ಆ್ಯಪ್ನಗರ

ಕೃಷಿ ಸೊರಗಿದರೆ ದೇಶ ಸೊರಗುತ್ತದೆ

ಕಲಘಟಗಿ : ಕೃಷಿ ಸೊರಗಿದರೆ ದೇಶ ಸೊರಗುತ್ತದೆ ಎಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು. ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಭಾ ಭವನದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Vijaya Karnataka 24 Dec 2018, 5:00 am
ಕಲಘಟಗಿ : ಕೃಷಿ ಸೊರಗಿದರೆ ದೇಶ ಸೊರಗುತ್ತದೆ ಎಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು. ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಭಾ ಭವನದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
Vijaya Karnataka Web HBL-2312-2-3-RAIT-HBL 23
ಕಲಘಟಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಭಾ ಭವನದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಂ.ನಿಂಬಣ್ಣವರ ಮಾತನಾಡಿದರು.


ಪಂಜಾಬ ರಾಜ್ಯದಲ್ಲಿ ಇರುವಂತೆ ಕೃಷಿಯ ಮೂಲ ಸೌಕರ್ಯಗಳಾದ ನೀರಾವರಿ, ವಿದ್ಯುತ್‌ ಸೌಲಭ್ಯ, ಮಾರುಕಟ್ಟೆ ವ್ಯವಸ್ಥೆ ಬಲಿಷ್ಠವಾಗಿಸುವ ಮೂಲಕ ಭಾರತದ ಕೃಷಿಯನ್ನು ಸ¸ಲೀಕರಣಗೊಳಿಸಬೇಕು. ಆಗ ರೈತನೇ ಸರಕಾರಕ್ಕೆ ಸಹಾಯ ಮಾಡುವಂತ ದಿನಗಳು ಬರುವಲ್ಲಿ ಸಂದೇಹವಿಲ್ಲ ಎಂದರು.

ಸ್ಥಳೀಯ ಸಹಾಯಕ ಕೃಷಿ ಅಧಿಕಾರಿ ಎನ್‌.ಎಫ್‌ ಕಟ್ಟೇಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ, ರೈತ ವರ್ಗದಿಂದ ಬಂದು ಕೇವಲ ಐದೂವರೆ ತಿಂಗಳು ಪ್ರಧಾನಿಯಾದ ಚೌಧರಿ ಚರಣ ಸಿಂಗ್‌ ಅವರ ಜನ್ಮ ದಿನವನ್ನು ರಾಷ್ಟ್ರೀಯ ರೈತರ ದಿನವನ್ನು ಆಚರಿಸುವುದು ಭಾರತದ ಕೃಷಿಗೆ ಕಿರಿಟವಿದ್ದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಬೇಸಾಯ ಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕ ಜೆ.ಎ.ಹೊಸಮಠ ಕಿಸಾನ ಕವಿಗೋಷ್ಠಿಯನ್ನು ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ನಿಂಗವ್ವ ಉಳವಪ್ಪ ಬಡಿಗೇರ, ಲಕ್ಷ್ಮಿ ಪಾಟೀಲ, ಷಣ್ಮುಖ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿ.ಬಿ.ಶಿವನಗೌಡ್ರ ಅಧ್ಯಕ್ಷ ತೆ ವಹಿಸಿದ್ದರು.

ಉಳವಪ್ಪ ಬಳಿಗೇರ, ನಿಜಗುಣಿ ಕೆಲಗೇರಿ, ಸಂಗಮೇಶ ನಿಂಬಣ್ಣವರ, ಗುರುಸಿದ್ದಯ್ಯ ಹಿರೇಮಠ, ಶಂಕರಗೌಡ ಮುದಿಗೌಡ್ರ, ಶಂಕರಗೌಡ ಭರಮಗೌಡ್ರ, ಋುಷಬೇಂದ್ರ ಪಟ್ಟಣಶೆಟ್ಟಿ, ವಿಜಯಕುಮಾರ ಕುಂಕೂರ, ಸಾತಪ್ಪ ಕುಂಕುರ ಇತರರಿದ್ದರು. ತಾಲೂಕಿನ ಕೃಷಿಕರು ಹಾಗೂ ಕೃಷಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ