ಆ್ಯಪ್ನಗರ

ಆಸ್ತಿ ಕರ ಹೆಚ್ಚಳ ವಾಪಸ್‌ಗೆ ಒತ್ತಾಯ

ಹುಬ್ಬಳ್ಳಿ : ಆರ್ಥಿಕ ಕುಸಿತ ಮತ್ತು ಕೋವಿಡ್‌ ಸಂಕಷ್ಟದ ನಡುವೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಆಮ್‌ ಆದ್ಮಿ ಪಕ್ಷ (ಆಪ್‌) ಕಾರ್ಯಕರ್ತರು ಶುಕ್ರವಾರ ಮೊದಲ ಹಂತದ ಹೋರಾಟದ ಭಾಗವಾಗಿ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Vijaya Karnataka 13 Jun 2020, 5:00 am
ಹುಬ್ಬಳ್ಳಿ : ಆರ್ಥಿಕ ಕುಸಿತ ಮತ್ತು ಕೋವಿಡ್‌ ಸಂಕಷ್ಟದ ನಡುವೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಆಮ್‌ ಆದ್ಮಿ ಪಕ್ಷ (ಆಪ್‌) ಕಾರ್ಯಕರ್ತರು ಶುಕ್ರವಾರ ಮೊದಲ ಹಂತದ ಹೋರಾಟದ ಭಾಗವಾಗಿ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Vijaya Karnataka Web insist on return of property increase
ಆಸ್ತಿ ಕರ ಹೆಚ್ಚಳ ವಾಪಸ್‌ಗೆ ಒತ್ತಾಯ


ಆಸ್ತಿ ಕರ ಹಿಂಪಡೆಯುವಂತೆ ಜನಸಾಮಾನ್ಯರು, ಸಂಘಟನೆಗಳು ಹಾಗೂ ಆಪ್‌ ಕಾರ್ಯಕರ್ತರು ರಾಜ್ಯ ಸರಕಾರ ಮತ್ತು ಧಾರವಾಡ ಜಿಲ್ಲಾ ಸಚಿವರಿಗೆ ಮನವಿ ಸಲ್ಲಿಸಿದರೂ, ಸರಕಾರ ಸಕಾರಾತ್ಮಕ ನಿರ್ಣಯ ಮಾಡಿಲ್ಲಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಿಜೆಪಿ ಸರಕಾರವು ತೆರಿಗೆ, ವಿವಿಧ ಶುಲ್ಕ, ಸುಂಕಗಳನ್ನು ಜನರ ಮೇಲೆ ಹೇರುತ್ತಿದೆ. ಹುಸಿ ಆಶ್ವಾಸನೆಗಳಿಂದ ಈಗ ಜನರು ಬಿಜೆಪಿ ಸರಕಾರದ ಮೇಲಿನ ಭರವಸೆ ಕಳೆದುಕೊಂಡಿದ್ದಾರೆ. ಆಸ್ತಿ ಕರ ಹೆಚ್ಚಳದಿಂದ ಪಾಲಿಕೆಗೆ ಕೇವಲ 12 ಕೋಟಿ ರೂ. ಆದಾಯ ಹೆಚ್ಚಾಗುವ ಅಂದಾಜು ಇದೆ. ಅದನ್ನೂ ಕೈ ಬಿಡಲು ಸರಕಾರ ತಯಾರಿಲ್ಲ. ಸರಕಾರ ಕರ ಹೆಚ್ಚಳ ಹಿಂಪಡೆಯದಿದ್ದರೆ, ಜನಮತ ಸಂಗ್ರಹಣೆ ಮಾಡಿ ಚಳವಳಿ ಮಾಡುತ್ತೇವೆ ಎಂದು ಎಎಪಿ ಜಿಲ್ಲಾ ಅಧ್ಯಕ್ಷ ಸಂತೋಷ ನರಗುಂದ ಎಚ್ಚರಿಸಿದರು.

ಈ ಪ್ರತಿಭಟನೆ ಆರಂಭ ಅಷ್ಟೇ, ಮುಂಬರುವ ದಿನಗಳಲ್ಲಿಜನರ ಬಳಿ ಹೋಗುವ ಕಾರ್ಯಕ್ರಮಗಳ ಮೂಲಕ ಜನ ವಿರೋಧಿ ನೀತಿಗಳನ್ನು ಬಯಲುಗೊಳಿಸುತ್ತೇವೆ. ದೆಹಲಿಯ ಜನಪರ ಶ್ರೇಷ್ಠ ಆಡಳಿತ ರಾಜ್ಯ ಸರಕಾರಕ್ಕೆ ಮಾದರಿಯಾಗಬೇಕಿತ್ತು ಎಂದು ಪಕ್ಷದ ಮುಖಂಡ ವಿಕಾಸ ಸೊಪ್ಪಿನ ಹೇಳಿದರು.

ಪಾಲಿಕೆ ಆಯುಕ್ತರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಶಶಿಕುಮಾರ ಸುಳ್ಳದ, ವಿವೇಕಾನಂದ ಸಾಲಿನ್ಸ್‌, ಶಿವಲಿಂಗಪ್ಪ ಜಡೆಣ್ಣವರ, ವಿಜಯ ಸಾಯಿ, ತ್ಯಾಗರಾಜ ಅಲ್ಲಂಪಟ್ಟಿ, ಲಕ್ಷ್ಮಣ ರಾಠೋಡ, ಪ್ರತಿಭಾ ದಿವಾಕರ, ಹರಿಕೃಷ್ಣ, ಡೇನಿಯಲ್‌, ರಮೇಶ ಜಮಾದಾರ, ಸ್ಟಾಲಿನ್‌, ಆದಿತ್ಯ ನಾಯಕ, ನವೀನ ರಜಪೂತ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ