ಆ್ಯಪ್ನಗರ

ಅವಳಿನಗರದಲ್ಲಿ ದಿನವಿಡೀ ಮಳೆ ರಗಳೆ

ಹುಬ್ಬಳ್ಳಿ/ಧಾರವಾಡ : ಹು-ಧಾ ಮಹಾನಗರದಲ್ಲಿ ಸೋಮವಾರ ಇಡೀ ದಿನ ನಿರಂತರವಾಗಿ ಸುರಿದ ಮಳೆಯಿಂದ ರಸ್ತೆಗಳೆಲ್ಲ ಜಲಾವೃತಗೊಂಡು ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸಿದರು.

Vijaya Karnataka 30 Jul 2019, 5:00 am
ಹುಬ್ಬಳ್ಳಿ/ಧಾರವಾಡ : ಹು-ಧಾ ಮಹಾನಗರದಲ್ಲಿ ಸೋಮವಾರ ಇಡೀ ದಿನ ನಿರಂತರವಾಗಿ ಸುರಿದ ಮಳೆಯಿಂದ ರಸ್ತೆಗಳೆಲ್ಲ ಜಲಾವೃತಗೊಂಡು ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸಿದರು.
Vijaya Karnataka Web DRW-RAIN7
ಧಾರವಾಡದಲ್ಲಿ ಸೋಮವಾರ ಸುರಿದ ಮಳೆಯಿಂದ ಟೋಲ್‌ನಾಕಾ ರಸ್ತೆ ಮಳೆ ನೀರಿನಿಂದ ಆವೃತ್ತವಾಗಿರುವುದು.


ಬೆಳಗ್ಗೆಯಿಂದಲೇ ಆರಂಭಗೊಂಡ ಜಿಟಿಜಿಟಿ ಮಳೆ ಮಧ್ಯಾಹ್ನದ ಹೊತ್ತಿಗೆ ಜೋರಾಗಿಯೇ ಸುರಿಯಿತು. ಇದರಿಂದ ಶಾಲೆ, ಕಾಲೇಜು ವಿದ್ಯಾರ್ಥಿಗಳು, ನೌಕರರು, ವ್ಯಾಪಾರಸ್ಥರು ಮನೆ ತಲುಪಲು ಹೆಣಗಾಡಿದರು. ನಿರಂತರ ಮಳೆಯಿಂದ ಹುಬ್ಬಳ್ಳಿಯಲ್ಲಿನ ಎಸ್‌.ಎಂ. ಕೃಷ್ಣ ನಗರ, ಗುಂಜಾಳ ಪ್ಲಾಟ್‌, ಸೋನಿಯಾಗಾಂಧಿ ನಗರ, ಮಂಟೂರ ರಸ್ತೆ ಸೇರಿದಂತೆ ಬಹುತೇಕ ತಗ್ಗು ಪ್ರದೇಶದಲ್ಲಿನ ರಸ್ತೆಗಳು ಜಲಾವೃತಗೊಂಡಿದ್ದವು. ಹುಬ್ಬಳ್ಳಿ ಹಳೇ ಬಸ್‌ನಿಲ್ದಾಣ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬಿಆರ್‌ಟಿಎಸ್‌ ಬಸ್‌ ಕಾರಿಡಾರ್‌ನಲ್ಲಿ ನೀರು ನಿಂತು ಕೆರೆಯಂತಾಗಿತ್ತು. ಅವಳಿನಗರದಾದ್ಯಂತ ಉಂಟಾಗಿರುವ ಪಾಟ್‌ಹೋಲ್‌ಗಳಿಂದ ವಾಹನ ಸವಾರರ ಸಂಚಾರಕ್ಕೆ ಸಮಸ್ಯೆಯಾಗಿತ್ತು.

ಧಾರವಾಡ ನಗರದ ತಗ್ಗು ಪ್ರದೇಶಗಳಾದ ಜನ್ನತ ನಗರ, ಶ್ರೀರಾಮನಗರ, ಸಾರಸ್ವತಪುರ, ತೇಜಶ್ವಿನಿನಗರದ ರೈಲ್ವೆ ಬ್ರಿಜ್‌ ಸೇರಿದಂತೆ ಇತರ ತಗ್ಗು ಪ್ರದೇಶದಲ್ಲಿ ಮಳೆ ನೀರು ನುಗ್ಗಿದ್ದರಿಂದ ಆತಂಕದ ಸ್ಥಿತಿ ನಿರ್ಮಾಣ ಆಗಿತ್ತು.

ಅವಳಿನಗರದ ಮಾರುಕಟ್ಟೆಯ ಅಂಗಡಿಕಾರರು, ವಿವಿಧ ಗ್ರಾಮಗಳಿಗೆ ತೆರಳುವವರು ಮಳೆಯಿಂದ ತೊಂದರೆ ಅನುಭವಿಸಿದರು. ಧಾರಾಕಾರ ಮಳೆಗೆ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಇಲ್ಲಿನ ಟೋಲ್‌ನಾಕಾ ಹಾಗೂ ದೈವಜ್ಞಾ ಕಲ್ಯಾಣ ಮಂಟಪದ ಮುಂಭಾಗ ರಸ್ತೆ ನೀರಿನಿಂದ ಕರೆಯಂತಾಗಿತ್ತು. ಮಳೆ ನೀರಿನಲ್ಲಿ ಮುಂದೆ ಹೋಗಲು ಸಾಧ್ಯವಾಗದೇ ಚಿಗರಿ ಬಸ್‌ ಸೇರಿಂತೆ ಇತರರು ವಾಹನ ಸವಾರರರು ಪರದಾಡಿದರು. ಹೀಗಾಗಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಸಂಚಾರ ವ್ಯವಸ್ಥೆ ಅಸ್ಥವ್ಯಸ್ಥಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ