ಹುಬ್ಬಳ್ಳಿ: ಪಡಿತರ ಚೀಟಿಗೆ ಆಧಾರ್, ಬಯೋಮೆಟ್ರಿಕ್ ನೀಡುವ ಇ-ಕೆವೈಸಿ ಲಿಂಕ್ ಡಿಸೆಂಬರ್ ತಿಂಗಳಿನಿಂದಲೇ ಆರಂಭವಾಗಿದೆ. ಡಿ. 1ರಿಂದ 10ರವರೆಗೆ ಹಾಗೂ ಜ.1ರಿಂದ 10ರವರೆಗೆ ಕೆವೈಸಿ ಲಿಂಕ್ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಈವರೆಗೆ ಜಿಲ್ಲೆಯಲ್ಲಿಕೇವಲ ಶೇ.34ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ.
ಸರ್ವರ್ ಸಮಸ್ಯೆಯಿಂದ ದಿನವೊಂದಕ್ಕೆ 10 ಕುಟುಂಬಗಳು ಲಿಂಕ್ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಲಿಂಕ್ ಆಗದಿದ್ದರೇ ಪಡಿತರ ತಪ್ಪುತ್ತೆ ಎನ್ನುವ ಕಾರಣಕ್ಕೆ ಬಹುತೇಕ ಕುಟುಂಬಗಳು ಎಲ್ಲಕೆಲಸ ಬಿಟ್ಟು ಪಡಿತರ ಅಂಗಡಿಗಳ ಎದುರು ಸರದಿಯಲ್ಲಿನಿಲ್ಲುವಂತಾಗಿದೆ. ಸರ್ವರ್ ಡೌನ್ ಇರುವುದರಿಂದ ಪಡಿತರ ಅಂಗಡಿಕಾರರೇ 8-10 ಕುಟುಂಬ ಬಿಟ್ಟು ಉಳಿದ ಜನರು ಕೆಲಸವನ್ನಾದರು ಮಾಡಿಕೊಳ್ಳಲಿ ಎಂದು ವಾಪಸ್ಸು ಕಳುಹಿಸುತ್ತಿದ್ದಾರೆ. ಜನರಿಗೂ ಸಹ ಕೆವೈಸಿ ಲಿಂಕ್ಗೆ ಯಾವಾಗ ಸರದಿ ಬರುತ್ತದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಸರ್ವರ್ ಚನ್ನಾಗಿದ್ದರೇ ನಿಲ್ಲಬೇಕು. ಇಲ್ಲವಾದರೆ, ವಾಪಸ್ ಮನೆಗೆ ಹೋಗಬೇಕಿದೆ. ಒಟ್ಟಿನಲ್ಲಿಪ್ರತಿದಿನ ರೇಷನ್ ಅಂಗಡಿಗೆ ಒಮ್ಮೆ ಭೇಟಿ ಕೊಡಬೇಕು ಎಂದು ಸಾರ್ವಜನಿಕರು ಹೇಳುತ್ತಾರೆ.
ಆಹಾರ ಇಲಾಖೆ ಅಧಿಕಾರಿಗಳು ಕೆವೈಸಿಗೆ ಹಾಗೂ ರೇಷನ್ ವಿತರಣೆಗೆ ಪ್ರತ್ಯೇಕ ಸರ್ವರ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳುತ್ತಿದ್ದರೂ, ಜ. 10 ರವರೆಗೆ ಯಾವುದೇ ರೇಷನ್ ವಿತರಣೆ ಮಾಡದಂತೆ ಅಂಗಡಿಕಾರರಿಗೆ ತಾಕೀತು ಮಾಡಿದ್ದಾರೆ. ಎರಡಕ್ಕೂ ಪ್ರತ್ಯೇಕ ಸರ್ವರ್ ಆದರೆ, ರೇಷನ್ ವಿತರಣೆಗೆ ತಡೆಯಾಕೆ ಎನ್ನುವ ಪ್ರಶ್ನೆ ಅಂಗಡಿಕಾರರನ್ನು ಕಾಡುತ್ತಿದೆ.
ಸರ್ವರ್ ಸಮಸ್ಯೆಯಿಂದ ಕೆವೈಸಿ ಲಿಂಕ್ ಮಾಡುವುದು ಇಲ್ಲ. ಪ್ರತಿ ತಿಂಗಳು 1 ಅಥವಾ 2ನೇ ತಾರೀಖಿನಿಂದ ಆರಂಭಿಸುತ್ತಿದ್ದ ರೇಷನ್ ವಿತರಣೆಯೂ ಇಲ್ಲದೇ ಬೆಳಿಗ್ಗೆಯಿಂದ ಸಂಜೆ ವರೆಗೆ ಕೆಲಸ ಇಲ್ಲದೇ ಸುಮ್ಮನೆ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಂಗಡಿಕಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸರ್ವರ್ ಸಮಸ್ಯೆಯಿಂದ ದಿನವೊಂದಕ್ಕೆ 10 ಕುಟುಂಬಗಳು ಲಿಂಕ್ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಲಿಂಕ್ ಆಗದಿದ್ದರೇ ಪಡಿತರ ತಪ್ಪುತ್ತೆ ಎನ್ನುವ ಕಾರಣಕ್ಕೆ ಬಹುತೇಕ ಕುಟುಂಬಗಳು ಎಲ್ಲಕೆಲಸ ಬಿಟ್ಟು ಪಡಿತರ ಅಂಗಡಿಗಳ ಎದುರು ಸರದಿಯಲ್ಲಿನಿಲ್ಲುವಂತಾಗಿದೆ. ಸರ್ವರ್ ಡೌನ್ ಇರುವುದರಿಂದ ಪಡಿತರ ಅಂಗಡಿಕಾರರೇ 8-10 ಕುಟುಂಬ ಬಿಟ್ಟು ಉಳಿದ ಜನರು ಕೆಲಸವನ್ನಾದರು ಮಾಡಿಕೊಳ್ಳಲಿ ಎಂದು ವಾಪಸ್ಸು ಕಳುಹಿಸುತ್ತಿದ್ದಾರೆ. ಜನರಿಗೂ ಸಹ ಕೆವೈಸಿ ಲಿಂಕ್ಗೆ ಯಾವಾಗ ಸರದಿ ಬರುತ್ತದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಸರ್ವರ್ ಚನ್ನಾಗಿದ್ದರೇ ನಿಲ್ಲಬೇಕು. ಇಲ್ಲವಾದರೆ, ವಾಪಸ್ ಮನೆಗೆ ಹೋಗಬೇಕಿದೆ. ಒಟ್ಟಿನಲ್ಲಿಪ್ರತಿದಿನ ರೇಷನ್ ಅಂಗಡಿಗೆ ಒಮ್ಮೆ ಭೇಟಿ ಕೊಡಬೇಕು ಎಂದು ಸಾರ್ವಜನಿಕರು ಹೇಳುತ್ತಾರೆ.
ಆಹಾರ ಇಲಾಖೆ ಅಧಿಕಾರಿಗಳು ಕೆವೈಸಿಗೆ ಹಾಗೂ ರೇಷನ್ ವಿತರಣೆಗೆ ಪ್ರತ್ಯೇಕ ಸರ್ವರ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳುತ್ತಿದ್ದರೂ, ಜ. 10 ರವರೆಗೆ ಯಾವುದೇ ರೇಷನ್ ವಿತರಣೆ ಮಾಡದಂತೆ ಅಂಗಡಿಕಾರರಿಗೆ ತಾಕೀತು ಮಾಡಿದ್ದಾರೆ. ಎರಡಕ್ಕೂ ಪ್ರತ್ಯೇಕ ಸರ್ವರ್ ಆದರೆ, ರೇಷನ್ ವಿತರಣೆಗೆ ತಡೆಯಾಕೆ ಎನ್ನುವ ಪ್ರಶ್ನೆ ಅಂಗಡಿಕಾರರನ್ನು ಕಾಡುತ್ತಿದೆ.
ಸರ್ವರ್ ಸಮಸ್ಯೆಯಿಂದ ಕೆವೈಸಿ ಲಿಂಕ್ ಮಾಡುವುದು ಇಲ್ಲ. ಪ್ರತಿ ತಿಂಗಳು 1 ಅಥವಾ 2ನೇ ತಾರೀಖಿನಿಂದ ಆರಂಭಿಸುತ್ತಿದ್ದ ರೇಷನ್ ವಿತರಣೆಯೂ ಇಲ್ಲದೇ ಬೆಳಿಗ್ಗೆಯಿಂದ ಸಂಜೆ ವರೆಗೆ ಕೆಲಸ ಇಲ್ಲದೇ ಸುಮ್ಮನೆ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಂಗಡಿಕಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.