ಆ್ಯಪ್ನಗರ

ಕೃಷಿ ಯಂತ್ರಗಳಿಗೆ ಹೆಚ್ಚಿದ ಬೇಡಿಕೆ

​ಧಾರವಾಡ: ಜಿಲ್ಲೆಯಾದ್ಯಂತ ಇತ್ತೀಚೆಗೆ ಸುರಿದ ಉತ್ತಮ ಮಳೆಗೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದರೆ, ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಿಂದ ಕೃಷಿ ಯಂತ್ರಧಾರೆ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕಡಿಮೆ ಬಾಡಿಗೆ ದರದಲ್ಲಿಒದಗಿಸುವ ಯಂತ್ರೋಪಕರಣಗಳಿಗೆ ರೈತರಿಂದ ಫುಲ್‌ ಡಿಮ್ಯಾಂಡ್‌ ಬಂದಿದೆ.

Vijaya Karnataka 13 Jul 2020, 5:00 am
ಮಲ್ಲಿಕಾರ್ಜುನ ಬಾಳನಗೌಡ್ರ
Vijaya Karnataka Web increased demand for agricultural machinery
ಕೃಷಿ ಯಂತ್ರಗಳಿಗೆ ಹೆಚ್ಚಿದ ಬೇಡಿಕೆ

ಧಾರವಾಡ: ಜಿಲ್ಲೆಯಾದ್ಯಂತ ಇತ್ತೀಚೆಗೆ ಸುರಿದ ಉತ್ತಮ ಮಳೆಗೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದರೆ, ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಿಂದ ಕೃಷಿ ಯಂತ್ರಧಾರೆ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕಡಿಮೆ ಬಾಡಿಗೆ ದರದಲ್ಲಿಒದಗಿಸುವ ಯಂತ್ರೋಪಕರಣಗಳಿಗೆ ರೈತರಿಂದ ಫುಲ್‌ ಡಿಮ್ಯಾಂಡ್‌ ಬಂದಿದೆ.

ಜಿಲ್ಲೆಯಲ್ಲಿಶೇ.70 ಜನರು ಕೃಷಿಯಾಧಾರಿತ ಜೀವನವನ್ನೇ ಕಟ್ಟಿಕೊಂಡಿದ್ದಾರೆ. ಅದರಲ್ಲೂಬಹುತೇಕ ಕಡೆ ಮಳೆಯಾಶ್ರಿತ ಬೆಳೆಗಳ ಮೇಲೆಯೇ ಹೆಚ್ಚು ಅವಲಂಬಿಸಿದ್ದಾರೆ. ಒಂದು ವಾರದಿಂದ ಉತ್ತಮ ಮಳೆಯಾಗಿದ್ದು, ಮುಂಗಾರು ಬಿತ್ತನೆ ಜೋರಾಗಿದೆ. ಅದರಂತೆಯೇ ಸಣ್ಣ ಮತ್ತು ಅತಿ ಸಣ್ಣ ರೈತರು ಕಡಿಮೆ ಬಾಡಿಗೆ ಆಧಾರಿತ ಸರಕಾರದ ಯಂತ್ರೋಪಕರಣ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಕೆಲವೆಡೆ ಹೆಚ್ಚಿನ ಬೇಡಿಕೆ ಇದ್ದು, ರೈತರಿಗೆ ನೆರವಾಗಿವೆ. ಕೆಲವೆಡೆ ಕಡಿಮೆ ಸಾಮಗ್ರಿಗಳು ಇದ್ದು, ಅವು ಸಕಾಲಕ್ಕೆ ಸಿಗದೇ ಕೃಷಿ ಚಟುವಟಿಕೆಗೆ ಕೆಲವು ಬಾರಿ ಹಿನ್ನಡೆಯಾಗುತ್ತಿದೆ ಎನ್ನುತ್ತಾರೆ ಫಲಾನುಭವಿ ರೈತರು.

ಕೆಲವೆಡೆ ಅಭಾವ:
ಜಿಲ್ಲೆಯಲ್ಲಿ5 ಯಂತ್ರಧಾರೆ ಕೇಂದ್ರಗಳಿದ್ದು, ಇಲ್ಲಿಕೃಷಿ ಸಾಮಗ್ರಿಗಳು ಕಡಿಮೆ ದರದಲ್ಲಿದೊರಕುತ್ತಿದ್ದು, ಹೆಚ್ಚು ರೈತರಿಗೆ ಅನುಕೂಲವಾಗಿದೆ. ಮುಂಗಾರು ಮತ್ತು ಹಿಂಗಾರು ಬಿತ್ತನೆಯ ಸಮಯದಲ್ಲಿಇಲ್ಲಿನ ಸಾಮಗ್ರಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಕೆಲ ಸಂದರ್ಭದಲ್ಲಿಅಭಾವವೂ ಕಾಡುತ್ತದೆ. ಹೀಗಾಗಿ ಬಿತ್ತನೆ ವಿಳಂಬವಾಗುತ್ತದೆ. ಆದ್ದರಿಂದ ಸರಕಾರ ಎಲ್ಲಯಂತ್ರಧಾರೆ ಕೇಂದ್ರಗಳಿಗೆ ಬಿತ್ತನೆಗೆ ಬೇಕಾಗುವ ಕೂರಿಗೆ ಸೇರಿದಂತೆ ಇತರ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿಪೂರೈಕೆ ಮಾಡಿ, ಸಾಮಗ್ರಿಗಳ ಅಭಾವ ಆಗದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ರೈತ ಅಮೃತೇಶ.

5 ಕೇಂದ್ರಗಳು
ಅಳ್ನಾವರ, ಕುಂದಗೋಳ ತಾಲೂಕಿನ ಸಂಶಿ, ಛಬ್ಬಿ, ಕಲಘಟಗಿ ತಾಲೂಕಿನ ದುಮ್ಮವಾಡ ಹಾಗೂ ಅಣ್ಣಿಗೇರಿಯಲ್ಲಿಕೃಷಿ ಯಂತ್ರಧಾರೆ ಕೇಂದ್ರಗಳು ಇವೆ. ಇಲ್ಲಿನ ಕೃಷಿ ಸಾಮಗ್ರಿಗಳಾದ ರೋಟೋವೇಟರ್‌, ಕಲ್ಟಿವೇಟರ್‌ ನೇಗಿಲು, 4ರಿಂದ 6 ತಾಳಿನ ಕೂರಿಗೆಗಳು, ಟ್ರಾತ್ರ್ಯಕ್ಟರ್‌ ಹೀಗೆ 15ಕ್ಕೂ ಹೆಚ್ಚು ಕೃಷಿ ಸಾಮಗ್ರಿಗಳು ಇವೆ. ಇವುಗಳನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಪ್ರತಿ ಗಂಟೆ ಮತ್ತು ಎಕರೆ ಭೂಮಿಯ ಆಧಾರದ ಮೇಲೆ ರೈತರಿಗೆ ಬಾಡಿಗೆ ಕೊಡಲಾಗುತ್ತದೆ. ಬಾಡಿಗೆ ದರವು ಎಲ್ಲಕೇಂದ್ರಗಳಲ್ಲಿಅಲ್ಲಿನ ಪ್ರದೇಶಕ್ಕೆ ಅನುಗುಣವಾಗಿ ಇರುತ್ತದೆ. ಸಾಮಗ್ರಿಗಳನ್ನು ಪಡೆಯಲು ರೈತರು ಮುಂಗಡವಾಗಿ ಹೆಸರು ನೋಂದಣಿ ಮಾಡಿಸಿಕೊಂಡಿರಬೇಕು. ಒಂದು ವೇಳೆ ರೈತರು ಶೀಘ್ರವಾಗಿ ವಸ್ತು ಬೇಕಾದಾಗ ಆ ಯಂತ್ರ ಖಾಲಿ ಇದ್ದರೆ ಹೆಸರು ನೋಂದಾಯಿಸದಿದ್ದರೂ ಅವರಿಗೆ ಬಾಡಿಗೆ ನೀಡಲಾಗುತ್ತದೆ. ಪ್ರಸ್ತುತ ಎಲ್ಲಕಡೆ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಯಂತ್ರೋಪಕರಣಗಳಿಗೆ ಡಿಮ್ಯಾಂಡ್‌ ಬಂದಿದೆ ಎನ್ನುತ್ತಾರೆ ಯಂತ್ರಧಾರೆ ಕೇಂದ್ರದ ಅಧಿಕಾರಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ