ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿಕೊರೊನಾ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿಹಾವಳಿ ಮಾಡದಿದ್ದರೂ, ಲಾಕ್ಡೌನ್ನಿಂದ ಜನಜೀವನ ಮಾತ್ರ ತತ್ತರಿಸಿ ಹೋಗಿದೆ. ಈಗಷ್ಟೇ ಹರ, ಶಿವ ಎಂದು ವ್ಯಾಪಾರ ವಹಿವಾಟು ಆರಂಭಗೊಂಡರೂ ಸಾಮಾನ್ಯ ಜನರಿಗೆ ಕೈಯಲ್ಲಿಕೆಲಸವಿಲ್ಲ. ದಿನನಿತ್ಯದ ಜೀವನ ನಡೆಸುವುದು ಹೇಗೆ ಎನ್ನುವ ಚಿಂತೆಯಲ್ಲಿದಿನ ನೂಕುತ್ತಿದ್ದಾರೆ. ಇಂತಹುದರಲ್ಲಿಪಾಲಿಕೆ ಶೇ.15ರಿಂದ 20ರಷ್ಟು ಆಸ್ತಿಕರ ಹೆಚ್ಚಳ ಮಾಡಿ ಹೊರೆ ಹಾಕಿರುವುದು ಎಷ್ಟು ಸಮಂಜಸ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿದೆ. ಈ ನಡುವೆ ನಿಯಮಾನುಸಾರವೇ ಆಸ್ತಿಕರ ಹೆಚ್ಚಳ ಮಾಡಲಾಗಿದೆ ಎಂದು ಪಾಲಿಕೆ ಹಾಗೂ ಜಿಲ್ಲಾಉಸ್ತುವಾರಿ ಸಚಿವರು ಹೇಳುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿನಿಯಮಗಳನ್ನು ಬದಿಗೊತ್ತಿ ಜನಜೀವನಕ್ಕೆ ಏನೆಲ್ಲಾಅನುಕೂಲ ಮಾಡಿಕೊಡಲು ಸರಕಾರಗಳೇ ಮುಂದಾಗಿವೆ. ಹೀಗಿರುವಾಗ ಆಸ್ತಿಕರ ಹೆಚ್ಚಳಕ್ಕಷ್ಟೇ ನಿಯಮ ಅಳವಡಿಸುವುದು ಸರಿಯಾದ ಕ್ರಮವಲ್ಲ. ಕೂಡಲೇ ಹಿಂಪಡೆದು ಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯ ಅವಳಿ ನಗರದ ಸಾರ್ವಜನಿಕರಿಂದ ಕೇಳಿ ಬಂದಿದೆ.
ಸಂಪನ್ಮೂಲ ಹೆಚ್ಚಳಕ್ಕೆ ಬೇರೆ ಮಾರ್ಗವಿಲ್ಲವೇ ?
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿಕೊರೊನಾ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿಹಾವಳಿ ಮಾಡದಿದ್ದರೂ, ಲಾಕ್ಡೌನ್ನಿಂದ ಜನಜೀವನ ಮಾತ್ರ ತತ್ತರಿಸಿ ಹೋಗಿದೆ. ಈಗಷ್ಟೇ ಹರ, ಶಿವ ಎಂದು ವ್ಯಾಪಾರ ವಹಿವಾಟು ಆರಂಭಗೊಂಡರೂ ಸಾಮಾನ್ಯ ಜನರಿಗೆ ಕೈಯಲ್ಲಿಕೆಲಸವಿಲ್ಲ. ದಿನನಿತ್ಯದ ಜೀವನ
Vijaya Karnataka 3 Jun 2020, 5:26 pm