ಆ್ಯಪ್ನಗರ

ಶಾಲಾ ಸಂಸತ್‌ ಉದ್ಘಾಟನೆ

ಹಿರೇಕೆರೂರು :ರಟ್ಟೀಹಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿರುವ ಸಿಇಎಸ್‌ ಸಂಸ್ಥೆಯ ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲಾ ಆವರಣದಲ್ಲಿ ನೂತನ ಶಾಲಾ ಸಂಸತ್‌ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ, ವನಮಹೋತ್ಸವ ಕಾರ್ಯಕ್ರಮಗಳು ಜರುಗಿದವು.

Vijaya Karnataka 15 Jul 2019, 5:00 am
ಹಿರೇಕೆರೂರು :ರಟ್ಟೀಹಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿರುವ ಸಿಇಎಸ್‌ ಸಂಸ್ಥೆಯ ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲಾ ಆವರಣದಲ್ಲಿ ನೂತನ ಶಾಲಾ ಸಂಸತ್‌ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ, ವನಮಹೋತ್ಸವ ಕಾರ್ಯಕ್ರಮಗಳು ಜರುಗಿದವು.
Vijaya Karnataka Web inauguration of the school parliament
ಶಾಲಾ ಸಂಸತ್‌ ಉದ್ಘಾಟನೆ


ಅಧ್ಯಕ್ಷ ತೆ ವಹಿಸಿದ್ದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಏಕೇಶಪ್ಪ ಬಣಕಾರ ಮಾತನಾಡಿ, ವನಮಹೋತ್ಸವದಂತಹ ಕಾರ್ಯಕ್ರಮಗಳು ಶಿಕ್ಷ ಣ ಪಡೆಯುವ ಮಕ್ಕಳಿಗೆ ಪರಿಸರದ ಜಾಗೃತಿ ಮಾಹಿತಿ ನೀಡಲು ವರದಾನವಾಗಲಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸುಮಿತ್ರಾ ಪಾಟೀಲ್‌ ನೂತನ ಶಾಲಾ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ಸ್ವಚ್ಛತೆ, ಸಸಿಗಳ ಮಹತ್ವ ಮಕ್ಕಳಲ್ಲಿ ಮೂಡಿ ಬರಬೇಕು. ಇದರ ಅಂಗವಾಗಿ ಶಿಕ್ಷ ಕರು ಮಕ್ಕಳಿಗೆ ಪರಿಸರ ಜಾಗೃತಿ ಬಗ್ಗೆ ಶಿಕ್ಷ ಣ ನೀಡಬೇಕು ಎಂದು ಹೇಳಿದರು.

ತಾಪಂ ಸದಸ್ಯೆ ಗಂಗಮ್ಮ ಹರಿಜನ ವನಮಹೋತ್ಸವ ಆಚರಣೆಗೆ ಚಾಲನೆ ನೀಡಿದರು. ಗಿರಿಜಮ್ಮ ಗಂಗಪ್ಪಳವರ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರಗಳನ್ನು ವಿತರಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಪ್ರೇಮಾ ತಾವರಗಿ ಅವರನ್ನು ನಿವೃತ್ತ ಶಿಕ್ಷ ಕಿ ಎಲ್‌.ಎಸ್‌. ದಾನಪ್ಪನವರ ಪ್ರತಿಭಾ ಪುರಸ್ಕಾರ ಮಾಡಿದರು. ದೈಹಿಕ ಶಿಕ್ಷ ಕ ಸಿ.ಎಲ್‌.ಗಿರೀಶ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಶಿಕ್ಷ ಕಿ ಜೆ.ಜಿ.ವಿಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಸಂಸತ್‌ ಪರಿಚಯ ಮಾಡಿಸಿದರು. ಸಹಶಿಕ್ಷ ಕ ಎಸ್‌.ಬಿ.ಕಾರಗಿ ಶಾಲಾ ಸಂಸತ್‌ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜಿ.ಬಿ.ವಡ್ಡಿನಕಟ್ಟಿ, ಬಸವರಾಜ ಮಳಗಿ, ಸೋಮಣ್ಣ ಮಾರ್ವಳ್ಳಿ, ಗಡ್ಲಪ್ಪ ಯಡಚಿ, ರಮೇಶ ಗಿಡ್ಡಪ್ಪನವರ, ಲಲಿತಮ್ಮ ಗಂಗಪ್ಪಳವರ, ಪಿಡಿಒ ಸತೀಶಕುಮಾರ ಉಪಸ್ಥಿತರಿದ್ದರು. ಆರ್‌.ಎಚ್‌.ಪೂಜಾರ ಸ್ವಾಗತಿಸಿದರು. ಬಸನಗೌಡ ಕಲ್ಲೋಳ ನಿರೂಪಿಸಿದರು. ಆಶಾ ಕಡೂರು ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ