ಆ್ಯಪ್ನಗರ

ನಂಗಿಂತ ಒಳ್ಳೇ ಹಿಂದೂ ಬಿಜೆಪಿಯಲ್ಲಿ ಯಾರಿದ್ದಾರೆ: ಸಿದ್ದರಾಮಯ್ಯ ಪ್ರಶ್ನೆ

ನಾನು ತಿಲಕದ ಬಗ್ಗೆ ನೀಡದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮಾರಮ್ಣನ ದೇವಸ್ಥಾನದಲ್ಲಿ ಹಾಕಿದಂತೆ ಕ್ರಿಮಿನಲ್‌ಗಳು ಉದ್ದುದ್ದ ನಾಮ ಹಾಕಿದವರನ್ನು ಕಂಡರೆ ಭಯ ಎಂದು ಹೇಳಿದ್ದೆ.

Vijaya Karnataka Web 9 Mar 2019, 12:53 pm
ಹುಬ್ಬಳ್ಳಿ: 'ನಾನು ತಿಲಕದ ಬಗ್ಗೆ ನೀಡದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮಾರಮ್ಣನ ದೇವಸ್ಥಾನದಲ್ಲಿ ಹಾಕಿದಂತೆ ಕ್ರಿಮಿನಲ್‌ಗಳು ಉದ್ದುದ್ದ ನಾಮ ಹಾಕಿದವರನ್ನು ಕಂಡರೆ ಭಯ ಎಂದು ಹೇಳಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆ ನೀಡಿದ್ದಾರೆ.
Vijaya Karnataka Web siddaramaiah


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಮನುಷ್ಯತ್ವ ಇರುವ ಹಿಂದೂ. ನನಗಿಂತ ಒಳ್ಳೆಯ ಹಿಂದೂ ಬಿಜೆಪಿಯಲ್ಲಿ ಯಾರಾದರೂ ಇದ್ದಾರೆಯೇ? ಎಂದು ಪ್ರಶ್ನಿಸಿದರು.

ರಫೇಲ್‌ ಪ್ರಕರಣದ ದಾಖಲು ಕಳುವು ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ದಾಖಲೆ ಕಳುವಾಗಿಲ್ಲ. ಝರಾಕ್ಸ್ ಮಾಡಿಕೊಂಡಿದ್ದಾರೆ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ. ಆದರೆ, ರಫೇಲ್‌ ಹಗರಣದ ದಾಖಲು ಮುಚ್ಚಿಡುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ರಫೇಲ್ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಣ ಹೂಡೆದಿದ್ದಾರೆ. ಅದಕ್ಕೆ ದಾಖಲೆ ಮುಚ್ಚಿಡುತ್ತಿದ್ದಾರೆ. ಅವರ ಗೊಂದಲದ ನಡೆ ನೋಡಿದರೆ, ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ