ಆ್ಯಪ್ನಗರ

ಚುನಾವಣೆಯಲ್ಲಿ ಗೆಲ್ಲೋದು ಹಣಬಲವೋ, ಜಲಬಲವೋ

ಹುಬ್ಬಳ್ಳಿ : ಕುಂದಗೋಳ ಉಪಚುನಾವಣೆಯಲ್ಲಿ ಡಿಕೆಶಿ ಹಣಬಲ ಗೆಲ್ಲುತ್ತೋ ಅಥವಾ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಜನಬಲ ಗೆಲ್ಲುತ್ತೋ ಎಂಬುದನ್ನು ನಾವು ಒಂದು ಕೈ ನೋಡಿಯೇ ಬಿಡುತ್ತೇವೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

Vijaya Karnataka 13 May 2019, 5:00 am
ಹುಬ್ಬಳ್ಳಿ : ಕುಂದಗೋಳ ಉಪಚುನಾವಣೆಯಲ್ಲಿ ಡಿಕೆಶಿ ಹಣಬಲ ಗೆಲ್ಲುತ್ತೋ ಅಥವಾ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಜನಬಲ ಗೆಲ್ಲುತ್ತೋ ಎಂಬುದನ್ನು ನಾವು ಒಂದು ಕೈ ನೋಡಿಯೇ ಬಿಡುತ್ತೇವೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
Vijaya Karnataka Web is it possible to win the election whether it is water or not
ಚುನಾವಣೆಯಲ್ಲಿ ಗೆಲ್ಲೋದು ಹಣಬಲವೋ, ಜಲಬಲವೋ


ಕುಂದಗೋಳ ತಾಲೂಕಿನ ಅದರಗುಂಚಿ ಗ್ರಾಮಕ್ಕೆ ಶನಿವಾರ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಈ ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಗಳ ನಾಯಕರು ಹಣ ಹೂಡಿ ಗೆಲ್ಲಲು ಬಂದಿದ್ದಾರೆ. ಜನರು ಬುದ್ದಿವಂತರಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ'' ಎಂದರು.

''ರಾಜ್ಯದ 186 ತಾಲೂಕಿನ ಪೈಕಿ 125 ತಾಲೂಕಿಗಳಲ್ಲಿ ಭೀಕರ ಬರಗಾಲವಿದೆ. ಆದರೆ ಮೈತ್ರಿ ಸರಕಾರ ಇದರ ನಿರ್ವಹಣೆಯಲ್ಲಿ ವಿಫಲವಾಗಿದೆ. ಅಲ್ಲದೆ, ಸಮಗ್ರ ಜವಾಬ್ದಾರಿ ಹೊರಬೇಕಾದ ಸಿಎಂ ಕುಮಾರಸ್ವಾಮಿ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರಿಂದ ರೋಸಿ ಹೋಗಿರುವ ರಾಜ್ಯದ ಜನತೆ ಬಿಜೆಪಿ ಬೆಂಬಲಿಸುತ್ತಿದ್ದಾರೆ. ಮೇ 23ರ ಫಲಿತಾಂಶದ ನಂತರ ಮೈತ್ರಿ ಸರಕಾರ ಬೀಳಲಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ