ಆ್ಯಪ್ನಗರ

ಯೋಗದಿಂದ ಆತ್ಮಸ್ಥೈರ್ಯ ಹೆಚ್ಚಳ

ಧಾರವಾಡ : ನಗರದ ವಿದ್ಯಾಗಿರಿಯ ಆಸ್ಥಾ ಮಹಿಳಾ ವೇದಿಕೆ ವತಿಯಿಂದ ಸ್ಥೂಲಕಾಯ ನಿರ್ವಹಣೆ ಪ್ರಯುಕ್ತ ನಡೆದ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.

Vijaya Karnataka 5 Jun 2019, 5:00 am
ಧಾರವಾಡ : ನಗರದ ವಿದ್ಯಾಗಿರಿಯ ಆಸ್ಥಾ ಮಹಿಳಾ ವೇದಿಕೆ ವತಿಯಿಂದ ಸ್ಥೂಲಕಾಯ ನಿರ್ವಹಣೆ ಪ್ರಯುಕ್ತ ನಡೆದ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.
Vijaya Karnataka Web increased self confidence from yoga
ಯೋಗದಿಂದ ಆತ್ಮಸ್ಥೈರ್ಯ ಹೆಚ್ಚಳ


ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಡಾ.ಮಂಜುಳಾ ಮರಳಪ್ಪನವರ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಕೀಳರಿಮೆ ಬಿಟ್ಟು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಜತೆಗೆ ಎಲ್ಲ ಮಹಿಳೆಯರು ಕ್ರಮಬದ್ಧವಾಗಿ ಯೋಗ ಪದ್ಧತಿ ಅಳವಡಿಸಿಕೊಳ್ಳಬೇಕು. ಯೋಗವನ್ನು ಮಾಡುವುದರಿಂದ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಲಿದೆ ಎಂದರು.

ಡಾ.ಶೋಭಾ ಹೂಲಿಕಟ್ಟಿ ಮಾತನಾಡಿ, ಸಾಮೂಹಿಕ ಸಹಬಾಳ್ವೆಯಲ್ಲಿ ಯೋಗ ಪ್ರಮುಖ ಪಾತ್ರ ವಹಿಸಲಿದೆ. ಪ್ರತಿದಿನ ಯೋಗ ನಡೆಸುವುದರಿಂದ ಸ್ಥೂಲಕಾಯ ನಿರ್ವಹಣೆ ಜತೆಗೆ ಮಾನಸಿಕ ಒತ್ತಡದಿಂದ ಪಾರಾಗಲು ಸಹಕಾರಿಯಾಗಲಿದೆ ಎಂದರು.

ಆಸ್ಥಾ ಮಹಿಳಾ ವೇದಿಕೆ ಅಧ್ಯಕ್ಷೆ ಡಾ.ನಯನಾ ಗಂಗಧರ ಮಾತನಾಡಿ, ಯೋಗದಿಂದ ಮಹಿಳೆ ತಮ್ಮ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಜತೆಗೆ ಉದ್ವೇಗ, ಖಿನ್ನತೆಯಿಂದ ಹೊರಬರಲು ಸಹಾಯಕವಾಗಲಿದೆ ಎಂದರು.

ಮಹಿಳಾ ವೇದಿಕೆ ಕಾರ್ಯದರ್ಶಿ ಸಂಗೀತಾ ಗೋವಿಂದರಾಜ್‌ ಸ್ವಾಗತಿಸಿ, ಪರಿಚಯಿಸಿದರು. ಆಶಾ, ಶೈಲಜಾ, ಜಯಲಕ್ಷ್ಮೀ, ವಿಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ