ಧಾರವಾಡ: ನಗರದ ನೆಹರೂ ಮಾರುಕಟ್ಟೆಯಲ್ಲಿಕರ್ನಾಟಕ ಬೀದಿ ಬದಿ ವ್ಯಾಪಾಸ್ಥರ ಸಂಘಟನೆಗಳ ಒಕ್ಕೂಟದ ಜಿಲ್ಲಾಘಟಕದ ವತಿಯಿಂದ ಬೀದಿ ಬದಿ ವ್ಯಾಪಾಡಿಸ್ಥರಿಗೆ ಕಾನೂನು ತಿಳಿವಳಿಕೆ ಕಾರ್ಯಾಗಾರ ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಜರುಗಿತು.
ಇದೇ ವೇಳೆ ಶಹರ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಇಸೂಫ್ ಮಕಾಂದಾರ, ಶಾರದಾ ಜಿ. ಅಂಗಡಿ ಹಾಗೂ ವಲಯ 2ರ ಪಾಲಿಕೆ ಅಧಿಕಾರಿ ವಿದ್ಯಾವತಿ ಆರ್.ತೇಲಗಾರ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುಗಿನ ಚೀಟಿ ವಿತರಿಸಿದರು.
ಜಿಲ್ಲಾಪ್ರಧಾನ ಕಾರ್ಯದರ್ಶಿ ಜಾವೀದ ಟೀನವಾಲೆ ಮಾತನಾಡಿ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಬೀದಿ ಬದಿ ವ್ಯಾಪಾರಸ್ಥರಿಗಾಗಿ ಮಾಡಿದ ಕಾಯ್ದೆಯನ್ನು ಸಮಪರ್ಕವಾಗಿ ಜಾರಿ ಮಾಡಲಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು. ವ್ಯಾಪಾರಸ್ಥರನ್ನು ಒಂದುಗೂಡಿ ವ್ಯಾಪಾರಸ್ಥರ ಮೇಲೆ ಆಗುತ್ತಿರುವ ಕಿರುಕುಳದ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಕರ್ನಾಟಕ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವರ ಶಿರಹಟ್ಟಿ ಮಾತನಾಡಿ, ಎಲ್ಲರೂ ಸಂಘಟಿತರಾಗಿ ಹಾಗೂ ಒಂದಾಗಿ ತಮ್ಮ ಹಕ್ಕನ್ನು ಪಡೆಯಲು ಮುಂದೆ ಬರಬೇಕು. ಮುಂಬರುವ ಟಿವಿಸಿ ಚುನಾವಣೆಯಲ್ಲಿಪ್ರತಿಯೊಬ್ಬರು ಭಾಗವಹಿಸಬೇಕು ಎಂದರು.
ಪ್ರಗತಿಪರ ಚಿಕ್ಕ ವರ್ತಕರ ಸಂಘದ ನೂತನ ಅಧ್ಯಕ್ಷ ನ್ಯಾಯವಾದಿ ಎಂ.ಎಂ.ಚೌದರಿ ಮಾತನಾಡಿ, ಬೀದಿ ಬದಿ ವ್ಯಾಪಾರ ಮಾಡುವುದು ಭಾರತದ ಸಂವಿಧಾನ ನಮಗೆ ಕೊಟ್ಟ ಜನ್ಮಸಿದ್ಧ ಹಕ್ಕು. ಯಾವುದೇ ಬೀದಿ ಬದಿ ವ್ಯಾಪಾರಿಗಳ ಮೇಲೆ ವಿನಾಕಾರಣ ಯಾವುದೇ ಅಧಿಕಾರಿಗಳು ಕಿರುಕುಳ ನೀಡಿದರೆ ಅಂತಹವರ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.
ಕಾರ್ಯಲಕ್ರಮದಲ್ಲಿಪ್ರೇಮಕಾಂತ ಕಲಾಲರ, ನಾರಾಯಣಸಾ ಲದ್ವಾ, ಬಸವರಾಜ ಶಿ. ರಾಜಾಪೂರ, ರಿಯಾಜ ದಲಾಯತ್, ನಜೀರ ಲಂಗೂಟಿ ಇದ್ದರು. ಜಯಶ್ರೀ ಜತಕರತ ಪ್ರಾರ್ಥಿಸಿದರು. ಹನುಮಂತ ಅಬ್ಬಿಗೇರ ವಂದಿಸಿದರು.
ಇದೇ ವೇಳೆ ಶಹರ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಇಸೂಫ್ ಮಕಾಂದಾರ, ಶಾರದಾ ಜಿ. ಅಂಗಡಿ ಹಾಗೂ ವಲಯ 2ರ ಪಾಲಿಕೆ ಅಧಿಕಾರಿ ವಿದ್ಯಾವತಿ ಆರ್.ತೇಲಗಾರ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುಗಿನ ಚೀಟಿ ವಿತರಿಸಿದರು.
ಜಿಲ್ಲಾಪ್ರಧಾನ ಕಾರ್ಯದರ್ಶಿ ಜಾವೀದ ಟೀನವಾಲೆ ಮಾತನಾಡಿ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಬೀದಿ ಬದಿ ವ್ಯಾಪಾರಸ್ಥರಿಗಾಗಿ ಮಾಡಿದ ಕಾಯ್ದೆಯನ್ನು ಸಮಪರ್ಕವಾಗಿ ಜಾರಿ ಮಾಡಲಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು. ವ್ಯಾಪಾರಸ್ಥರನ್ನು ಒಂದುಗೂಡಿ ವ್ಯಾಪಾರಸ್ಥರ ಮೇಲೆ ಆಗುತ್ತಿರುವ ಕಿರುಕುಳದ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಕರ್ನಾಟಕ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವರ ಶಿರಹಟ್ಟಿ ಮಾತನಾಡಿ, ಎಲ್ಲರೂ ಸಂಘಟಿತರಾಗಿ ಹಾಗೂ ಒಂದಾಗಿ ತಮ್ಮ ಹಕ್ಕನ್ನು ಪಡೆಯಲು ಮುಂದೆ ಬರಬೇಕು. ಮುಂಬರುವ ಟಿವಿಸಿ ಚುನಾವಣೆಯಲ್ಲಿಪ್ರತಿಯೊಬ್ಬರು ಭಾಗವಹಿಸಬೇಕು ಎಂದರು.
ಪ್ರಗತಿಪರ ಚಿಕ್ಕ ವರ್ತಕರ ಸಂಘದ ನೂತನ ಅಧ್ಯಕ್ಷ ನ್ಯಾಯವಾದಿ ಎಂ.ಎಂ.ಚೌದರಿ ಮಾತನಾಡಿ, ಬೀದಿ ಬದಿ ವ್ಯಾಪಾರ ಮಾಡುವುದು ಭಾರತದ ಸಂವಿಧಾನ ನಮಗೆ ಕೊಟ್ಟ ಜನ್ಮಸಿದ್ಧ ಹಕ್ಕು. ಯಾವುದೇ ಬೀದಿ ಬದಿ ವ್ಯಾಪಾರಿಗಳ ಮೇಲೆ ವಿನಾಕಾರಣ ಯಾವುದೇ ಅಧಿಕಾರಿಗಳು ಕಿರುಕುಳ ನೀಡಿದರೆ ಅಂತಹವರ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.
ಕಾರ್ಯಲಕ್ರಮದಲ್ಲಿಪ್ರೇಮಕಾಂತ ಕಲಾಲರ, ನಾರಾಯಣಸಾ ಲದ್ವಾ, ಬಸವರಾಜ ಶಿ. ರಾಜಾಪೂರ, ರಿಯಾಜ ದಲಾಯತ್, ನಜೀರ ಲಂಗೂಟಿ ಇದ್ದರು. ಜಯಶ್ರೀ ಜತಕರತ ಪ್ರಾರ್ಥಿಸಿದರು. ಹನುಮಂತ ಅಬ್ಬಿಗೇರ ವಂದಿಸಿದರು.