳಬೇಕು. ನಾನು ಸಿಡಿ ಇದೆ ಎಂದು ಹೇಳಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು. ಜೊತೆಗೆ ಬಿಜೆಪಿಯಲ್ಲಿ ಕುಟುಂಬ ರಾಜಕಾರಣದ ಹಾವಳಿ ಹೆಚ್ಚಾಗಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಕುಟುಂಬ ರಾಜಕಾರಣದಲ್ಲಿ ತೊಡಗಿದ್ದಾರೆ. ಇದರಿಂದ ನರೇಂದ್ರ ಮೋದಿ ಬೇಸರಗೊಂಡಿದ್ದಾರೆ ಎಂದು ತಿಳಿಸಿದರು.
ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡಿದರೆ, ನಾವೇ ನಗೆಪಾಟಿಲಿಗೆ ಒಳಗಾಗಬೇಕಾಗುತ್ತದೆ ಎಂದ ಅವರು, ಎಲ್ಲ ಪಕ್ಷಗಳ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನನ್ನ ಹೋರಾಟ ಪಕ್ಷಗಳ ವಿರುದ್ಧ ಅಲ್ಲ. ನಾಯಕರ ದುರಂಹಕಾರದ ವಿರುದ್ದ ಅಷ್ಟೇ ಎಂದರು.
ಶುಕ್ರವಾರ ಹುಬ್ಬಳ್ಳಿಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಬರುವಾಗ ಮುಂಬೈನಲ್ಲಿ ಕೆಲ ದಿನಗಳ ಕಾಲ ಕಳೆದ ದಿನಗಳ ಬಗ್ಗೆ ‘ಬಾಂಬೆ ದಿನಗಳು’ ಪುಸ್ತಕ ಬರೆಯುತ್ತೇನೆ. ಯಡಿಯೂರಪ್ಪ ಏನು ಮಾತು ಕೊಟ್ಟಿದ್ದರು ಎನ್ನುವುದು ಸೇರಿದಂತೆ ಎಲ್ಲವನ್ನೂ ಪುಸ್ತಕದಲ್ಲಿ ಬಹಿರಂಗಪಡಿಸುತ್ತೇನೆ ಎಂದರು.
ನಾನು ಮಂತ್ರಿ ಮಾಡಿ ಎಂದು ಯಾರನ್ನೂ ಕೇಳಿಲ್ಲ ಎಂದ ವಿಶ್ವನಾಥ್, ಆದರೆ ಮುಖ್ಯಮಂತ್ರಿ ಜೊತೆ ನಡೆಸಿದ ಸುದೀರ್ಘ ಚರ್ಚೆ, ಅಂದು ಅವರು ಕೊಟ್ಟ ಮಾತು ಈಡೇರಿಸಬೇಕಿತ್ತು. ನಾನು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿಲ್ಲ. ಮಾತಿನ ಮೇಲೆ, ನಡವಳಿಕೆ ಮೇಲೆ ಯಾವುದೇ ಪಕ್ಷ ಉಳಿದಿಲ್ಲ. ಯಾವುದೇ ನಾಯಕರು ಮಾತು ಉಳಿಸಿಕೊಳ್ಳುತ್ತಿಲ್ಲ. ಯಡಿಯೂರಪ್ಪನವರು ನನಗೆ ಯಾಕೆ ಸಚಿವ ಸ್ಥಾನ ಕೊಟ್ಟಿಲ್ಲಾ ಎಂಬುದನ್ನು ಅವರೇ ಹೇಳಬೇಕು. ನಮಗೆ ಮಾತು ಕೊಟ್ಟಿದ್ದರು. ಅದು ಏನು ಎಂಬುದು ಅವರೇ ಬಹಿರಂಗಪಡಿಸಲಿ ಎಂದರು ಸವಾಲು ಹಾಕಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ, ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರ ಹಾಕಿದ ಅವರು, ಜೈಲಿಗೆ ಹೋಗಬೇಕಾದ ಯೋಗೇಶ್ವರ್ ಸಚಿವರಾಗಿದ್ದಾರೆ. ಕೆಲ ದಿನಗಳಲ್ಲಿ ಜೈಲಿಗೆ ಹೋಗುತ್ತಾರೆ. ಯಡಿಯೂರಪ್ಪ ಕಾಮಧೇನು ಇದ್ದಂತೆ. ಅವರ ಜೀವ ವಿಜಯೇಂದ್ರನ ಕೈಯಲ್ಲಿ ಇದೆ. ಯಡಿಯೂರಪ್ಪ ಅವರ ಈಗಿನ ಪರಿಸ್ಥಿತಿ ನೋಡಿದರೆ ನಾಲಿಗೆ ಕಳೆದುಕೊಂಡ ನಾಯಕ, ದಾರಿ ತಪ್ಪಿದ ಮಗ’ ಎಂದು ತಲೆಬರಹ ಕೊಡಬಹುದು ಎಂದು ವ್ಯಂಗ್ಯವಾಡಿದರು.
ಇನ್ನು ಇದೇ 17ರಂದು ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೋರಿದ್ದೇನೆ. ಆಗ ರಾಜ್ಯದ ಬೆಳವಣಿಗೆಯನ್ನು ಅವರ ಗಮನಕ್ಕೆ ತರುತ್ತೇನೆ ಎಂದ ವಿಶ್ವನಾಥ್, ನಾನು ಯಾವುದೇ ರೀತಿ ಬಂಡಾಯ ಏಳುವ ಮಾತಿಲ್ಲ. ಸಿಡಿ ವಿಚಾರವಾಗಿ ಯತ್ನಾಳ್ ಅವರು ಹೇಳಬೇಕು. ನಾನು ಸಿಡಿ ಇದೆ ಎಂದು ಹೇಳಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು. ಜೊತೆಗೆ ಬಿಜೆಪಿಯಲ್ಲಿ ಕುಟುಂಬ ರಾಜಕಾರಣದ ಹಾವಳಿ ಹೆಚ್ಚಾಗಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಕುಟುಂಬ ರಾಜಕಾರಣದಲ್ಲಿ ತೊಡಗಿದ್ದಾರೆ. ಇದರಿಂದ ನರೇಂದ್ರ ಮೋದಿ ಬೇಸರಗೊಂಡಿದ್ದಾರೆ ಎಂದು ತಿಳಿಸಿದರು.
ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡಿದರೆ, ನಾವೇ ನಗೆಪಾಟಿಲಿಗೆ ಒಳಗಾಗಬೇಕಾಗುತ್ತದೆ ಎಂದ ಅವರು, ಎಲ್ಲ ಪಕ್ಷಗಳ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನನ್ನ ಹೋರಾಟ ಪಕ್ಷಗಳ ವಿರುದ್ಧ ಅಲ್ಲ. ನಾಯಕರ ದುರಂಹಕಾರದ ವಿರುದ್ದ ಅಷ್ಟೇ ಎಂದರು.