ಆ್ಯಪ್ನಗರ

ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸೊರಟೂರಗೆ ಆಹ್ವಾನ

ಹುಬ್ಬಳ್ಳಿ : ಕುಂದಗೋಳ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.17 ರಂದು ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಹಾಗೂ ಪ್ರಾಚಾರ್ಯ ಎಫ್‌.ಬಿ. ಸೊರಟೂರ ಅವರಿಗೆ ತಾಲೂಕು ಕಸಾಪದಿಂದ ಬುಧವಾರ ಅಧಿಕೃತ ಆಹ್ವಾನ ನೀಡಲಾಯಿತು.

Vijaya Karnataka 22 Nov 2018, 5:00 am
ಹುಬ್ಬಳ್ಳಿ : ಕುಂದಗೋಳ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.17 ರಂದು ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಹಾಗೂ ಪ್ರಾಚಾರ್ಯ ಎಫ್‌.ಬಿ. ಸೊರಟೂರ ಅವರಿಗೆ ತಾಲೂಕು ಕಸಾಪದಿಂದ ಬುಧವಾರ ಅಧಿಕೃತ ಆಹ್ವಾನ ನೀಡಲಾಯಿತು.
Vijaya Karnataka Web invitation to soratura elected as president
ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸೊರಟೂರಗೆ ಆಹ್ವಾನ


ಕುಂದಗೋಳ ತಾಲೂಕು ಕಸಾಪ ಪದಾಧಿಕಾರಿಗಳು ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ನೇತೃತ್ವದಲ್ಲಿ ಚಿಕ್ಕನರ್ತಿಗೆ ತೆರಳಿ ಎಫ್‌.ಬಿ. ಸೊರಟೂರು ಹಾಗೂ ನಿರ್ಮಲಾ ಸೊರಟೂರು ಅವರನ್ನು ಸನ್ಮಾನಿಸಿ ಸಮ್ಮೇಳನಕ್ಕೆ ಆಹ್ವಾನಿಸಿದರು.

ಸನ್ಮಾನ ಸ್ವೀಕರಿಸಿದ ಎಂ.ಪಿ. ಸೊರಟೂರ ಅವರು, ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದನ್ನು ಒಪ್ಪಿಕೊಂಡರಲ್ಲದೇ, ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಕೆ.ಎಸ್‌.ಕೌಜಲಗಿ, ಎಸ್‌.ಎಸ್‌.ದೊಡ್ಡಮನಿ, ಕುಂದಗೋಳ ತಾಲೂಕು ಕಸಾಪ ಗೌರವಾಧ್ಯಕ್ಷ ಎ.ಬಿ. ಉಪ್ಪಿನ, ಅಧ್ಯಕ್ಷ ಎಸ್‌.ಎನ್‌. ಅರಳಿಕಟ್ಟಿ, ಗೌರವ ಕಾರ್ಯದರ್ಶಿ ರಮೇಶ ಅತ್ತಿಗೇರತಿ, ಇತರ ಪದಾಧಿಕಾರಿಗಳಾದ ಎಂ.ಟಿ. ಅಕ್ಕಿ, ಸಿ.ಬಿ.ಪಾಟೀಲ, ಇಂಗಳಗಿ ಗ್ರಾಪಂ ಅಧ್ಯಕ್ಷ ಬಿಸೆರೊಟ್ಟಿ, ಅಪ್ಪಣ್ಣ ಹಿರೇಗೌಡ್ರ, ವಿರೇಶ ಬಡಿಗೇರ, ಸಿ.ಜಿ.ಸಾಹೇಬಗೌಡ್ರ, ಮಂಜುನಾಥ ಸಂಗೊಳ್ಳಿ, ಕಲ್ಮೇಶ ಬಿಳೇಬಾಳೆ, ಜಗದೀಶ ಬಿಳೇಬಾಳೆ, ಎಲ್‌.ಎಸ್‌. ಹಿರೇಗೌಡರ, ಲಕ್ಷ್ಮೇಬಾಯಿ ಹಾವಣಗಿ, ಪದ್ಮಾವತಿ ಸಂಗೊಳ್ಳಿ ಸೇರಿದಂತೆ ಅನೇಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ