ಆ್ಯಪ್ನಗರ

ಪರಿಸರದ ಸದ್ಬಳಕೆಯಾದರೆ ಬದುಕು ಸ್ವರ್ಗ

ಧಾರವಾಡ : ಪರಿಸರದ ಸದ್ಭಳಕೆಯಾದರೆ ಬದುಕು ಸ್ವರ್ಗ, ದುರ್ಬಳಕೆಯಾದರೆ ನರಕ ಎಂದು ರಾಜ್ಯ ಪರಿಸರ ಸಂರಕ್ಷ ಣಾ ಜಾಗೃತ ವೇದಿಕೆಯ ಅಧ್ಯಕ್ಷ ಶರಣಪ್ಪ ಮತ್ತಿಕಟ್ಟಿ ಹೇಳಿದರು.

Vijaya Karnataka 8 Jun 2019, 5:00 am
ಧಾರವಾಡ : ಪರಿಸರದ ಸದ್ಭಳಕೆಯಾದರೆ ಬದುಕು ಸ್ವರ್ಗ, ದುರ್ಬಳಕೆಯಾದರೆ ನರಕ ಎಂದು ರಾಜ್ಯ ಪರಿಸರ ಸಂರಕ್ಷ ಣಾ ಜಾಗೃತ ವೇದಿಕೆಯ ಅಧ್ಯಕ್ಷ ಶರಣಪ್ಪ ಮತ್ತಿಕಟ್ಟಿ ಹೇಳಿದರು.
Vijaya Karnataka Web DRW-07RANGA01
ಧಾರವಾಡ ಬಸವೇಶ್ವರ ರೂರಲ್‌ ಬಿಇಡಿ ಕಾಲೇಜಿನ ಆವರಣದಲ್ಲಿ 45ನೇ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶರಣಪ್ಪ ಮತ್ತಿಕಟ್ಟಿ ಸಸಿಗೆ ನೀರು ಹಾಕಿದರು.


ಸತ್ತೂರಿನ ಬಸವೇಶ್ವರ ರೂರಲ್‌ ಬಿಇಡಿ ಕಾಲೇಜಿನ ಆವರಣದಲ್ಲಿ 45ನೇ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಸಸಿ ನೆಟ್ಟು ಮಾತನಾಡಿದರು.

ಪರಿಸರ ಸಂರಕ್ಷ ಣೆ ಕೆಲವೆ ಜನರಿಗೆ ಸೀಮಿತವಲ್ಲ. ಪ್ರತಿಯೊಬ್ಬರು ತ್ರಿಕರಣಶುದ್ಧಿಯಿಂದ ಸಂರಕ್ಷಿಸಬೇಕಿದೆ. ಸಮಸ್ತ ಜೀವಿ ಸಂಕುಲವೇ ವಿನಾಶದ ಅಂಚಿನಲ್ಲಿದೆ. ವೃಕ್ಷ ಸಂಪತ್ತು ಕ್ಷೀಣಿಸುತ್ತಿದೆ. ಅರಣ್ಯದ ಬಿದಿರು ಅದಿರು ಕಾರ್ಖಾನೆಯಲ್ಲಿ ಪುಡಿ ಪುಡಿಯಾಗಿ ಮಾಲಿನ್ಯದ ಹೊಳೆ ಹರಿಯುತ್ತಿದೆ. ಈ ಎಲ್ಲಾ ವಿನಾಶದ ಕರ್ತೃಗಳು ನಾವಲ್ಲವೇ..? ಈ ವಿಷಜಾಲದಿಂದ ನಾವು ಪಾರಾಗಿ ಪರಿಸರ ರಕ್ಷ ಣೆಗೆ ಬದ್ಧರಾಗಬೇಕಿದೆ ಎಂದರು.

ರಾಜ್ಯ ಪರಿಸರ ಸಂರಕ್ಷ ಣಾ ಕಾರ್ಯದರ್ಶಿ ವೀರಣ್ಣ ಒಡ್ಡೀನ ಮಾತನಾಡಿದರು.

ಪ್ರಾಚಾರ್ಯ ನವೀನ ಕರೇರ, ಮಂಜುನಾಥ ಯಾವಗಲ್‌, ರೇಣುಕಾ ಚವ್ಹಾಣ, ತುರಮರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಶಿಕ್ಷ ಣಾರ್ಥಿಗಳು ಪರಿಸರ ಗೀತೆ ಹಾಡಿದರು. ಪ್ರಾಚಾರ್ಯ ಡಾ.ಮಹಾಂತೇಶ ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಲಕ್ಷ್ಮೀಕಾಂತ ಬುಡ್ಡಣ್ಣವರ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ