ಆ್ಯಪ್ನಗರ

ಮಳೆಗೆ ನೆಲಕಚ್ಚಿವೆ 23 ಮನೆ

ಧಾರವಾಡ : ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನ ತತ್ತರಿಸಿದ್ದು, ಈವರೆಗೆ 23 ಮನೆಗಳು ನೆಲಕಚ್ಚಿವೆ. ಯಾವುದೇ ಪ್ರಾಣಾಪಾಯವಾದ ಬಗ್ಗೆ ವರದಿಯಾಗಿಲ್ಲ.

Vijaya Karnataka 31 Jul 2019, 5:00 am
ಧಾರವಾಡ : ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನ ತತ್ತರಿಸಿದ್ದು, ಈವರೆಗೆ 23 ಮನೆಗಳು ನೆಲಕಚ್ಚಿವೆ. ಯಾವುದೇ ಪ್ರಾಣಾಪಾಯವಾದ ಬಗ್ಗೆ ವರದಿಯಾಗಿಲ್ಲ.
Vijaya Karnataka Web DRW-30SM-1
ಧಾರವಾಡ ಗವಳಿಗಲ್ಲಿಯಲ್ಲಿ ನೆಲಕ್ಕುರುಳಿದ ಮನೆ.


ಧಾರವಾಡ ತಾಲೂಕಿನಲ್ಲಿ ಸುಮಾರು 7 ಮನೆಗಳು, ಕಲಘಟಗಿ ತಾಲೂಕಿನಲ್ಲಿ 7 ಮನೆಗಳು, ಹುಬ್ಬಳ್ಳಿ ಶಹರದಲ್ಲಿ 8 ಮನೆಗಳು, ಗ್ರಾಮೀಣ ಭಾಗದಲ್ಲಿ 1 ಮನೆ ನೆಲಕಚ್ಚಿವೆ ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಾಶ ವೈ.ಎಚ್‌. ತಿಳಿಸಿದ್ದಾರೆ.

ಹೆಚ್ಚು ಮಳೆಯಾದ ಕಾರಣ ಜಮೀನುಗಳು ಜಲಾವೃತಗೊಂಡಿವೆ, ಮಳೆ ಆಬ್ಬರ ಜೋರಾಗಿದ್ದು ಕೆಲಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ, ನಗರದಲ್ಲಿ ಮಳೆಯಿಂದ ಹಲವೆಡೆ ಕಂಪೌಂಡ್‌ ಗೋಡೆಗಳು ಕುಸಿದಿವೆ. ಅಲ್ಲದೇ ಗವಳಿಗಲ್ಲಿಯ ನಿವಾಸಿ ಇಮಾಮ್‌ ಮಟವಾಲೆ ಎಂಬುವರ ಮನೆ ಸಂಪೂರ್ಣವಾಗಿ ನೆಲಕ್ಕುರಳಿದೆ, ಉಳಿದಂತೆ ಮಾಳಮಡ್ಡಿ, ಹಾಗೂ ಹುಬ್ಬಳ್ಳಿಯ ಕೇಶ್ವಪೂರದಲ್ಲಿ ಮರಗಳು ನೆಲಕ್ಕೆ ಬಿದ್ದಿದ್ದು, ಯಾವುದೇ ಪ್ರಾಣ ಹಾನಿ ಸಂಬವಿಸಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ