ಆ್ಯಪ್ನಗರ

ಒಳ್ಳೆಯ ಬರವಣಿಗೆ ಇದ್ದರೆ ಕೃತಿ ಕೊಂಡು ಓದುವರು

ಹುಬ್ಬಳ್ಳಿ : ಒಳ್ಳೆಯ ಬರವಣಿಗೆ ಇದ್ದರೆ ಓದುಗರು ಮುಗಿಬಿದ್ದು ಕೃತಿ ಕೊಂಡು ಓದುತ್ತಾರೆ. ಪುಟಗಳ ಸಂಖ್ಯೆ ಹೆಚ್ಚಿದ್ದರೆ, ಬೆಲೆ ಹೆಚ್ಚಿದ್ದರೆ ಕೃತಿ ಕೊಳ್ಳಲಾರರು ಎಂಬ ಭಾವನೆ ಸುಳ್ಳು ಎಂದು ಸಾಹಿತಿ ವಸುಧೇಂದ್ರ ಹೇಳಿದರು.

Vijaya Karnataka 14 Jan 2020, 5:00 am
ಹುಬ್ಬಳ್ಳಿ : ಒಳ್ಳೆಯ ಬರವಣಿಗೆ ಇದ್ದರೆ ಓದುಗರು ಮುಗಿಬಿದ್ದು ಕೃತಿ ಕೊಂಡು ಓದುತ್ತಾರೆ. ಪುಟಗಳ ಸಂಖ್ಯೆ ಹೆಚ್ಚಿದ್ದರೆ, ಬೆಲೆ ಹೆಚ್ಚಿದ್ದರೆ ಕೃತಿ ಕೊಳ್ಳಲಾರರು ಎಂಬ ಭಾವನೆ ಸುಳ್ಳು ಎಂದು ಸಾಹಿತಿ ವಸುಧೇಂದ್ರ ಹೇಳಿದರು.
Vijaya Karnataka Web if you have good writing you will read it
ಒಳ್ಳೆಯ ಬರವಣಿಗೆ ಇದ್ದರೆ ಕೃತಿ ಕೊಂಡು ಓದುವರು


ತಮ್ಮ ನೂತನ ಕೃತಿ 'ತೇಜೋ ತುಂಗಭದ್ರಾ' ಕುರಿತಾಗಿ ವಿಶೇಷ ರೀತಿಯಲ್ಲಿಅಭಿಯಾನ ಕೈಗೊಂಡ ಸಾಹಿತಿ ವಸುಧೇಂದ್ರ ಅವರು ಇಲ್ಲಿನ 'ಸಾಹಿತ್ಯ ಭಂಡಾರ'ದಲ್ಲಿಓದುಗರ ಜತೆ ಮುಕ್ತವಾಗಿ ಮಾತುಕತೆ ಮತ್ತು ಸಂವಾದ ನಡೆಸಿದರು.

ಈ ಸಂದರ್ಭದಲ್ಲಿಮಾತನಾಡಿದ ಅವರು, ಮೊದಲ ಬಾರಿ ಐತಿಹಾಸಿಕ ಕಾದಂಬರಿ ಬರೆದಿದ್ದೇನೆ. ಇದರಲ್ಲೀಗ ಹಿಡಿತ ಸಿಕ್ಕಂತಾಗಿದ್ದು, ಓದುಗರು ತುಂಬು ಮನಸ್ಸಿನಿಂದ ಇದನ್ನು ಸ್ವೀಕರಿಸುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಾದಂಬರಿ ಬರೆಯುವೆ ಎಂದರು.

ಈವರೆಗಿನ ತಮ್ಮ ಇತರ ಕೃತಿಗಳಿಗೆ ಹೋಲಿಸಿದರೆ ಇದರ ಕಥಾಹಂದರ ಭಿನ್ನವಾಗಿದೆ. ಆದರೆ, ಎಂದಿನ ಶೈಲಿ ಮುಂದುವರೆದಿದೆ. ವಿಜಯನಗರದ ಕುರಿತಾಗಿ ಬರೆದ ಮೇಲೆ ಅವರ ಆಚೀಚೆಗಿನ ಕಾಲಮಾನದ ರಾಜಮನೆತನಗಳ ಕುರಿತಾಗಿ ಆಸಕ್ತಿ ಮೂಡುವುದು ಸಹಜ. ಹೀಗಾಗಿ ಮುಂದಿನ ದಿನಗಳಲ್ಲಿಇತಿಹಾಸದ ಬಗ್ಗೆ ಬರೆಯುವ ಇರಾದೆ ಇದೆ ಎಂದು ತಿಳಿಸಿದರು.

'ತೇಜೋ ತುಂಗಭದ್ರಾ' ಒಂದು ಸುಂದರ ಪ್ರೇಮಕತೆ. ಇದರಲ್ಲಿಸಮುದ್ರಯಾನದ ಕುರಿತಂತೆ, ಭಾರತದ ಮೇಲೆ ಪೋರ್ಚುಗೀಸರಿಂದಾದ ಪರಿಣಾಮ, ಭಾರತೀಯರಿಂದ ಪೋರ್ಚುಗೀಸರ ಮೇಲಾದ ಪರಿಣಾಮದ ಚಿತ್ರಣವಿದೆ. ಬಹುಮನಿ ಸುಲ್ತಾನರ ಮೇಲೆಯೂ ಬೆಳಕು ಚೆಲ್ಲಲಾಗಿದೆ. ಆಗಿನ ಜಾಗತೀಕರಣದ ಬಗೆಗೆ ಕುರಿತಾದ ಚಿತ್ರಣವನ್ನೂ ಕೃತಿ ಕಟ್ಟಿಕೊಡಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ