ಆ್ಯಪ್ನಗರ

ಸಮಗ್ರ ಕೃಷಿ ಪದ್ಧತಿಯಿಂದ ಆದಾಯ ಹೆಚ್ಚಳ

ಧಾರವಾಡ : ಕಲಘಟಗಿ ತಾಲೂಕಿನ ಆಸ್ತಕಟ್ಟಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಹಿಂಗಾರು ಆಂದೋಲನ, ವಸ್ತು ಪ್ರದರ್ಶನ ಹಾಗೂ ರೈತ ಮತ್ತು ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

Vijaya Karnataka 4 Feb 2019, 5:00 am
ಧಾರವಾಡ : ಕಲಘಟಗಿ ತಾಲೂಕಿನ ಆಸ್ತಕಟ್ಟಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಹಿಂಗಾರು ಆಂದೋಲನ, ವಸ್ತು ಪ್ರದರ್ಶನ ಹಾಗೂ ರೈತ ಮತ್ತು ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
Vijaya Karnataka Web DRW-2MAILAR06
ಧಾರವಾಡದ ಕಲಘಟಗಿ ತಾಲೂಕಿನ ಆಸ್ತಕಟ್ಟಿ ಗ್ರಾಮದಲ್ಲಿ ನಡೆದ ಹಿಂಗಾರು ಆಂದೋಲನ, ವಸ್ತು ಪ್ರದರ್ಶನ ಹಾಗೂ ರೈತ ಮತ್ತು ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಆರ್‌.ಆರ್‌.ಪಾಟೀಲ ಉದ್ಘಾಟಿಸಿದರು.


ಉದ್ಘಾಟಿಸಿ ಮಾತನಾಡಿದ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಆರ್‌.ಆರ್‌.ಪಾಟೀಲ, ಕೃಷಿಯಲ್ಲಿ ಅವೈಜ್ಞಾನಿಕ ನಿರ್ವಹಣೆಯಿಂದ ಉತ್ಪಾದನೆ ವೆಚ್ಚ ಹೆಚ್ಚುತ್ತಲಿದ್ದು, ರೈತರ ದುಡಿಮೆ ಕೂಡ ಕಡಿಮೆಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ರೈತರು ಸಮಗ್ರ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಬೀರವಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ Ü ಫಕ್ಕೀರಗೌಡ ಪಾಟೀಲ ಮಾತನಾಡಿ, ರೈತರು ಕೇವಲ ರೈತನಾಗದೇ ಕೃಷಿಯಲ್ಲಿ ಋುಷಿಯಾಗಬೇಕು. ತನ್ನಲ್ಲಿರುವ ಕೀಳರಿಮೆ ಕಳೆದುಕೊಂಡು ಜಗತ್ತಿಗೆ ಅನ್ನ ನೀಡುವ ಕಾಯಕವನ್ನು ಇನ್ನೂ ಹೆಚ್ಚಿಸಬೇಕು ಎಂದರು.

ವಿಜ್ಞಾನಿಗಳು ನೂತನ ತಂತ್ರಜ್ಞಾನಗಳ ಕುರಿತು ಉಪನ್ಯಾಸ ನೀಡಿದರು. ರೈತರಿಗೆ ಕಡಕನಾಥ ಮತ್ತು ಗಿರಿರಾಜ ಕೋಳಿಯ ಫಲವುಳ್ಳ ಮೊಟ್ಟೆಗಳನ್ನು ವಿತರಿಸಿದರು. ಡಾ.ಬಿ.ಬಿ.ಚನ್ನಪ್ಪಗೌಡರ, ಕಲಘಟಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ಸುನೀತಾ ಎಲ್‌.ಮ್ಯಾಗಿನಮನಿ ಇತರರು ಇದ್ದರು. ಡಾ. ಶುಭಾ ಎಸ್‌ ಸ್ವಾಗತಿಸಿ, ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ