ಆ್ಯಪ್ನಗರ

ಪದಾಧಿಕಾರಿಗಳಿಗೆ ತರಬೇತಿ ಕಾರಾರ‍ಯಗಾರ

ಧಾರವಾಡ: ನಗರದ ವಾಲ್ಮಿ ಸಂಸ್ಥೆಯಲ್ಲಿಬೆಳಗಾವಿ ಜಿಲ್ಲೆಯ ರಾಮೇಶ್ವರ ಏತ ನೀರಾವರಿ ಯೋಜನೆಯ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಜರುಗಿತು.

Vijaya Karnataka 15 Sep 2019, 5:00 am
ಧಾರವಾಡ: ನಗರದ ವಾಲ್ಮಿ ಸಂಸ್ಥೆಯಲ್ಲಿಬೆಳಗಾವಿ ಜಿಲ್ಲೆಯ ರಾಮೇಶ್ವರ ಏತ ನೀರಾವರಿ ಯೋಜನೆಯ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಜರುಗಿತು.
Vijaya Karnataka Web infantry training officer
ಪದಾಧಿಕಾರಿಗಳಿಗೆ ತರಬೇತಿ ಕಾರಾರ‍ಯಗಾರ


ಡಾ.ಕೃಷ್ಣಾ ಮುಂಬಾರೆಡ್ಡಿ ರೈತ ತರಬೇತುದಾರರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಕೆಲವು ದೇಶಗಳಲ್ಲಿಕಡಿಮೆ ನೀರಿನಲ್ಲಿಅತೀ ಹೆಚ್ಚಿನ ಇಳುವರಿ ಪಡೆಯಲಾಗುತ್ತಿದೆ. ನೀರಿನ ಬಳಕೆಯ ಸಾಮರ್ಥ್ಯ ಹೆಚ್ಚಿಸಲು ನೀರು ನಿರ್ವಹಣಾ ತಂತ್ರಜ್ಞಾನ ಹಾಗೂ ರೈತ ಸಮುದಾಯ ಒಂದುಗೂಡಬೇಕು ಅಂದಾಗ ಮಾತ್ರ ನೀರಾವರಿ ಯಶಸ್ವಿಯಾಗಲಿದೆ ಎಂದರು.

ಡಾ.ಪಿ.ಎಲ್‌. ಪಾಟೀಲ ಮಾತನಾಡಿ, ನೀರಾವರಿ ಕೃಷಿಯಲ್ಲಿಭೂಮಿಯನ್ನು ಸಮರ್ಪಕ ನಿರ್ವಹಿಸುವುದು ಅತೀ ಮುಖ್ಯ. ಸಾಮಾನ್ಯವಾಗಿ ನೀರಾವರಿ ಪ್ರದೇಶಗಳಲ್ಲಿಭೂಮಿ ಸಮರ್ಪಕ ಬಳಸದೇ ಇದ್ದರೆ ಭೂಮಿ ಹಾಳಾಗುವ ಸಾಧ್ಯತೆಗಳಿವೆ. ಕೃಷಿ ವಿಶ್ವ ವಿದ್ಯಾಲಯದಿಂದ ಹೊರಹೊಮ್ಮುವ ವೈಜ್ಞಾನಿಕ ಶಿಫಾರಸ್ಸು ಅನ್ವಯ ರೈತರು ನೀರಾವರಿ ಕೈಕೊಳ್ಳಬೇಕು. ನೀರಿನ ಉಳಿತಾಯಕ್ಕಾಗಿ ಹನಿ ನೀರಾವರಿ ಪದ್ಧತಿ ರೈತರು ಅಳವಡಿಸಿಕೊಳ್ಳಬೇಕು ಎಂದರು.

ಇದೇ ವೇಳೆ ರಾಮೇಶ್ವರ ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತರ ಎಸ್‌. ವಿ. ಮೂಡಲಗಿ ರೈತರೊಂದಿಗೆ ಸಂವಾದ ನಡೆಸಿದರು. ಡಾ.ರಾಜೇಂದ್ರ ಪೋದ್ದಾರ ಅಧ್ಯಕ್ಷತೆ ವಹಿಸಿದ್ದರು. ಶೈಲಜಾ ಹೊಸಮಠ ಸಂಯೋಜಿಸಿದರು. ನಾಗರತ್ನ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ