ಆ್ಯಪ್ನಗರ

ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅನನ್ಯ

ಧಾರವಾಡ: ನಗರದ ಹಳಿಯಾಳ ರಸ್ತೆಯ ಐಸಿಎಸ್‌ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಗಣಿತ ಶಾಸ್ತ್ರಜ್ಞ ರಾಮಾನುಜನ್‌ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನಾಚರಣೆ ವಿಜೃಂಭಣೆಯಿಂದ ಆಚರಿಸಲಾಯಿತು.

Vijaya Karnataka 25 Dec 2019, 5:00 am
ಧಾರವಾಡ: ನಗರದ ಹಳಿಯಾಳ ರಸ್ತೆಯ ಐಸಿಎಸ್‌ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಗಣಿತ ಶಾಸ್ತ್ರಜ್ಞ ರಾಮಾನುಜನ್‌ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನಾಚರಣೆ ವಿಜೃಂಭಣೆಯಿಂದ ಆಚರಿಸಲಾಯಿತು.
Vijaya Karnataka Web 24RANGA04_21
ಧಾರವಾಡ ಐಸಿಎಸ್‌ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿನಡೆದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿಕಾಲೇಜಿನ ವಿದ್ಯಾರ್ಥಿ ಮಾತನಾಡಿದರು.


ಪ್ರಾಚಾರ್ಯ ಉಮೇಶ ಪುರೋಹಿತ ಮಾತನಾಡಿ, ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅನನ್ಯವಾದುದು. ಭಾರತೀಯರು ವಿಶ್ವಕ್ಕೆ ಸೊನ್ನೆ ಪರಿಚಯಿಸಿದರು. ರಾಮಾನುಜನ್‌,ಭಾಸ್ಕರಾಚಾರ್ಯ,ಆರ್ಯಭಟ ಹಲವಾರು ಗಣಿತಶಾಸ್ತ್ರಜ್ಞರ ಪರಿಚಯ ತಿಳಿಸಿದರು.

ಗಣಿತಶಾಸ್ತ್ರ ಉಪನ್ಯಾಸಕ ಮಹಾಲಿಂಗ ಕಮತಗಿ ಮಾತನಾಡಿ, ಇಂದಿನ ಜಗತ್ತು ಡಿಜಿಟಲ್‌ ಯುಗ ಕಾಣಲು ಗಣಿತದ ಕೊಡುಗೆ ಅಪಾರವಾಗಿದೆ. ನಿತ್ಯ ಜೀವನದಲ್ಲಿಗಣಿತ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಬಸನಗೌಡ ಸಿ.ಪಾಟೀಲ,ದತ್ತಾತ್ರೇಯ ಸಾಹುಕಾರ, ಸಮೀರ ದೇಸಾಯಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ