ಧಾರವಾಡ : ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸುವ ಕೆಲಸವನ್ನು ಸೃಷ್ಟಿ ರಸಿಕರ ಸಂಘ ಮಾಡುತ್ತಿದೆ ಎಂದು ಹಿರಿಯ ಸಾಹಿತಿ ಡಾ.ವಿ.ಸಿ ಐರಸಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಕಲ್ಯಾಣ ನಗರದ ನಿಸರ್ಗ ಬಡಾವಣೆಯ ಸೌರಭ ಸಭಾಂಗಣದಲ್ಲಿ ಯುಗಾದಿ ರಸಸಂಜೆ ಸಂಗೀತ ಕಾರ್ಯಕ್ರಮದ ಅಧ್ಯಕ್ಷ ತೆವಹಿಸಿ ಅವರು ಮಾತನಾಡಿದರು.
ಕಲಾವಿದರು ಸಮಾಜದಲ್ಲಿಬಹಳಷ್ಟು ಜನರಿದ್ದಾರೆ. ಆದರೆ ಅವರನ್ನು ಗುರುತಿಸುವಲ್ಲಿ ಸರ್ಕಾರ ವಿಫಲವಾಗಿವೆ.ಆದರೆ ಇಂದು ಸಮಾಜ ಜನ ಕಾರ್ಯನಿರ್ವಹಿಸುವ ಪ್ರತಿಭಾಸಕ್ತರು ಗುರುತಿಸುವ ಕೆಲಸಮಾಡುತ್ತಿದ್ದಾರೆ. ಅಲ್ಲದೇ ಎಷ್ಟೋ ಕಲಾವಿದರಿಗೆ ಸೂಕ್ತ ವೇದಿಕೆಯಾಗಿ ಸೃಷ್ಟಿ ರಸಿಕರ ಸಂಘ ಮಾಡುತ್ತಿದೆ ಅತಂಹ ಸಂಘ ಸಂಸ್ಥೆಗಳನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಧಾರವಾಡ ಘರಾಣೆಯ ಹಿರಿಯ ಸಿತಾರವಾದಕ ಉಸ್ತಾದ ಶಷೀಕಖಾನ್ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪ್ರತಿವರ್ಷವು ಸೃಷ್ಟಿ ರಸಿಕರ ಸಂಘ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸುತ್ತಿರುವುದು ಸಮಾಜ ಮುಖಿ ಕಾರ್ಯ. ಸಮಾಜದಲ್ಲಿ ಕಲಾವಿದರಿಗೆ ಸಂಗೀತ, ಸಾಹಿತ್ಯ,ನಾಟಕ ಮುಂತಾದ ಕಾರ್ಯಕ್ರಮ ಬೆಳೆಸುವ ಕೆಲಸ ಮಾಡುತಿದೆ ಎಂದು ಅತಿಥಿ ಸನ್ಮಾನಿತ ಕಲಾವಿದ ಉಸ್ತಾದ ಶಫೀಕಖಾನ ಹೇಳಿದರು.ನಂತರ ಉಸ್ತಾದ ಶಫೀಕ ಖಾನ ಅವರ ಸಿತಾರ ವಾದನದಲ್ಲಿ ರಾಗ ಭಾಗೇಶ್ರೀ ನುಡಿಸಿ ಕಲಾಭಿಮಾನಿಗಳನ್ನು ಮನಸೂರೆಗೊಳಿಸಿದರು. ಇವರಿಗೆ ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರ ಸಮರ್ಥವಾಗಿ ತಬಲಾ ಸಾಥ್ ನೀಡಿದರು.
ಚೈತ್ರಾ ಬೆಟಗೇರಿ ಹಾಗೂ ಸುರಭಿ ಕುಲಕರ್ಣಿ ದ್ವಂದ್ವ ಗಾಯನ ಪ್ರಸ್ತುತ ಪಡಿಸಿದರು. ಅವರಿಗೆ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ ತಬಲಾ ಸಾಥ… ನೀಡಿದರೆ ಶರಣಕುಮಾರ ಕೊತ್ತಲಚಿಂತ ಹಾಮೊರ್ೕನಿಯಂ ಸಾಥ್ ನೀಡಿದರು. ಶ್ರೀ ಆದಿಶಕ್ತಿ ಮಹಿಳಾ ಮಂಡಳದ ಸದಸ್ಯರಾದ ಸಾವಿತ್ರಿ ಬಡಿಗೇರ, ಲೀಲಾ ಪಾಟೀಲ,ಸುರೇಖಾ ಸುರೇಶ್ ಮನೋಜ್ಞ ಅಭಿನಯದಿಂದ ಮೂಡಿಬಂದ ಹಾಸ್ಯ ನಾಟಕ ಹೊಳೆಯಲ್ಲಿ ಹೋಮ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದರು. ಸುರೇಶ ಗೋವಿಂದರೆಡ್ಡಿ ಸ್ವಾಗತಿಸಿದರು. ನಾಗಲಿಂಗ್ ಮುರಗಿ ಪ್ರಾಸ್ತಾವಿಕ ಮಾತನಾಡಿದರು.ಸುರಭಿ ಸುರೇಶ ಪ್ರಾಥಿಸಿದರು. ಸುರೇಖಾ ಸುರೇಶ ವಂದಿಸಿದರು.
ನಗರದ ಕಲ್ಯಾಣ ನಗರದ ನಿಸರ್ಗ ಬಡಾವಣೆಯ ಸೌರಭ ಸಭಾಂಗಣದಲ್ಲಿ ಯುಗಾದಿ ರಸಸಂಜೆ ಸಂಗೀತ ಕಾರ್ಯಕ್ರಮದ ಅಧ್ಯಕ್ಷ ತೆವಹಿಸಿ ಅವರು ಮಾತನಾಡಿದರು.
ಕಲಾವಿದರು ಸಮಾಜದಲ್ಲಿಬಹಳಷ್ಟು ಜನರಿದ್ದಾರೆ. ಆದರೆ ಅವರನ್ನು ಗುರುತಿಸುವಲ್ಲಿ ಸರ್ಕಾರ ವಿಫಲವಾಗಿವೆ.ಆದರೆ ಇಂದು ಸಮಾಜ ಜನ ಕಾರ್ಯನಿರ್ವಹಿಸುವ ಪ್ರತಿಭಾಸಕ್ತರು ಗುರುತಿಸುವ ಕೆಲಸಮಾಡುತ್ತಿದ್ದಾರೆ. ಅಲ್ಲದೇ ಎಷ್ಟೋ ಕಲಾವಿದರಿಗೆ ಸೂಕ್ತ ವೇದಿಕೆಯಾಗಿ ಸೃಷ್ಟಿ ರಸಿಕರ ಸಂಘ ಮಾಡುತ್ತಿದೆ ಅತಂಹ ಸಂಘ ಸಂಸ್ಥೆಗಳನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಧಾರವಾಡ ಘರಾಣೆಯ ಹಿರಿಯ ಸಿತಾರವಾದಕ ಉಸ್ತಾದ ಶಷೀಕಖಾನ್ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪ್ರತಿವರ್ಷವು ಸೃಷ್ಟಿ ರಸಿಕರ ಸಂಘ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸುತ್ತಿರುವುದು ಸಮಾಜ ಮುಖಿ ಕಾರ್ಯ. ಸಮಾಜದಲ್ಲಿ ಕಲಾವಿದರಿಗೆ ಸಂಗೀತ, ಸಾಹಿತ್ಯ,ನಾಟಕ ಮುಂತಾದ ಕಾರ್ಯಕ್ರಮ ಬೆಳೆಸುವ ಕೆಲಸ ಮಾಡುತಿದೆ ಎಂದು ಅತಿಥಿ ಸನ್ಮಾನಿತ ಕಲಾವಿದ ಉಸ್ತಾದ ಶಫೀಕಖಾನ ಹೇಳಿದರು.ನಂತರ ಉಸ್ತಾದ ಶಫೀಕ ಖಾನ ಅವರ ಸಿತಾರ ವಾದನದಲ್ಲಿ ರಾಗ ಭಾಗೇಶ್ರೀ ನುಡಿಸಿ ಕಲಾಭಿಮಾನಿಗಳನ್ನು ಮನಸೂರೆಗೊಳಿಸಿದರು. ಇವರಿಗೆ ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರ ಸಮರ್ಥವಾಗಿ ತಬಲಾ ಸಾಥ್ ನೀಡಿದರು.
ಚೈತ್ರಾ ಬೆಟಗೇರಿ ಹಾಗೂ ಸುರಭಿ ಕುಲಕರ್ಣಿ ದ್ವಂದ್ವ ಗಾಯನ ಪ್ರಸ್ತುತ ಪಡಿಸಿದರು. ಅವರಿಗೆ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ ತಬಲಾ ಸಾಥ… ನೀಡಿದರೆ ಶರಣಕುಮಾರ ಕೊತ್ತಲಚಿಂತ ಹಾಮೊರ್ೕನಿಯಂ ಸಾಥ್ ನೀಡಿದರು. ಶ್ರೀ ಆದಿಶಕ್ತಿ ಮಹಿಳಾ ಮಂಡಳದ ಸದಸ್ಯರಾದ ಸಾವಿತ್ರಿ ಬಡಿಗೇರ, ಲೀಲಾ ಪಾಟೀಲ,ಸುರೇಖಾ ಸುರೇಶ್ ಮನೋಜ್ಞ ಅಭಿನಯದಿಂದ ಮೂಡಿಬಂದ ಹಾಸ್ಯ ನಾಟಕ ಹೊಳೆಯಲ್ಲಿ ಹೋಮ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದರು. ಸುರೇಶ ಗೋವಿಂದರೆಡ್ಡಿ ಸ್ವಾಗತಿಸಿದರು. ನಾಗಲಿಂಗ್ ಮುರಗಿ ಪ್ರಾಸ್ತಾವಿಕ ಮಾತನಾಡಿದರು.ಸುರಭಿ ಸುರೇಶ ಪ್ರಾಥಿಸಿದರು. ಸುರೇಖಾ ಸುರೇಶ ವಂದಿಸಿದರು.