ಧಾರವಾಡ : ಅಖಂಡ ಕರ್ನಾಟಕವನ್ನು ಇಬ್ಬಾಗ ಮಾಡಲು ಹೋರಾಟ ಮಾಡಲು ಮುಂದಾದವರಿಗೆ ನಾಡಿನ ಶ್ರೀಮಂತ ಸಾಹಿತ್ಯವನ್ನು ಓದುವಂತೆ ಪ್ರೇರೆಪಿಸಬೇಕು ಎಂದು ಬೆಂಗಳೂರಿನ ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ ಹೇಳಿದರು.
ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಭಾನುವಾರ ಹಮ್ಮಿಕೊಂಡ ಕ್ರಾಂತಿ ಪ್ರಕಾಶನದ ಸಾಹಿತ್ಯ -ಸಂಕ್ರಾಂತಿ -2019ರ ಪುಸ್ತಕ ಬಿಡುಗಡೆ, ಸಾಹಿತ್ಯ-ಸಂವಾದ, ಕವಿಗೋಷ್ಠಿ, ತಾಲೀಮ್ ಎ ಗಝಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಖಂಡ ಕರ್ನಾಟಕ ಒಡಿದರೆ ಆಲೂರ ವೆಂಕಟರಾಯರ ಎದೆಒಡೆದಂತೆ. ಸಾಹಿತ್ಯದ ಕೊರೆತೆ ಇದ್ದವರು ಮಾತ್ರ ಇಬ್ಬಾಗ ಬಗ್ಗೆ ಮಾತನಾಡುತ್ತಾರೆ. ಅದರ ಬದಲು ನ್ಯಾಯ ನೀಡುವಂತೆ ಹೋರಾಟ ಮಾಡಿ ಗಡಿ ಭಾಗಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಸರಕಾರಕ್ಕೆ ಒತ್ತಾಯಿಸಬೇಕು. ಜತೆಗೆ ನಮ್ಮ ಪೂರ್ವಿಕರು ಹಾಕಿಕೊಟ್ಟ ಅಖಂಡ ಕರ್ನಾಟಕ ಮಾರ್ಗದಲ್ಲಿ ನಡೆಯಬೇಕಾದರೆ ಸಾಹಿತ್ಯ ಓದಬೇಕು ಎಂದರು.
ಸದ್ಯ ರೆಸಾರ್ಟ್ ಕಿತ್ತಾಟಗಳು ಹೆಚ್ಚಾಗಿವೆ. ಹಿಂದಿನ ರಾಜಕಾರಣಿಗಳು ವಿಧಾನಸಭೆಯಲ್ಲಿ ಮಾತನಾಡುವಾಗ ರಾಮಾಯಣ, ಮಹಾಭಾರತ, ವಚನಗಳನ್ನು ಉದಾಹರಣೆ ನೀಡಿ ಮಾತನಾಡುವ ಮೂಲಕ ರಾಜಕೀಯದಲ್ಲಿ ಸಾಹಿತ್ಯ ಬೆರೆಸುತ್ತಿದ್ದರು. ಆದರೆ ಇಂದು ಗಲಾಟೆ ಎಬ್ಬಿಸಲು ಮಾತ್ರ ಸೀಮಿತ ಆಗಿದ್ದಾರೆ ಎಂದು ಕುಟುಕಿದರು.
ಪತ್ರಕರ್ತ ಬಸವರಾಜ ಆನೆಗುಂದಿ ಮಾತನಾಡಿ, ಇಂದಿನ ಯುವ ಜನಾಂಗ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿದ್ದಾರೆ. ಬದಲಿಗೆ ಓದುವ ಅಭಿರುಚಿ ಬೆಳಸಿಕೊಳ್ಳಬೇಕು. ಕಾಂತ್ರಿ ಪ್ರಕಾಶನದ ಕಾರ್ಯಕ್ರಮ ಧಾರವಾಡಕ್ಕೆ ಮಾತ್ರ ಸೀಮಿತ ಆಗದೆ ರಾಜ್ಯದ ತುಂಬ ಪಸರಿಸಬೇಕು ಎಂದು ಸಲಹೆ ನೀಡಿದರು.
ಲೇಖಕಿ ಶ್ರೀದೇವಿ ಕೆರೆಮನೆ ಅವರ 'ಅಲೆಯೊಳಗಿನ ಮೌನ' ಗಝಲ್ ಕೃತಿ ಬಿಡುಗಡೆ ಮಾಡಿದ ಸಾಹಿತಿ ವಿನಯ ಒಕ್ಕುಂದ ಮಾತನಾಡಿ, ಗಝಲ್ಗಳಳಿಗೆ ತನ್ನದೇ ಆದ ಇತಿಹಾಸವಿದೆ. ವೈಯಕ್ತಿಕವಾಗಿದ್ದ ಗಝಲ್ಗಳು ಇಂದು ಸಾರ್ವತ್ರಿಕ ರೂಪ ಪಡೆಯುವ ಮೂಲಕ ಹೊಸ ಸಾಹಿತ್ಯ ಪ್ರಕಾರ ಹುಟ್ಟು ಹಾಕಿದೆ. ಸದ್ಯ ಯುವ ಸಾಹಿತಿಗಳು ಗಝಲ್ಗಳಿಗೆ ಮಾರುಹೋಗಿ ಉತ್ತಮ ಗಝಲ್ಗಳನ್ನು ಸೃಷ್ಟಿಸುತಿದ್ದಾರೆ. ಶ್ರೀದೆವಿ ಅವರ ಗಝಲ್ಗಳು ಉತ್ತಮವಾಗಿ ಮೂಡಿ ಬಂದಿವೆ ಎಂದರು.
ಲೇಖಕಿ ಶ್ರೀದೆವಿ ಕೆರೆಮನೆ ಮಾತನಾಡಿ, ಧಾರವಾಡದಲ್ಲಿ ನನ್ನ ಗಝಲ್ ಕೃತಿ ಬಿಡುಗಡೆ ಆಗಿದ್ದು ಸಂತಸ ತಂದಿದೆ ಎಂದು ಕ್ರಾಂತಿ ಪ್ರಕಾಶನಕ್ಕೆ ಧನ್ಯವಾದ ತಿಳಿಸಿದರು.
ಸಾಹಿತಿ ಡಾ.ಸಿದ್ಧರಾಮ ಕಾರಣಿಕ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಕ್ರಾಂತಿ ಪ್ರಕಾಶನದಿಂದ ಮುಂಬರುವ ದಿನಗಳಲ್ಲಿ ಗಝಲ್ ಕಮ್ಮಟ ಸೇರಿದಂತೆ ಇತರ ಕಾರ್ಯಕ್ರಮ ಹಮ್ಮಿಕೊಂಡು ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಇದೇ ವೇಳೆ ನಡೆದ 'ಸಮಕಾಲೀನತೆಗೆ ಸಾಹಿತ್ಯ ಸ್ಪಂದನೆ' ಕುರಿತು ಸಂವಾದಲ್ಲಿ ಸಾಹಿತಿ ವಿನಯ ಒಕ್ಕುಂದ ಸಭೀಕರ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿದರು. ನಂತರ ನಡೆದ ಕವಿಗೋಷ್ಠಿ ಹಾಗೂ ತಾಲೀಮ್ ಎ ಗಝಲ್ನಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಯುವ ಕವಿಗಳು ಕವಿತೆಗಳನ್ನು ಓದಿದರು.
ಸಾಹಿತಿ ರಾಜಶೇಖರ ಮಠಪತಿ, ಡಾ.ಎ.ಆರ್.ಮದನಕುಮಾರ, ಡಾ.ಬಸು ಬೇವಿನಗಿಡದ, ರಾಜಕುಮಾರ ಮಡಿವಾಳರ, ಮೆಹಬೂಬ್ ನದಾಫ್ ಇತರರಿದ್ದರು. ಜೀವನ್ ಎಸ್. ಪ್ರಾರ್ಥಿಸಿದರು. ಸುರೇಶ ಕೊರಕಪ್ಪ ಸ್ವಾಗತಿಸಿದರು. ಶರಣಪ್ಪ ಚಿಕ್ಕನಗೌಡ ನಿರೂಪಿಸಿದರು. ಸೋಮು ರೆಡ್ಡಿ ವಂದಸಿದರು.
ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಭಾನುವಾರ ಹಮ್ಮಿಕೊಂಡ ಕ್ರಾಂತಿ ಪ್ರಕಾಶನದ ಸಾಹಿತ್ಯ -ಸಂಕ್ರಾಂತಿ -2019ರ ಪುಸ್ತಕ ಬಿಡುಗಡೆ, ಸಾಹಿತ್ಯ-ಸಂವಾದ, ಕವಿಗೋಷ್ಠಿ, ತಾಲೀಮ್ ಎ ಗಝಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಖಂಡ ಕರ್ನಾಟಕ ಒಡಿದರೆ ಆಲೂರ ವೆಂಕಟರಾಯರ ಎದೆಒಡೆದಂತೆ. ಸಾಹಿತ್ಯದ ಕೊರೆತೆ ಇದ್ದವರು ಮಾತ್ರ ಇಬ್ಬಾಗ ಬಗ್ಗೆ ಮಾತನಾಡುತ್ತಾರೆ. ಅದರ ಬದಲು ನ್ಯಾಯ ನೀಡುವಂತೆ ಹೋರಾಟ ಮಾಡಿ ಗಡಿ ಭಾಗಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಸರಕಾರಕ್ಕೆ ಒತ್ತಾಯಿಸಬೇಕು. ಜತೆಗೆ ನಮ್ಮ ಪೂರ್ವಿಕರು ಹಾಕಿಕೊಟ್ಟ ಅಖಂಡ ಕರ್ನಾಟಕ ಮಾರ್ಗದಲ್ಲಿ ನಡೆಯಬೇಕಾದರೆ ಸಾಹಿತ್ಯ ಓದಬೇಕು ಎಂದರು.
ಸದ್ಯ ರೆಸಾರ್ಟ್ ಕಿತ್ತಾಟಗಳು ಹೆಚ್ಚಾಗಿವೆ. ಹಿಂದಿನ ರಾಜಕಾರಣಿಗಳು ವಿಧಾನಸಭೆಯಲ್ಲಿ ಮಾತನಾಡುವಾಗ ರಾಮಾಯಣ, ಮಹಾಭಾರತ, ವಚನಗಳನ್ನು ಉದಾಹರಣೆ ನೀಡಿ ಮಾತನಾಡುವ ಮೂಲಕ ರಾಜಕೀಯದಲ್ಲಿ ಸಾಹಿತ್ಯ ಬೆರೆಸುತ್ತಿದ್ದರು. ಆದರೆ ಇಂದು ಗಲಾಟೆ ಎಬ್ಬಿಸಲು ಮಾತ್ರ ಸೀಮಿತ ಆಗಿದ್ದಾರೆ ಎಂದು ಕುಟುಕಿದರು.
ಪತ್ರಕರ್ತ ಬಸವರಾಜ ಆನೆಗುಂದಿ ಮಾತನಾಡಿ, ಇಂದಿನ ಯುವ ಜನಾಂಗ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿದ್ದಾರೆ. ಬದಲಿಗೆ ಓದುವ ಅಭಿರುಚಿ ಬೆಳಸಿಕೊಳ್ಳಬೇಕು. ಕಾಂತ್ರಿ ಪ್ರಕಾಶನದ ಕಾರ್ಯಕ್ರಮ ಧಾರವಾಡಕ್ಕೆ ಮಾತ್ರ ಸೀಮಿತ ಆಗದೆ ರಾಜ್ಯದ ತುಂಬ ಪಸರಿಸಬೇಕು ಎಂದು ಸಲಹೆ ನೀಡಿದರು.
ಲೇಖಕಿ ಶ್ರೀದೇವಿ ಕೆರೆಮನೆ ಅವರ 'ಅಲೆಯೊಳಗಿನ ಮೌನ' ಗಝಲ್ ಕೃತಿ ಬಿಡುಗಡೆ ಮಾಡಿದ ಸಾಹಿತಿ ವಿನಯ ಒಕ್ಕುಂದ ಮಾತನಾಡಿ, ಗಝಲ್ಗಳಳಿಗೆ ತನ್ನದೇ ಆದ ಇತಿಹಾಸವಿದೆ. ವೈಯಕ್ತಿಕವಾಗಿದ್ದ ಗಝಲ್ಗಳು ಇಂದು ಸಾರ್ವತ್ರಿಕ ರೂಪ ಪಡೆಯುವ ಮೂಲಕ ಹೊಸ ಸಾಹಿತ್ಯ ಪ್ರಕಾರ ಹುಟ್ಟು ಹಾಕಿದೆ. ಸದ್ಯ ಯುವ ಸಾಹಿತಿಗಳು ಗಝಲ್ಗಳಿಗೆ ಮಾರುಹೋಗಿ ಉತ್ತಮ ಗಝಲ್ಗಳನ್ನು ಸೃಷ್ಟಿಸುತಿದ್ದಾರೆ. ಶ್ರೀದೆವಿ ಅವರ ಗಝಲ್ಗಳು ಉತ್ತಮವಾಗಿ ಮೂಡಿ ಬಂದಿವೆ ಎಂದರು.
ಲೇಖಕಿ ಶ್ರೀದೆವಿ ಕೆರೆಮನೆ ಮಾತನಾಡಿ, ಧಾರವಾಡದಲ್ಲಿ ನನ್ನ ಗಝಲ್ ಕೃತಿ ಬಿಡುಗಡೆ ಆಗಿದ್ದು ಸಂತಸ ತಂದಿದೆ ಎಂದು ಕ್ರಾಂತಿ ಪ್ರಕಾಶನಕ್ಕೆ ಧನ್ಯವಾದ ತಿಳಿಸಿದರು.
ಸಾಹಿತಿ ಡಾ.ಸಿದ್ಧರಾಮ ಕಾರಣಿಕ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಕ್ರಾಂತಿ ಪ್ರಕಾಶನದಿಂದ ಮುಂಬರುವ ದಿನಗಳಲ್ಲಿ ಗಝಲ್ ಕಮ್ಮಟ ಸೇರಿದಂತೆ ಇತರ ಕಾರ್ಯಕ್ರಮ ಹಮ್ಮಿಕೊಂಡು ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಇದೇ ವೇಳೆ ನಡೆದ 'ಸಮಕಾಲೀನತೆಗೆ ಸಾಹಿತ್ಯ ಸ್ಪಂದನೆ' ಕುರಿತು ಸಂವಾದಲ್ಲಿ ಸಾಹಿತಿ ವಿನಯ ಒಕ್ಕುಂದ ಸಭೀಕರ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿದರು. ನಂತರ ನಡೆದ ಕವಿಗೋಷ್ಠಿ ಹಾಗೂ ತಾಲೀಮ್ ಎ ಗಝಲ್ನಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಯುವ ಕವಿಗಳು ಕವಿತೆಗಳನ್ನು ಓದಿದರು.
ಸಾಹಿತಿ ರಾಜಶೇಖರ ಮಠಪತಿ, ಡಾ.ಎ.ಆರ್.ಮದನಕುಮಾರ, ಡಾ.ಬಸು ಬೇವಿನಗಿಡದ, ರಾಜಕುಮಾರ ಮಡಿವಾಳರ, ಮೆಹಬೂಬ್ ನದಾಫ್ ಇತರರಿದ್ದರು. ಜೀವನ್ ಎಸ್. ಪ್ರಾರ್ಥಿಸಿದರು. ಸುರೇಶ ಕೊರಕಪ್ಪ ಸ್ವಾಗತಿಸಿದರು. ಶರಣಪ್ಪ ಚಿಕ್ಕನಗೌಡ ನಿರೂಪಿಸಿದರು. ಸೋಮು ರೆಡ್ಡಿ ವಂದಸಿದರು.